<p><strong>ಬೆಂಗಳೂರು</strong>: ಯಕ್ಷಗಾನವನ್ನು ಬರೀ ಕರಾವಳಿ ಭಾಗಕ್ಕೆ ಸೀಮಿತಗೊಳಿಸದೇ ಕರ್ನಾಟಕದ ಕಲೆಯಾಗಿ ಬೆಳೆಸಬೇಕು ಎಂದು ಯಕ್ಷಗಾನ ವಿದ್ವಾಂಸ ಆನಂದರಾಮ ಉಪಾಧ್ಯ ಸಲಹೆ ನೀಡಿದರು.</p>.<p>ನಗರದ ಯಕ್ಷಸಿಂಚನ ಟ್ರಸ್ಟ್ನ 16ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡಿನ ಭಾಗದಲ್ಲಿ ಯಕ್ಷಗಾನ ಪ್ರಮುಖ ಕಲೆ. ಇಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆಯೂ ಅಧಿಕವಾಗಿದೆ. ಹಾಗೆಂದು ಯಕ್ಷಗಾನವು ಕೇವಲ ಕರಾವಳಿಯ ಕಲೆಯಾಗಿ ಉಳಿಯಬಾರದು ಎಂದು ಹೇಳಿದರು.</p>.<p>ಯಕ್ಷಗಾನದ ಪರಂಪರೆ, ತಿಟ್ಟುಗಳು ಉಳಿಯಬೇಕಾದರೆ ಹವ್ಯಾಸಿ ಕಲಾವಿದರೇ ಪ್ರಮುಖ ಶಕ್ತಿಯಾಗಬೇಕು ಎಂದು ತಿಳಿಸಿದರು.</p>.<p>ಶ್ರೀಪಾದ ಹೆಗಡೆ ಹುಕ್ಲಮಕ್ಕಿ, ಪತ್ರಕರ್ತ ಸುಧೀಂದ್ರ ಭಾರದ್ವಾಜ್, ಸಂಸ್ಥೆ ನಿರ್ದೇಶಕ ಕೃಷ್ಣಮೂರ್ತಿ ತುಂಗರ ಮಾತನಾಡಿದರು.</p>.<p>ಹಿಮ್ಮೇಳ ವಾದಕರಾದ ಚೇರ್ಕಾಡಿ ಮಂಜುನಾಥ ಪ್ರಭು ಅವರಿಗೆ ನಾಲ್ಕು ದಶಕಗಳ ಯಕ್ಷಗಾನ ಸೇವೆಗಾಗಿ 'ಸಾರ್ಥಕ ಸಾಧಕ ಗೌರವ ಪ್ರಶಸ್ತಿ–2025' ಪ್ರದಾನ ಮಾಡಲಾಯಿತು.</p>.<p>ಬೆಂಗಳೂರು ಯಕ್ಷ ಕಲಾ ಅಕಾಡೆಮಿ ಬಾಲ ಕಲಾವಿದರು ಪಾರ್ತಿಸುಬ್ಬರ ಕೃತಿ ರಾಮ–ಪರಶುರಾಮ, ಯಕ್ಷಸಿಂಚನ ತಂಡದ ಕಲಾವಿದರು ದಿನಕರ ಪಚ್ಚನಾಡಿ ರಚಿತ ತರಣಿಸೇನ ಪ್ರಸಂಗ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಯಕ್ಷಗಾನವನ್ನು ಬರೀ ಕರಾವಳಿ ಭಾಗಕ್ಕೆ ಸೀಮಿತಗೊಳಿಸದೇ ಕರ್ನಾಟಕದ ಕಲೆಯಾಗಿ ಬೆಳೆಸಬೇಕು ಎಂದು ಯಕ್ಷಗಾನ ವಿದ್ವಾಂಸ ಆನಂದರಾಮ ಉಪಾಧ್ಯ ಸಲಹೆ ನೀಡಿದರು.</p>.<p>ನಗರದ ಯಕ್ಷಸಿಂಚನ ಟ್ರಸ್ಟ್ನ 16ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡಿನ ಭಾಗದಲ್ಲಿ ಯಕ್ಷಗಾನ ಪ್ರಮುಖ ಕಲೆ. ಇಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆಯೂ ಅಧಿಕವಾಗಿದೆ. ಹಾಗೆಂದು ಯಕ್ಷಗಾನವು ಕೇವಲ ಕರಾವಳಿಯ ಕಲೆಯಾಗಿ ಉಳಿಯಬಾರದು ಎಂದು ಹೇಳಿದರು.</p>.<p>ಯಕ್ಷಗಾನದ ಪರಂಪರೆ, ತಿಟ್ಟುಗಳು ಉಳಿಯಬೇಕಾದರೆ ಹವ್ಯಾಸಿ ಕಲಾವಿದರೇ ಪ್ರಮುಖ ಶಕ್ತಿಯಾಗಬೇಕು ಎಂದು ತಿಳಿಸಿದರು.</p>.<p>ಶ್ರೀಪಾದ ಹೆಗಡೆ ಹುಕ್ಲಮಕ್ಕಿ, ಪತ್ರಕರ್ತ ಸುಧೀಂದ್ರ ಭಾರದ್ವಾಜ್, ಸಂಸ್ಥೆ ನಿರ್ದೇಶಕ ಕೃಷ್ಣಮೂರ್ತಿ ತುಂಗರ ಮಾತನಾಡಿದರು.</p>.<p>ಹಿಮ್ಮೇಳ ವಾದಕರಾದ ಚೇರ್ಕಾಡಿ ಮಂಜುನಾಥ ಪ್ರಭು ಅವರಿಗೆ ನಾಲ್ಕು ದಶಕಗಳ ಯಕ್ಷಗಾನ ಸೇವೆಗಾಗಿ 'ಸಾರ್ಥಕ ಸಾಧಕ ಗೌರವ ಪ್ರಶಸ್ತಿ–2025' ಪ್ರದಾನ ಮಾಡಲಾಯಿತು.</p>.<p>ಬೆಂಗಳೂರು ಯಕ್ಷ ಕಲಾ ಅಕಾಡೆಮಿ ಬಾಲ ಕಲಾವಿದರು ಪಾರ್ತಿಸುಬ್ಬರ ಕೃತಿ ರಾಮ–ಪರಶುರಾಮ, ಯಕ್ಷಸಿಂಚನ ತಂಡದ ಕಲಾವಿದರು ದಿನಕರ ಪಚ್ಚನಾಡಿ ರಚಿತ ತರಣಿಸೇನ ಪ್ರಸಂಗ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>