<p><strong>ಕಮಲನಗರ:</strong> ‘ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವರಿ ಪಡೆಯಬೇಕು. ಲಾಭದಾಯಕ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದು ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಸಲಹೆ ನೀಡಿದರು.</p>.<p>ತಾಲ್ಲೂಕಿನ ಮುಧೋಳ(ಬಿ) ಗ್ರಾಮದ ಹಾವಗಿರಾವ ವಟಗೆ ಅವರ ಹೊಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಕೂಟ, ಹಿರಿಯರ ಸ್ಮರಣೋತ್ಸವ ಮತ್ತು ಬಸವಜ್ಯೋತಿ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಯುವಜನರು ಸಂಕೋಚ ಪಡದೇ ಕೃಷಿಯತ್ತ ಮುನ್ನುಗ್ಗಬೇಕು. ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಕೃಷಿ ನೀತಿ ಅನುಸರಿಸಬೇಕು’ ಎಂದರು.</p>.<p>ಬಾಬುರಾವ ಕುಲಾಲ್ ಮಾತನಾಡಿ, ‘ರಾಸಾಯನಿಕ ಗೊಬ್ಬರ ಜತೆಗೆ ಸಾವಯವ ಗೊಬ್ಬರ ಬಳಕೆ ಮಾಡಬೇಕು. ಈ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು. ಕಬ್ಬು, ಪೇರಲೆ, ಪಪ್ಪಾಯಿ, ಬಾಳೆಹಣ್ಣು, ಸಾಗವಾನಿ, ಸೇಬು ಮುಂತಾದ ಬೆಳೆಗಳನ್ನು ಬೆಳೆಯಬೇಕು’ ಎಂದರು.</p>.<p>ನಿವೃತ್ತ ಅಧಿಕಾರಿ ಅಂತೇಶ್ವರ ಶೆಟಕಾರ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಭಾರತ ಸ್ವಾಭಿಮಾನಿ ತಾಲ್ಲೂಕು ಅಧ್ಯಕ್ಷ ಗಣಪತರಾವ ಖೂಬಾ ವಹಿಸಿದ್ದರು.</p>.<p>ವೇದಿಕೆಯಲ್ಲಿ ವಿಶ್ವನಾಥರಾವ ಖೂಬಾ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಮೈನಾಳೆ, ನಿವೃತ್ತ ಪ್ರಾಧ್ಯಾಪಕ ಜಗನ್ನಾಥ ಚಿಮ್ಮಾ, ಸಹಾಯಕ ತೋಟಗಾರಿಕೆ ಅಧಿಕಾರಿ ಅಣ್ಣಾರಾವ ಪಾಟೀಲ, ನಾಗಯ್ಯ ಸ್ವಾಮಿ, ಬಾಬುರಾವ ಹಲಬರ್ಗೆ, ಧುಳಪ್ಪ ನಂದನವರೆ, ಭಾನುದಾಸ ಕಾರಬಾರಿ, ಗುರುನಾಥ ವಟಗೆ, ಶಂಕರರಾವ ಉದಗೀರೆ ಇದ್ದರು.</p>.<p>ಹಾವಗಿರಾವ ವಟಗೆ ಸ್ವಾಗತಿಸಿದರು. ಗಜಾನಂದ ವಟಗೆ ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ:</strong> ‘ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವರಿ ಪಡೆಯಬೇಕು. ಲಾಭದಾಯಕ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದು ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠ ಸಲಹೆ ನೀಡಿದರು.</p>.<p>ತಾಲ್ಲೂಕಿನ ಮುಧೋಳ(ಬಿ) ಗ್ರಾಮದ ಹಾವಗಿರಾವ ವಟಗೆ ಅವರ ಹೊಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಕೂಟ, ಹಿರಿಯರ ಸ್ಮರಣೋತ್ಸವ ಮತ್ತು ಬಸವಜ್ಯೋತಿ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಯುವಜನರು ಸಂಕೋಚ ಪಡದೇ ಕೃಷಿಯತ್ತ ಮುನ್ನುಗ್ಗಬೇಕು. ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಕೃಷಿ ನೀತಿ ಅನುಸರಿಸಬೇಕು’ ಎಂದರು.</p>.<p>ಬಾಬುರಾವ ಕುಲಾಲ್ ಮಾತನಾಡಿ, ‘ರಾಸಾಯನಿಕ ಗೊಬ್ಬರ ಜತೆಗೆ ಸಾವಯವ ಗೊಬ್ಬರ ಬಳಕೆ ಮಾಡಬೇಕು. ಈ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು. ಕಬ್ಬು, ಪೇರಲೆ, ಪಪ್ಪಾಯಿ, ಬಾಳೆಹಣ್ಣು, ಸಾಗವಾನಿ, ಸೇಬು ಮುಂತಾದ ಬೆಳೆಗಳನ್ನು ಬೆಳೆಯಬೇಕು’ ಎಂದರು.</p>.<p>ನಿವೃತ್ತ ಅಧಿಕಾರಿ ಅಂತೇಶ್ವರ ಶೆಟಕಾರ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಭಾರತ ಸ್ವಾಭಿಮಾನಿ ತಾಲ್ಲೂಕು ಅಧ್ಯಕ್ಷ ಗಣಪತರಾವ ಖೂಬಾ ವಹಿಸಿದ್ದರು.</p>.<p>ವೇದಿಕೆಯಲ್ಲಿ ವಿಶ್ವನಾಥರಾವ ಖೂಬಾ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಮೈನಾಳೆ, ನಿವೃತ್ತ ಪ್ರಾಧ್ಯಾಪಕ ಜಗನ್ನಾಥ ಚಿಮ್ಮಾ, ಸಹಾಯಕ ತೋಟಗಾರಿಕೆ ಅಧಿಕಾರಿ ಅಣ್ಣಾರಾವ ಪಾಟೀಲ, ನಾಗಯ್ಯ ಸ್ವಾಮಿ, ಬಾಬುರಾವ ಹಲಬರ್ಗೆ, ಧುಳಪ್ಪ ನಂದನವರೆ, ಭಾನುದಾಸ ಕಾರಬಾರಿ, ಗುರುನಾಥ ವಟಗೆ, ಶಂಕರರಾವ ಉದಗೀರೆ ಇದ್ದರು.</p>.<p>ಹಾವಗಿರಾವ ವಟಗೆ ಸ್ವಾಗತಿಸಿದರು. ಗಜಾನಂದ ವಟಗೆ ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>