<p><strong>ಬೆಂಗಳೂರು</strong>: ಆರತಿ ಸ್ಕ್ಯಾನ್ಸ್ ಆ್ಯಂಡ್ ಲ್ಯಾಬ್ಸ್ ಜಯನಗರ ಕೇಂದ್ರದಲ್ಲಿ ‘ವೈಟಲ್ ಇನ್ಸೈಟ್ಸ್’ ಆರಂಭಿಸಿದೆ.</p>.<p>ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮೀರಿ, ವ್ಯಕ್ತಿಯ ದೇಹವನ್ನು ಮೂರು ಆಯಾಮಗಳಲ್ಲಿ ‘ವೈಟಲ್ ಇನ್ಸೈಟ್ಸ್’ ಪರೀಕ್ಷೆಗೆ ಒಳಪಡಿಸಲಿದೆ. ದೇಹದ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ (ಎಂಆರ್ಐ), ಡಿಇಎಕ್ಸ್ಎ ಸ್ಕ್ಯಾನ್, ವಿಒ₂ ಮ್ಯಾಕ್ಸ್ ಪರೀಕ್ಷೆ, ರಕ್ತ ಪರೀಕ್ಷೆಯ ಸಮಗ್ರ ವಿಶ್ಲೇಷಣೆ, ದೈಹಿಕ ಸಾಮರ್ಥ್ಯ ಮತ್ತು ಸಮತೋಲನದ ಮೌಲ್ಯಮಾಪನ ನಡೆಸಲಿದೆ ಎಂದು ವಿಕಿರಣ ತಜ್ಞ, ಆರತಿ ಸ್ಕ್ಯಾನ್ಸ್ ಆ್ಯಂಡ್ ಲ್ಯಾಬ್ಸ್ನ ನಿರ್ದೇಶಕ ಡಾ. ಪ್ರಸನ್ನ ವಿಘ್ನೇಶ್ ತಿಳಿಸಿದರು.</p>.<p>‘ಬೆಂಗಳೂರು ಕೇಂದ್ರದಲ್ಲಿ 'ವೈಟಲ್ ಇನ್ಸೈಟ್ಸ್’ ಮೂಲಕ ದತ್ತಾಂಶ ಆಧಾರಿತ ಕಾರ್ಯಕ್ಷಮತೆ ಮತ್ತು ವ್ಯಕ್ತಿಗಳು ಹೆಚ್ಚು ವರ್ಷ ಆರೋಗ್ಯದಿಂದ ಜೀವಿಸಲು ನೆರವಾಗುವ ಮಾಹಿತಿಯನ್ನು ನೀಡಲಾಗುತ್ತದೆ. ಸ್ಪಷ್ಟತೆ, ನಿಯಂತ್ರಣ ಮತ್ತು ಆತ್ಮವಿಶ್ವಾಸದಿಂದ ಬದುಕಲು ವ್ಯಕ್ತಿಗಳನ್ನು ಸಬಲೀಕರಣಗೊಳಿಸಲಾಗುತ್ತದೆ’ ಎಂದರು.</p>.<p>ರಾಯಲ್ ಚಾಲೆಂಜರ್ಸ್ ತಂಡದ ದೈಹಿಕ ಕಾರ್ಯಕ್ಷಮತೆ ತರಬೇತುದಾರ ಬಸು ಶಂಕರ್ ಅವರು ‘ವೈಟಲ್ ಇನ್ಸೈಟ್ಸ್’ ಕೇಂದ್ರ ಉದ್ಘಾಟಿಸಿದರು. ಸಂಸ್ಥೆ ನಿರ್ದೇಶಕರಾದ ಡಾ. ಆರತಿ ಪ್ರಸನ್ನ, ಡಾ. ಅರುಣ್ಕುಮಾರ್ ಗೋವಿಂದರಾಜನ್, ವೈಟಲ್ ಇನ್ಸೈಟ್ಸ್ನ ಮುಖ್ಯಸ್ಥ ಅವ್ನೀಶ್ ಪರೇಖ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆರತಿ ಸ್ಕ್ಯಾನ್ಸ್ ಆ್ಯಂಡ್ ಲ್ಯಾಬ್ಸ್ ಜಯನಗರ ಕೇಂದ್ರದಲ್ಲಿ ‘ವೈಟಲ್ ಇನ್ಸೈಟ್ಸ್’ ಆರಂಭಿಸಿದೆ.</p>.<p>ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮೀರಿ, ವ್ಯಕ್ತಿಯ ದೇಹವನ್ನು ಮೂರು ಆಯಾಮಗಳಲ್ಲಿ ‘ವೈಟಲ್ ಇನ್ಸೈಟ್ಸ್’ ಪರೀಕ್ಷೆಗೆ ಒಳಪಡಿಸಲಿದೆ. ದೇಹದ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ (ಎಂಆರ್ಐ), ಡಿಇಎಕ್ಸ್ಎ ಸ್ಕ್ಯಾನ್, ವಿಒ₂ ಮ್ಯಾಕ್ಸ್ ಪರೀಕ್ಷೆ, ರಕ್ತ ಪರೀಕ್ಷೆಯ ಸಮಗ್ರ ವಿಶ್ಲೇಷಣೆ, ದೈಹಿಕ ಸಾಮರ್ಥ್ಯ ಮತ್ತು ಸಮತೋಲನದ ಮೌಲ್ಯಮಾಪನ ನಡೆಸಲಿದೆ ಎಂದು ವಿಕಿರಣ ತಜ್ಞ, ಆರತಿ ಸ್ಕ್ಯಾನ್ಸ್ ಆ್ಯಂಡ್ ಲ್ಯಾಬ್ಸ್ನ ನಿರ್ದೇಶಕ ಡಾ. ಪ್ರಸನ್ನ ವಿಘ್ನೇಶ್ ತಿಳಿಸಿದರು.</p>.<p>‘ಬೆಂಗಳೂರು ಕೇಂದ್ರದಲ್ಲಿ 'ವೈಟಲ್ ಇನ್ಸೈಟ್ಸ್’ ಮೂಲಕ ದತ್ತಾಂಶ ಆಧಾರಿತ ಕಾರ್ಯಕ್ಷಮತೆ ಮತ್ತು ವ್ಯಕ್ತಿಗಳು ಹೆಚ್ಚು ವರ್ಷ ಆರೋಗ್ಯದಿಂದ ಜೀವಿಸಲು ನೆರವಾಗುವ ಮಾಹಿತಿಯನ್ನು ನೀಡಲಾಗುತ್ತದೆ. ಸ್ಪಷ್ಟತೆ, ನಿಯಂತ್ರಣ ಮತ್ತು ಆತ್ಮವಿಶ್ವಾಸದಿಂದ ಬದುಕಲು ವ್ಯಕ್ತಿಗಳನ್ನು ಸಬಲೀಕರಣಗೊಳಿಸಲಾಗುತ್ತದೆ’ ಎಂದರು.</p>.<p>ರಾಯಲ್ ಚಾಲೆಂಜರ್ಸ್ ತಂಡದ ದೈಹಿಕ ಕಾರ್ಯಕ್ಷಮತೆ ತರಬೇತುದಾರ ಬಸು ಶಂಕರ್ ಅವರು ‘ವೈಟಲ್ ಇನ್ಸೈಟ್ಸ್’ ಕೇಂದ್ರ ಉದ್ಘಾಟಿಸಿದರು. ಸಂಸ್ಥೆ ನಿರ್ದೇಶಕರಾದ ಡಾ. ಆರತಿ ಪ್ರಸನ್ನ, ಡಾ. ಅರುಣ್ಕುಮಾರ್ ಗೋವಿಂದರಾಜನ್, ವೈಟಲ್ ಇನ್ಸೈಟ್ಸ್ನ ಮುಖ್ಯಸ್ಥ ಅವ್ನೀಶ್ ಪರೇಖ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>