‘ಶ್ಯಾಮಪ್ರಸಾದ್ ಮುಖರ್ಜಿಯವರ ಬಗ್ಗೆ ಗೌರವವಿದೆ. ಆದರೆ, ನಗರದ ಉದ್ಯಾನಕ್ಕೂ ಉತ್ತರ ಭಾರತೀಯರ ಹೆಸರೇ ಬೇಕೇ’ ಎಂದು ಪ್ರಶ್ನಿಸಿರುವ ಅವರು, ‘2015ರಲ್ಲಿ ಆಗಿನ ಸಂಸದ ಅನಂತಕುಮಾರ್ ಈ ಉದ್ಯಾನವನ್ನು ಉದ್ಘಾಟಿಸಿದ್ದರು. ಅವರ ಹೆಸರನ್ನಾದರೂ ಇಡಬಹುದಿತ್ತು ಅಥವಾ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಇದೇ ಉದ್ಯಾನಕ್ಕೆ ವಾಯುವಿಹಾರಕ್ಕೆ ಬರುತ್ತಿದ್ದರು. ಅವರ ಹೆಸರಿನಿಂದ ಈ ಉದ್ಯಾನವನ್ನು ಕರೆಯಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.