<p><strong>ಬೆಂಗಳೂರು: </strong>`ಯೋಗ ಮತ್ತು ವೇದಗಳು ಸಾಮಾನ್ಯ ಜನರ ಜೀವನದಿಂದ ಬಹಳ ದೂರ ಉಳಿದಿವೆ ಎಂಬ ಕಲ್ಪನೆ ತಪ್ಪು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೇದ ಪಂಡಿತರು ಶ್ರಮಿಸಬೇಕು~ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಸಲಹೆ ನೀಡಿದರು.<br /> <br /> ವೇದ ಸೌರಭ ಸಂಸ್ಥೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಆರ್.ಎಲ್. ಕಶ್ಯಪ ಅವರ `ನಾಲ್ಕು ವೇದಗಳ ಭಾಷ್ಯ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> `ಕಶ್ಯಪ ಅವರು ತಮ್ಮ ಕೃತಿಯಲ್ಲಿ ಯೋಗವನ್ನು ಆಧುನಿಕ ಜೀವನಶೈಲಿಯ ದೃಷ್ಟಿಕೋನದಿಂದ ಮರು ವ್ಯಾಖ್ಯಾನಿಸಿದ್ದು, ಬದುಕಿನಲ್ಲಿ ಎದುರಾಗುವ ಹಲವು ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡಿದ್ದಾರೆ~ ಎಂದು ತಿಳಿಸಿದರು. `<br /> <br /> ಆಧುನಿಕ ಸಮಾಜದಲ್ಲಿ ಧ್ಯಾನ ಮತ್ತು ಯೋಗಾಭ್ಯಾಸವು ಮನೋನಿಗ್ರಹದ ಮಾರ್ಗವಾಗಿ ಹೇಗೆ ರೂಪುಗೊಂಡಿದೆ ಎಂಬುದನ್ನು ಸಹ ಈ ಕೃತಿಯಲ್ಲಿ ವಿಸ್ತೃತವಾಗಿ ತಿಳಿಸಲಾಗಿದೆ. ಪವಾಡ ದೃಶ್ಯಗಳನ್ನು ದೈವೀಕರಣದ ನೆಲೆಯಲ್ಲಿ ತರ್ಕಿಸುವ ಮೂಲಕ ಹೊಸ ಆಯಾಮ ನೀಡಲಾಗಿದೆ~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಯೋಗ ಮತ್ತು ವೇದಗಳು ಸಾಮಾನ್ಯ ಜನರ ಜೀವನದಿಂದ ಬಹಳ ದೂರ ಉಳಿದಿವೆ ಎಂಬ ಕಲ್ಪನೆ ತಪ್ಪು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೇದ ಪಂಡಿತರು ಶ್ರಮಿಸಬೇಕು~ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಸಲಹೆ ನೀಡಿದರು.<br /> <br /> ವೇದ ಸೌರಭ ಸಂಸ್ಥೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಆರ್.ಎಲ್. ಕಶ್ಯಪ ಅವರ `ನಾಲ್ಕು ವೇದಗಳ ಭಾಷ್ಯ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> `ಕಶ್ಯಪ ಅವರು ತಮ್ಮ ಕೃತಿಯಲ್ಲಿ ಯೋಗವನ್ನು ಆಧುನಿಕ ಜೀವನಶೈಲಿಯ ದೃಷ್ಟಿಕೋನದಿಂದ ಮರು ವ್ಯಾಖ್ಯಾನಿಸಿದ್ದು, ಬದುಕಿನಲ್ಲಿ ಎದುರಾಗುವ ಹಲವು ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡಿದ್ದಾರೆ~ ಎಂದು ತಿಳಿಸಿದರು. `<br /> <br /> ಆಧುನಿಕ ಸಮಾಜದಲ್ಲಿ ಧ್ಯಾನ ಮತ್ತು ಯೋಗಾಭ್ಯಾಸವು ಮನೋನಿಗ್ರಹದ ಮಾರ್ಗವಾಗಿ ಹೇಗೆ ರೂಪುಗೊಂಡಿದೆ ಎಂಬುದನ್ನು ಸಹ ಈ ಕೃತಿಯಲ್ಲಿ ವಿಸ್ತೃತವಾಗಿ ತಿಳಿಸಲಾಗಿದೆ. ಪವಾಡ ದೃಶ್ಯಗಳನ್ನು ದೈವೀಕರಣದ ನೆಲೆಯಲ್ಲಿ ತರ್ಕಿಸುವ ಮೂಲಕ ಹೊಸ ಆಯಾಮ ನೀಡಲಾಗಿದೆ~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>