<p><strong>ಮಂದಕನಳ್ಳಿ(ಜನವಾಡ):</strong> ‘ಆರೋಗ್ಯವಂತ ಮಕ್ಕಳ ಜನನಕ್ಕಾಗಿ ಗರ್ಭಿಣಿಯರು, ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಎಂ.ಎಸ್. ಹೇಳಿದರು.</p>.<p>ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಿರಿಧಾನ್ಯ, ಹಸಿರು ಸೊಪ್ಪು, ತರಕಾರಿ, ಮೊಟ್ಟೆ, ಮೀನು, ಹಾಲು, ಹಣ್ಣು ಸೇವನೆಯಿಂದ ಅಧಿಕ ಪ್ರಮಾಣದಲ್ಲಿ ವಿಟಮಿನ್ ದೊರೆಯುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ‘ಗರ್ಭಿಣಿಯರು, ಬಾಣಂತಿಯರು ಮಗುವಿಗೆ 2 ವರ್ಷ ತುಂಬುವವರೆಗೂ ಪೌಷ್ಟಿಕ ಆಹಾರಕ್ಕೆ ಪ್ರಾಮುಖ್ಯತೆ ಕೊಡಬೇಕು’ ಎಂದು ಹೇಳಿದರು.</p>.<p>ಗ್ರಾ.ಪಂ ಉಪಾಧ್ಯಕ್ಷೆ ಕೃಷ್ಣಬಾಯಿ, ಸದಸ್ಯೆ ಶೋಭಾ, ಪ್ರಮುಖರಾದ ವೀರಾಬಾಯಿ, ಸುಮಿತ್ರಾ, ಅವಿರತ ಸಿಂದೆ, ಸುರೇಖಾ, ಚಿನ್ನಮ್ಮ, ಜಗದೇವಿ, ಸುಲೆಮ್ಮ, ಹಾಲಮ್ಮ, ಉಷಾ, ಜ್ಞಾನದೇವಿ, ರಾಜೇಶ್ವರಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂದಕನಳ್ಳಿ(ಜನವಾಡ):</strong> ‘ಆರೋಗ್ಯವಂತ ಮಕ್ಕಳ ಜನನಕ್ಕಾಗಿ ಗರ್ಭಿಣಿಯರು, ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಎಂ.ಎಸ್. ಹೇಳಿದರು.</p>.<p>ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಿರಿಧಾನ್ಯ, ಹಸಿರು ಸೊಪ್ಪು, ತರಕಾರಿ, ಮೊಟ್ಟೆ, ಮೀನು, ಹಾಲು, ಹಣ್ಣು ಸೇವನೆಯಿಂದ ಅಧಿಕ ಪ್ರಮಾಣದಲ್ಲಿ ವಿಟಮಿನ್ ದೊರೆಯುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ‘ಗರ್ಭಿಣಿಯರು, ಬಾಣಂತಿಯರು ಮಗುವಿಗೆ 2 ವರ್ಷ ತುಂಬುವವರೆಗೂ ಪೌಷ್ಟಿಕ ಆಹಾರಕ್ಕೆ ಪ್ರಾಮುಖ್ಯತೆ ಕೊಡಬೇಕು’ ಎಂದು ಹೇಳಿದರು.</p>.<p>ಗ್ರಾ.ಪಂ ಉಪಾಧ್ಯಕ್ಷೆ ಕೃಷ್ಣಬಾಯಿ, ಸದಸ್ಯೆ ಶೋಭಾ, ಪ್ರಮುಖರಾದ ವೀರಾಬಾಯಿ, ಸುಮಿತ್ರಾ, ಅವಿರತ ಸಿಂದೆ, ಸುರೇಖಾ, ಚಿನ್ನಮ್ಮ, ಜಗದೇವಿ, ಸುಲೆಮ್ಮ, ಹಾಲಮ್ಮ, ಉಷಾ, ಜ್ಞಾನದೇವಿ, ರಾಜೇಶ್ವರಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>