ಚಿಂತಕ ಕಬ್ಬಿನಾಲೆ ವಸಂತ ಭಾರದ್ವಾಜ್, ‘ವ್ಯಾಸಭಾರತದಲ್ಲಿ, ಕರ್ಣ ತನ್ನ ಮಗ ಎಂದು ಕುಂತಿ ಅಂತ್ಯದಲ್ಲಿ ಹೇಳುತ್ತಾಳೆ. ಆದರೆ ಮೊಯಿಲಿ ಅವರ ಕಾವ್ಯದಲ್ಲಿ ಅವಳು ದ್ರೌಪದಿಯೊಂದಿಗೆ ಮೊದಲೇ ಹೇಳಿಕೊಳ್ಳುತ್ತಾಳೆ. ಅರ್ಜುನನ ಸರಣಿ ವಿವಾಹಗಳಿಂದ ನೊಂದ ದ್ರೌಪದಿ, ನದಿಯಲ್ಲಿ ಸ್ನಾನ ಮಾಡುವಾಗ ಕೊಚ್ಚಿಕೊಂಡು ಹೋಗುತ್ತಾಳೆ. ಇಂತಹ ಅನೇಕ ಘಟನೆಗಳು ಮಹಿಳೆ ಹಾಗೂ ಆಕೆಯ ಆಂತರಂಗದ ಜಿಜ್ಞಾಸೆಯನ್ನು ತೆರೆದಿಡುತ್ತವೆ’ ಎಂದು ಹೇಳಿದರು.