<p><strong>ಜನವಾಡ</strong>: ಬೀದರ್- ಮಾಳೆಗಾಂವ್ ರಸ್ತೆಯಲ್ಲಿ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ಸಮೀಪ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕಿರಿದಾಗಿರುವ ಕಾರಣ ಮಳೆಗಾಲದಲ್ಲಿ ಆಗಾಗ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.</p>.<p>ಬೀದರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚು ಮಳೆಯಾದಾಗ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಅಂತಹ ವೇಳೆ ಸೇತುವೆ ಮೇಲಿಂದ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.</p>.<p>ಸೇತುವೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಹಾಗೂ ಅದರ ಎತ್ತರ ಕಡಿಮೆ ಆಗಿರುವುದರಿಂದ ಅಧಿಕ ಮಳೆಯಾದಾಗಲೆಲ್ಲ ಸೇತುವೆ ಮುಳುಗಡೆ ಆತಂಕ ವಾಹನ ಸವಾರರನ್ನು ಕಾಡುತ್ತಿರುತ್ತದೆ. ಸಮಸ್ಯೆ ಹಲವು ವರ್ಷಗಳಿಂದ ಇದ್ದರೂ, ಆಡಳಿತದಿಂದ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಿಲ್ಲ.</p>.<p>ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ತೆಲಂಗಾಣದ ಗ್ರಾಮಗಳಿಗೆ ತೆರಳುವವರಿಗೂ ಅನುಕೂಲಕರ ರಸ್ತೆಯಾಗಿದೆ.</p>.<p>‘ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದಾಗ ಸೇತುವೆ ಮುಳುಗಡೆಯಾಗಿ, ರಸ್ತೆ ಸಂಪರ್ಕ ಕಡಿತವಾಗುತ್ತದೆ. ಕೆಲವೊಮ್ಮೆ ಮೂರು- ನಾಲ್ಕು ತಾಸುಗಳವರೆಗೂ ನೀರಿನ ಮಟ್ಟ ಕಡಿಮೆಯಾಗುವುದಿಲ್ಲ. ಆಗ ವಾಹನ ಸವಾರರು ಸಂಚಾರಕ್ಕೆ ಬದಲಿ ಮಾರ್ಗ ಅನುಸರಿಸುವುದು ಅನಿವಾರ್ಯವಾಗುತ್ತದೆ’ ಎಂದು ಹೇಳುತ್ತಾರೆ ಗುಮ್ಮಾ ಗ್ರಾಮದ ಪುಂಡಲೀಕರಾವ್ ಪಾಟೀಲ.</p>.<p>‘ಮಾಳೆಗಾಂವ್, ಕಾಪಲಾಪುರ, ಅಮದಲಪಡ್, ಚಿಲ್ಲರ್ಗಿ, ತೆಲಂಗಾಣದ ಶಹಾಪುರ, ಮೋರಗಿ, ನಾಗಲಗಿದ್ದಿ, ದಾಮರಗಿದ್ದಿ, ನಾರಾಯಣಖೇಡ್, ಅತಮೇಲ್, ತೋರಣ, ಗುಡೂರು ಗ್ರಾಮಗಳ ಜನ ಬೀದರ್ಗೆ ಬರಲು ಹಾಗೂ ತಮ್ಮ ಊರುಗಳಿಗೆ ಮರಳಲು ಇದೇ ರಸ್ತೆ ಬಳಸುತ್ತಾರೆ. ಪ್ರಯಾಣದ ಅಂತರ ಕಡಿಮೆಯಾಗುವುದು ಕೂಡ ಈ ಮಾರ್ಗ ಅಧಿಕ ಬಳಕೆಗೆ ಕಾರಣವಾಗಿದೆ’ ಎಂದು ತಿಳಿಸುತ್ತಾರೆ.</p>.<p>‘ಹಳ್ಳ ದೊಡ್ಡದಿದೆ. ಸೇತುವೆ ಸಣ್ಣದಾಗಿದೆ. ಹೀಗಾಗಿ ಬೀದರ್, ಮಲ್ಕಾಪುರ, ಅಷ್ಟೂರ ಪ್ರದೇಶದಲ್ಲಿ ಭಾರಿ ಮಳೆಯಾದರೆ ಮುಳುಗಡೆಯಾಗುತ್ತದೆ’ ಎಂದು ಹೇಳುತ್ತಾರೆ.</p>.<p>‘ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯಲ್ಲಿ ತಗ್ಗುಗಳು ಬಿದ್ದಿವೆ. ಮೊದಲಿನ ಸಾಮರ್ಥ್ಯವೂ ಉಳಿದಿಲ್ಲ. ಪ್ರಯಾಣಿಕರ ಸುರಕ್ಷತೆ ಹಾಗೂ ಎಲ್ಲ ಕಾಲದಲ್ಲೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಎತ್ತರದ ಹೊಸ ಸೇತುವೆ ನಿರ್ಮಿಸಬೇಕು’ ಎಂದು ನಾಗರಿಕರು ಒತ್ತಾಯಿಸುತ್ತಾರೆ. </p>.<div><blockquote>ಗುಮ್ಮಾ ಸಮೀಪದ ಸೇತುವೆ ಎತ್ತರ ಹೆಚ್ಚಿಸಿದರೆ ವಿವಿಧ ಗ್ರಾಮಗಳ ಜನರಿಗೆ ಮಳೆಗಾಲದಲ್ಲಿ ಸಂಚಾರಕ್ಕೆ ಆಗುತ್ತಿರುವ ತೊಂದರೆ ನಿವಾರಣೆಯಾಗುತ್ತದೆ</blockquote><span class="attribution">ಪುಂಡಲೀಕರಾವ್ ಪಾಟೀಲ, ಗುಮ್ಮಾ ಗ್ರಾಮಸ್ಥ</span></div>.<div><blockquote>₹2.5 ಕೋಟಿ ವೆಚ್ಚದಲ್ಲಿ ಗುಮ್ಮಾ ಸಮೀಪದ ಸೇತುವೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. </blockquote><span class="attribution">ಭಗವಾನ್ ಸಿಂಗ್, ಪಿಡಬ್ಲ್ಯೂಡಿ ಎಇಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ</strong>: ಬೀದರ್- ಮಾಳೆಗಾಂವ್ ರಸ್ತೆಯಲ್ಲಿ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ಸಮೀಪ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕಿರಿದಾಗಿರುವ ಕಾರಣ ಮಳೆಗಾಲದಲ್ಲಿ ಆಗಾಗ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.</p>.<p>ಬೀದರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚು ಮಳೆಯಾದಾಗ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಅಂತಹ ವೇಳೆ ಸೇತುವೆ ಮೇಲಿಂದ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.</p>.<p>ಸೇತುವೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಹಾಗೂ ಅದರ ಎತ್ತರ ಕಡಿಮೆ ಆಗಿರುವುದರಿಂದ ಅಧಿಕ ಮಳೆಯಾದಾಗಲೆಲ್ಲ ಸೇತುವೆ ಮುಳುಗಡೆ ಆತಂಕ ವಾಹನ ಸವಾರರನ್ನು ಕಾಡುತ್ತಿರುತ್ತದೆ. ಸಮಸ್ಯೆ ಹಲವು ವರ್ಷಗಳಿಂದ ಇದ್ದರೂ, ಆಡಳಿತದಿಂದ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಿಲ್ಲ.</p>.<p>ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ತೆಲಂಗಾಣದ ಗ್ರಾಮಗಳಿಗೆ ತೆರಳುವವರಿಗೂ ಅನುಕೂಲಕರ ರಸ್ತೆಯಾಗಿದೆ.</p>.<p>‘ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದಾಗ ಸೇತುವೆ ಮುಳುಗಡೆಯಾಗಿ, ರಸ್ತೆ ಸಂಪರ್ಕ ಕಡಿತವಾಗುತ್ತದೆ. ಕೆಲವೊಮ್ಮೆ ಮೂರು- ನಾಲ್ಕು ತಾಸುಗಳವರೆಗೂ ನೀರಿನ ಮಟ್ಟ ಕಡಿಮೆಯಾಗುವುದಿಲ್ಲ. ಆಗ ವಾಹನ ಸವಾರರು ಸಂಚಾರಕ್ಕೆ ಬದಲಿ ಮಾರ್ಗ ಅನುಸರಿಸುವುದು ಅನಿವಾರ್ಯವಾಗುತ್ತದೆ’ ಎಂದು ಹೇಳುತ್ತಾರೆ ಗುಮ್ಮಾ ಗ್ರಾಮದ ಪುಂಡಲೀಕರಾವ್ ಪಾಟೀಲ.</p>.<p>‘ಮಾಳೆಗಾಂವ್, ಕಾಪಲಾಪುರ, ಅಮದಲಪಡ್, ಚಿಲ್ಲರ್ಗಿ, ತೆಲಂಗಾಣದ ಶಹಾಪುರ, ಮೋರಗಿ, ನಾಗಲಗಿದ್ದಿ, ದಾಮರಗಿದ್ದಿ, ನಾರಾಯಣಖೇಡ್, ಅತಮೇಲ್, ತೋರಣ, ಗುಡೂರು ಗ್ರಾಮಗಳ ಜನ ಬೀದರ್ಗೆ ಬರಲು ಹಾಗೂ ತಮ್ಮ ಊರುಗಳಿಗೆ ಮರಳಲು ಇದೇ ರಸ್ತೆ ಬಳಸುತ್ತಾರೆ. ಪ್ರಯಾಣದ ಅಂತರ ಕಡಿಮೆಯಾಗುವುದು ಕೂಡ ಈ ಮಾರ್ಗ ಅಧಿಕ ಬಳಕೆಗೆ ಕಾರಣವಾಗಿದೆ’ ಎಂದು ತಿಳಿಸುತ್ತಾರೆ.</p>.<p>‘ಹಳ್ಳ ದೊಡ್ಡದಿದೆ. ಸೇತುವೆ ಸಣ್ಣದಾಗಿದೆ. ಹೀಗಾಗಿ ಬೀದರ್, ಮಲ್ಕಾಪುರ, ಅಷ್ಟೂರ ಪ್ರದೇಶದಲ್ಲಿ ಭಾರಿ ಮಳೆಯಾದರೆ ಮುಳುಗಡೆಯಾಗುತ್ತದೆ’ ಎಂದು ಹೇಳುತ್ತಾರೆ.</p>.<p>‘ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯಲ್ಲಿ ತಗ್ಗುಗಳು ಬಿದ್ದಿವೆ. ಮೊದಲಿನ ಸಾಮರ್ಥ್ಯವೂ ಉಳಿದಿಲ್ಲ. ಪ್ರಯಾಣಿಕರ ಸುರಕ್ಷತೆ ಹಾಗೂ ಎಲ್ಲ ಕಾಲದಲ್ಲೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಎತ್ತರದ ಹೊಸ ಸೇತುವೆ ನಿರ್ಮಿಸಬೇಕು’ ಎಂದು ನಾಗರಿಕರು ಒತ್ತಾಯಿಸುತ್ತಾರೆ. </p>.<div><blockquote>ಗುಮ್ಮಾ ಸಮೀಪದ ಸೇತುವೆ ಎತ್ತರ ಹೆಚ್ಚಿಸಿದರೆ ವಿವಿಧ ಗ್ರಾಮಗಳ ಜನರಿಗೆ ಮಳೆಗಾಲದಲ್ಲಿ ಸಂಚಾರಕ್ಕೆ ಆಗುತ್ತಿರುವ ತೊಂದರೆ ನಿವಾರಣೆಯಾಗುತ್ತದೆ</blockquote><span class="attribution">ಪುಂಡಲೀಕರಾವ್ ಪಾಟೀಲ, ಗುಮ್ಮಾ ಗ್ರಾಮಸ್ಥ</span></div>.<div><blockquote>₹2.5 ಕೋಟಿ ವೆಚ್ಚದಲ್ಲಿ ಗುಮ್ಮಾ ಸಮೀಪದ ಸೇತುವೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. </blockquote><span class="attribution">ಭಗವಾನ್ ಸಿಂಗ್, ಪಿಡಬ್ಲ್ಯೂಡಿ ಎಇಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>