ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರು ಮಾತನಾಡಿ,‘ಕನ್ನಡೇತರರಾದ ವಲಸಿಗ ಪೋಷಕರು ವಾಟ್ಸ್ಆ್ಯಪ್ನಲ್ಲಿ ಕನ್ನಡ ವಿರೋಧಿ ಅಭಿಯಾನ ಆರಂಭಿಸಿದ್ದಾರೆ. ನಾವು ಕನ್ನಡ ಭಾಷೆಯನ್ನು ಕಲಿಯುವುದಿಲ್ಲ. ಕನ್ನಡಭಾಷೆ ವಿಷಯ ತೆಗೆದುಕೊಳ್ಳುವುದರಿಂದ ವಿನಾಯಿತಿ ನೀಡಬೇಕು ಎಂದು ಈವರೆಗೆ ಸುಮಾರು 2,500 ಸಹಿ ಸಂಗ್ರಹಿಸಿದ್ದಾರೆ’ ಎಂದು ದೂರಿದರು.