<p><strong>ಬೆಂಗಳೂರು</strong>: ಗ್ರಾಮೀಣ ಪ್ರದೇಶದಲ್ಲಿ ಹಲವು ಪ್ರತಿಭಾವಂತ ಮಹಿಳೆಯರು ಮತ್ತು ವಿವಿಧ ಕ್ಷೇತ್ರದ ಸಾಧಕರು ಇದ್ದಾರೆ. ಆದರೆ, ಹಲವರ ಜೀವನ ಚರಿತ್ರೆಗಳು ಪುಸ್ತಕಗಳಲ್ಲಿ ದಾಖಲಾಗುತ್ತಿಲ್ಲ ಎಂದು ವಕೀಲೆ ಹೇಮಲತಾ ಮಹಿಷಿ ಬೇಸರ ವ್ಯಕ್ತಪಡಿಸಿದರು.</p>.<p>ನಗರದ ಚಿತ್ರಕಲಾ ಪರಿಷತ್ನಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಆರ್.ಸುನಂದಮ್ಮ ಅವರ ‘ಎದೆಯ ಪದ’ (ಎಸ್.ಜಿ. ಲಕ್ಷ್ಮೀ ದೇವಮ್ಮ ಅವರ ಆತ್ಮಕಥನ) ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.</p>.<p>ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಮಹಿಳಾ ಸಾಧಕರ ಚರಿತ್ರೆ ಪುಸ್ತಕ ರೂಪದಲ್ಲಿ ದಾಖಲಾದಾಗ ನಗರವಾಸಿಗಳು ಸೇರಿದಂತೆ ಇಡೀ ಸಮಾಜಕ್ಕೆ ಪರಿಚಯವಾಗುತ್ತದೆ. ಆಗ ಅದು ಮಹಿಳಾ ಸಾಹಿತ್ಯ, ಚರಿತ್ರೆಗೆ ಸೇರಿಕೊಳ್ಳುತ್ತದೆ ಎಂದು ಹೇಳಿದರು.</p>.<p>ಜಾನಪದ ಕಲಾವಿದೆಯ ಜೀವನ ಸಾಧನೆಯ ಕುರಿತು ಪುಸ್ತಕ ತಂದಿರುವುದು ಸಂತೋಷದ ಸಂಗತಿ. ಗ್ರಾಮೀಣ ಪ್ರದೇಶದ ಮಹಿಳೆ ತನ್ನ ಪ್ರತಿಭೆಯಿಂದ ಸಾಧನೆ ಮಾಡಿದ್ದಾರೆ ಎಂಬುದು ಈ ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಲಕ್ಷ್ಮೀ ದೇವಮ್ಮ ಜಾನಪದ ಕಲಾವಿದೆಯಾಗಿಯೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯು ದೊರಕಿದೆ. ಅವರ ಸಾಧನೆ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಓದು, ಬರಹ ತಿಳಿಯದ ಹಲವರಿಗೆ ತಮ್ಮ ಆತ್ಮಚರಿತ್ರೆ ಬರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬರೆಯಲು ಗೊತ್ತಿದ್ದರೂ ಕೃತಿ ಬರೆಯುವಷ್ಟು ಬರವಣಿಗೆ ಅವರಲ್ಲಿ ಇರುವುದಿಲ್ಲ. ಅಂತಹ ಸಂದರ್ಧದಲ್ಲಿ ಸಾಧಕರ ಬಾಯಿಯಿಂದಲೇ ಅವರ ಜೀವನ ಚರಿತ್ರೆ ಕೇಳಿಸಿಕೊಂಡು ಮತ್ತೊಬ್ಬರು ಬರೆಯುವುದು ಅದೃಷ್ಟದ ಕೆಲಸ ಎಂದರು.</p>.<p>ಸಾಹಿತಿ ಸಬೀಹಾ ಭೂಮಿಗೌಡ ಮಾತನಾಡಿ, ‘ಸಾಹಿತ್ಯ, ಮಹಿಳಾ ಅಧ್ಯಯನ ಮತ್ತು ವಿವಿಧ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಹಲವರು ಕಾರ್ಯಕ್ರಮದಲ್ಲಿ ಸೇರಿರುವುದು ಬಹಳ ಅರ್ಥಪೂರ್ಣವಾದದ್ದು. ಈ ಮೂರು ಕ್ಷೇತ್ರದಲ್ಲಿ ಇರುವವರನ್ನು ವೇದಿಕೆಗೆ ತಂದಿದ್ದು ‘ಎದೆಯ ಪದ’ ಪುಸ್ತಕ. ಇದು ಎಲ್ಲರನ್ನೂ ಒಳಗೊಳ್ಳುವ ಕೃತಿಯಾಗಿದೆ’ ಎಂದು ನುಡಿದರು.</p>.<p>ಕೃತಿ ಕುರಿತು ಸಾಹಿತಿ ಎನ್.ಗಾಯತ್ರಿ ಮಾತನಾಡಿದರು. ಪತ್ರಕರ್ತೆ ಆರ್.ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಆರ್.ಸುನಂದಮ್ಮ, ಪೂರ್ಣಿಮಾ ಮಂಡ್ಯ, ದು.ಸರಸ್ವತಿ, ಎಸ್.ರಶ್ಮಿ, ಗೌರಿ, ಕಾವ್ಯಶ್ರೀ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಗ್ರಾಮೀಣ ಪ್ರದೇಶದಲ್ಲಿ ಹಲವು ಪ್ರತಿಭಾವಂತ ಮಹಿಳೆಯರು ಮತ್ತು ವಿವಿಧ ಕ್ಷೇತ್ರದ ಸಾಧಕರು ಇದ್ದಾರೆ. ಆದರೆ, ಹಲವರ ಜೀವನ ಚರಿತ್ರೆಗಳು ಪುಸ್ತಕಗಳಲ್ಲಿ ದಾಖಲಾಗುತ್ತಿಲ್ಲ ಎಂದು ವಕೀಲೆ ಹೇಮಲತಾ ಮಹಿಷಿ ಬೇಸರ ವ್ಯಕ್ತಪಡಿಸಿದರು.</p>.<p>ನಗರದ ಚಿತ್ರಕಲಾ ಪರಿಷತ್ನಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಆರ್.ಸುನಂದಮ್ಮ ಅವರ ‘ಎದೆಯ ಪದ’ (ಎಸ್.ಜಿ. ಲಕ್ಷ್ಮೀ ದೇವಮ್ಮ ಅವರ ಆತ್ಮಕಥನ) ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.</p>.<p>ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಮಹಿಳಾ ಸಾಧಕರ ಚರಿತ್ರೆ ಪುಸ್ತಕ ರೂಪದಲ್ಲಿ ದಾಖಲಾದಾಗ ನಗರವಾಸಿಗಳು ಸೇರಿದಂತೆ ಇಡೀ ಸಮಾಜಕ್ಕೆ ಪರಿಚಯವಾಗುತ್ತದೆ. ಆಗ ಅದು ಮಹಿಳಾ ಸಾಹಿತ್ಯ, ಚರಿತ್ರೆಗೆ ಸೇರಿಕೊಳ್ಳುತ್ತದೆ ಎಂದು ಹೇಳಿದರು.</p>.<p>ಜಾನಪದ ಕಲಾವಿದೆಯ ಜೀವನ ಸಾಧನೆಯ ಕುರಿತು ಪುಸ್ತಕ ತಂದಿರುವುದು ಸಂತೋಷದ ಸಂಗತಿ. ಗ್ರಾಮೀಣ ಪ್ರದೇಶದ ಮಹಿಳೆ ತನ್ನ ಪ್ರತಿಭೆಯಿಂದ ಸಾಧನೆ ಮಾಡಿದ್ದಾರೆ ಎಂಬುದು ಈ ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಲಕ್ಷ್ಮೀ ದೇವಮ್ಮ ಜಾನಪದ ಕಲಾವಿದೆಯಾಗಿಯೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯು ದೊರಕಿದೆ. ಅವರ ಸಾಧನೆ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಓದು, ಬರಹ ತಿಳಿಯದ ಹಲವರಿಗೆ ತಮ್ಮ ಆತ್ಮಚರಿತ್ರೆ ಬರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬರೆಯಲು ಗೊತ್ತಿದ್ದರೂ ಕೃತಿ ಬರೆಯುವಷ್ಟು ಬರವಣಿಗೆ ಅವರಲ್ಲಿ ಇರುವುದಿಲ್ಲ. ಅಂತಹ ಸಂದರ್ಧದಲ್ಲಿ ಸಾಧಕರ ಬಾಯಿಯಿಂದಲೇ ಅವರ ಜೀವನ ಚರಿತ್ರೆ ಕೇಳಿಸಿಕೊಂಡು ಮತ್ತೊಬ್ಬರು ಬರೆಯುವುದು ಅದೃಷ್ಟದ ಕೆಲಸ ಎಂದರು.</p>.<p>ಸಾಹಿತಿ ಸಬೀಹಾ ಭೂಮಿಗೌಡ ಮಾತನಾಡಿ, ‘ಸಾಹಿತ್ಯ, ಮಹಿಳಾ ಅಧ್ಯಯನ ಮತ್ತು ವಿವಿಧ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಹಲವರು ಕಾರ್ಯಕ್ರಮದಲ್ಲಿ ಸೇರಿರುವುದು ಬಹಳ ಅರ್ಥಪೂರ್ಣವಾದದ್ದು. ಈ ಮೂರು ಕ್ಷೇತ್ರದಲ್ಲಿ ಇರುವವರನ್ನು ವೇದಿಕೆಗೆ ತಂದಿದ್ದು ‘ಎದೆಯ ಪದ’ ಪುಸ್ತಕ. ಇದು ಎಲ್ಲರನ್ನೂ ಒಳಗೊಳ್ಳುವ ಕೃತಿಯಾಗಿದೆ’ ಎಂದು ನುಡಿದರು.</p>.<p>ಕೃತಿ ಕುರಿತು ಸಾಹಿತಿ ಎನ್.ಗಾಯತ್ರಿ ಮಾತನಾಡಿದರು. ಪತ್ರಕರ್ತೆ ಆರ್.ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಆರ್.ಸುನಂದಮ್ಮ, ಪೂರ್ಣಿಮಾ ಮಂಡ್ಯ, ದು.ಸರಸ್ವತಿ, ಎಸ್.ರಶ್ಮಿ, ಗೌರಿ, ಕಾವ್ಯಶ್ರೀ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>