ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕ ಹಾಗೂ ಮಹಿಳಾ ಘಟಕಗಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಯುವ ಘಟಕ: ಗುರುನಾಥ ರಾಜಗಿರಾ (ಬೀದರ್), ಅಂಬಾದಾಸ ನೇಳಗೆ (ಔರಾದ್), ಅಕ್ಷಯ ಸೋಮನಾಥ ಮುದ್ದಾ (ಭಾಲ್ಕಿ), ನಾಗೇಶ ಮೇತ್ರೆ (ಹುಲಸೂರು), ಗುರುಲಿಂಗಪ್ಪ ದೇಗಾವ (ಬಸವಕಲ್ಯಾಣ).
ಮಹಿಳಾ ಘಟಕ: ರೂಪಾ ಪಾಟೀಲ(ಬೀದರ್), ಮಹಾನಂದಾ ಎಂಡೆ (ಔರಾದ್), ರೇಖಾ ಕಾಡಾದಿ (ಹುಲಸೂರು), ನಾಗಮ್ಮ ಎಚ್. ಭುರೆ (ಬಸವಕಲ್ಯಾಣ) ಹಾಗೂ ಚಂದ್ರಕಲಾ ಡಿಗ್ಗಿ (ಭಾಲ್ಕಿ).
ಬರುವ ದಿನಗಳಲ್ಲಿ ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.