ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ಅನೇಕರು ಹಂಚಿಕೊಂಡು ಬಿಜೆಪಿಯವರ ರಾಮಭಕ್ತಿ ಇದೇನಾ ಎಂದು ಪ್ರಶ್ನಿಸಿದ್ದಾರೆ. ನಗರದ ಕಾಳಿ ಗಲ್ಲಿಯಿಂದ ಮೆರವಣಿಗೆ ಆರಂಭವಾದಾಗ ಶಾಸಕರು ಪ್ಲಾಸ್ಟರ್ನ ಎತ್ತರದ ಶ್ರೀರಾಮ ಮೂರ್ತಿಗೆ ಮಾಲಾರ್ಪಣೆ ಮಾಡುವಾಗ ತೊಡೆಯ ಮೇಲೆ ಏರಿ ನಿಂತಿದ್ದಾರೆ. ಮಾಲಾರ್ಪಣೆ ನಂತರ ಅಲ್ಲಿಯೇ ನಿಂತು ಭಕ್ತರಿಗೆ ಕೈ ಜೋಡಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.