‘ಲಾಕ್ಡೌನ್ನಿಂದ ನಮ್ಮ ಶಾಲೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿರುವುದು ಸ್ವಲ್ಪ ನೋವು ತಂದಿದೆ. ಆನ್ಲೈನ್ ಪಾಠ ಮಾಡಲು ಶಿಕ್ಷಕರು ಪ್ಲಾನ್ ಮಾಡಿದ್ದೆವು. ಆದರೆ ಪಾಲಕರ ಬಳಿ ಸ್ಮಾರ್ಟ್ಫೊನ್ ಇರಲಿಲ್ಲ. ಈ ಕಾರಣ ಕಲಿಕೆಯಲ್ಲಿ ಆಗಿರುವ ಹಿನ್ನಡೆ ತಪ್ಪಿಸಲು ಈಗ ಸ್ಮಾರ್ಟ್ಕ್ಲಾಸ್ ಮೊರೆ ಹೋಗಿದ್ದೇವೆ. ನಮ್ಮ ಸ್ವಂತ ಮಕ್ಕಳ ಶಿಕ್ಷಣಕ್ಕಾಗಿ ಎಷ್ಟೋ ಹಣ ಸುರಿಯುತ್ತೇವೆ. ನಮಗೆ ಅನ್ನ ಕೊಡುವ ಶಾಲೆ ಮಕ್ಕಳ ಕಲಿಕೆಗಾಗಿ ಒಂದಿಷ್ಟು ಖರ್ಚು ಮಾಡಲು ನನಗೆ ಸಂತೋಷ ಎನಿಸುತ್ತಿದೆ’ ಎಂದು ಶಿಕ್ಷಕ ಮುತ್ತಣ್ಣ ರಂಡಾಳೆ ತಿಳಿಸಿದ್ದಾರೆ.