ಯುಕ್ರೇನ್ನ ಜನರಿಗಾಗಿ ಶ್ರೀಶ್ರೀಶ್ರೀ ರವಿಶಂಕರ ಗುರೂಜಿ ನೇತೃತ್ವದಲ್ಲಿ ಹೃದಯಾಳದ ಪ್ರಾರ್ಥನೆ ಸಲ್ಲಿಸಲಾಯಿತು. ಲಿಂಕನ್ ಸ್ಮಾರಕದ ಮುಂದೆ ಯೋಗ ಜ್ಞಾನ ಪಸರಿಸಲಾಯಿತು. ವಿವಿಧ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಭಾರತದ ಐದು ಪಾರಂಪರಿಕ ನೃತ್ಯಗಳಾದ ಭರತನಾಟ್ಯ, ಕಥಕ್, ಒಡಿಸ್ಸಿ, ಕೂಚುಪುಡಿ ಮತ್ತು ಮೋಹಿನಿಆಟ್ಟಂ ಸಾಂಸ್ಕೃತಿಕ ವೈಭವಕ್ಕೆ ಮೆರುಗು ನೀಡಿದವು. ಗರ್ಭಾ ನೃತ್ಯ, ಭಾಂಗ್ರ ನೃತ್ಯ ಸಹಿತ ವಿವಿಧ ಕಲೆಗಳು ಪ್ರದರ್ಶನಗೊಂಡವು.