ಬೀದರ್: ನೆಹರು ಯುವ ಕೇಂದ್ರದ ವತಿಯಿಂದ ನಗರದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಉದಗಿರ ರಸ್ತೆಯಲ್ಲಿರುವ ಅಕ್ಕ ಮಹಾದೇವಿ ಮಹಿಳಾ ಕಾಲೇಜಿನ ಆವರಣದಿಂದ ಸ್ವಚ್ಛತಾ ಕಾರ್ಯ ಆರಂಭಿಸಿದ ಸ್ವಯಂ ಸೇವಕರು ಮೇಗೂರ ಕಣ್ಣಿನ ಆಸ್ಪತ್ರೆ, ಸಾಯಿಬಾಬಾ ಮಂದಿರ ಹಾಗೂ ಜೆಸ್ಕಾಂ ಕಚೇರಿ ಬಳಿ ಕಸ ಗುಡಿಸಿ ಸ್ವಚ್ಛಗೊಳಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಮಯೂರ ಗೋರ್ಮೆ, ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಿಬ್ಬಂದಿ ಬಿಂದು, ನಾಗಶೆಟ್ಟಿ, ಗೀತಾ, ತನ್ವೀರ್, ವಿಜಯಲಕ್ಷ್ಮಿ, ನೆಹರು ಯುವ ಕೇಂದ್ರ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.