<p>ಕೆಂಗೇರಿ:<strong> </strong>ಯಶವಂತಪುರ ಕ್ಷೇತ್ರ ಯುವ ದಸರಾ ಅಂಗವಾಗಿ ನಡೆದ ಪುರುಷ ಹಾಗೂ ಮಹಿಳೆಯರ ಫ್ಯಾಷನ್ ಶೋ ಕಾರ್ಯಕ್ರಮ ದಲ್ಲಿ ಆದಿತ್ಯ ಆದ್ಯ ಸ್ವಾಮಿ ಹಾಗೂ ಅನುಷಾ ಕ್ರಮವಾಗಿ ‘ಯುವರಾಜ ಆಫ್ ಯಶವಂತಪುರ ಕ್ಷೇತ್ರ-2025’ ಮತ್ತು ‘ಯುವರಾಣಿ ಆಫ್ ಯಶವಂತಪುರ ಕ್ಷೇತ್ರ 2025’ ಪ್ರಶಸ್ತಿಗೆ ಭಾಜನರಾದರು.</p><p>ನವರಾತ್ರಿ ಅಂಗವಾಗಿ ಯಶವಂತಪುರ ಕ್ಷೇತ್ರದ ಕೆಂಗೇರಿ ಗಣೇಶ ಆಟದ ಮೈದಾನದಲ್ಲಿ ಆಯೋಜನೆಗೊಂಡಿದ್ದ ಯುವ ದಸರಾದ ಭಾಗವಾಗಿ ಫ್ಯಾಷನ್ ಶೋ ಹಾಗೂ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.</p><p>ಕಾಲೇಜು ವಿದ್ಯಾರ್ಥಿನಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಮ್ಮ ಪ್ರತಿಭೆ ಹಾಗೂ ಸೌಂದರ್ಯದಿಂದ ತೀರ್ಪುಗಾರರ ಮನಗೆದ್ದ ಅನುಷಾ ಹಾಗೂ ಆದಿತ್ಯ ಆದ್ಯ ಸ್ವಾಮಿ ಕ್ರಮವಾಗಿ ಯುವರಾಣಿ ಹಾಗೂ ಯುವರಾಜ ಪ್ರಶಸ್ತಿಗೆ ಆಯ್ಕೆಯಾದರು.</p><p>ಎರಡು ದಿನದ ಈ ಕಾರ್ಯಕ್ರಮದಲ್ಲಿ ಮೊದಲನೆ ದಿನ ಆಯೋಜನೆಗೊಂಡಿದ್ದ ಕಾಲೇಜು ಯುವಕ ಯುವತಿಯರ ನೃತ್ಯ ಹಾಗೂ ಫ್ಯಾಷನ್ ಷೋ ಜನರ ಮನಸೂರೆಗೊಂಡಿತ್ತು. ಶನಿವಾರ ಸಂಜೆ ನಡೆದ ಸ್ವರ ಮಾಂತ್ರಿಕ ರಘು ದೀಕ್ಷಿತ್ ಅವರ ಸಂಗೀತ ಸಂಜೆ ಕಲಾ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.</p><p>ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಗೀತ ಪ್ರಿಯರು ರಘು ದೀಕ್ಷಿತ್ ತಂಡದ ಹಾಡುಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಶಿಳ್ಳೆ ಚಪ್ಪಾಳೆ ಹಾಕಿ ಸಂತಸ ವ್ಯಕ್ತ ಪಡಿಸಿದರು.</p><p>ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾಲ್ಕು ದಿನ ಕಾರ್ಯಕ್ರಮ ಆಯೋಜಿಸಲಾಗುವುದು. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸಾಂಸ್ಕೃತಿಕ<br>ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕು ಎಂದರು</p><p>‘ಗೆಳೆಯರು ಹಾಗೂ ಹಿತೈಷಿಗಳ ಸಹಕಾರದಿಂದ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈ ಸಿರುವೆ. ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದಗಳು’ ಎಂದು ರಘು ದೀಕ್ಷಿತ್ ನೆನಪಿಸಿಕೊಂಡರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಂಗೇರಿ:<strong> </strong>ಯಶವಂತಪುರ ಕ್ಷೇತ್ರ ಯುವ ದಸರಾ ಅಂಗವಾಗಿ ನಡೆದ ಪುರುಷ ಹಾಗೂ ಮಹಿಳೆಯರ ಫ್ಯಾಷನ್ ಶೋ ಕಾರ್ಯಕ್ರಮ ದಲ್ಲಿ ಆದಿತ್ಯ ಆದ್ಯ ಸ್ವಾಮಿ ಹಾಗೂ ಅನುಷಾ ಕ್ರಮವಾಗಿ ‘ಯುವರಾಜ ಆಫ್ ಯಶವಂತಪುರ ಕ್ಷೇತ್ರ-2025’ ಮತ್ತು ‘ಯುವರಾಣಿ ಆಫ್ ಯಶವಂತಪುರ ಕ್ಷೇತ್ರ 2025’ ಪ್ರಶಸ್ತಿಗೆ ಭಾಜನರಾದರು.</p><p>ನವರಾತ್ರಿ ಅಂಗವಾಗಿ ಯಶವಂತಪುರ ಕ್ಷೇತ್ರದ ಕೆಂಗೇರಿ ಗಣೇಶ ಆಟದ ಮೈದಾನದಲ್ಲಿ ಆಯೋಜನೆಗೊಂಡಿದ್ದ ಯುವ ದಸರಾದ ಭಾಗವಾಗಿ ಫ್ಯಾಷನ್ ಶೋ ಹಾಗೂ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.</p><p>ಕಾಲೇಜು ವಿದ್ಯಾರ್ಥಿನಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಮ್ಮ ಪ್ರತಿಭೆ ಹಾಗೂ ಸೌಂದರ್ಯದಿಂದ ತೀರ್ಪುಗಾರರ ಮನಗೆದ್ದ ಅನುಷಾ ಹಾಗೂ ಆದಿತ್ಯ ಆದ್ಯ ಸ್ವಾಮಿ ಕ್ರಮವಾಗಿ ಯುವರಾಣಿ ಹಾಗೂ ಯುವರಾಜ ಪ್ರಶಸ್ತಿಗೆ ಆಯ್ಕೆಯಾದರು.</p><p>ಎರಡು ದಿನದ ಈ ಕಾರ್ಯಕ್ರಮದಲ್ಲಿ ಮೊದಲನೆ ದಿನ ಆಯೋಜನೆಗೊಂಡಿದ್ದ ಕಾಲೇಜು ಯುವಕ ಯುವತಿಯರ ನೃತ್ಯ ಹಾಗೂ ಫ್ಯಾಷನ್ ಷೋ ಜನರ ಮನಸೂರೆಗೊಂಡಿತ್ತು. ಶನಿವಾರ ಸಂಜೆ ನಡೆದ ಸ್ವರ ಮಾಂತ್ರಿಕ ರಘು ದೀಕ್ಷಿತ್ ಅವರ ಸಂಗೀತ ಸಂಜೆ ಕಲಾ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.</p><p>ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಗೀತ ಪ್ರಿಯರು ರಘು ದೀಕ್ಷಿತ್ ತಂಡದ ಹಾಡುಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಶಿಳ್ಳೆ ಚಪ್ಪಾಳೆ ಹಾಕಿ ಸಂತಸ ವ್ಯಕ್ತ ಪಡಿಸಿದರು.</p><p>ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾಲ್ಕು ದಿನ ಕಾರ್ಯಕ್ರಮ ಆಯೋಜಿಸಲಾಗುವುದು. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸಾಂಸ್ಕೃತಿಕ<br>ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕು ಎಂದರು</p><p>‘ಗೆಳೆಯರು ಹಾಗೂ ಹಿತೈಷಿಗಳ ಸಹಕಾರದಿಂದ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈ ಸಿರುವೆ. ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದಗಳು’ ಎಂದು ರಘು ದೀಕ್ಷಿತ್ ನೆನಪಿಸಿಕೊಂಡರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>