<p>ಸಂತೇಮರಹಳ್ಳಿ:ಬಾಳೆಯ ಜೊತೆಗೆ ಅಂತರ್ ಬೆಳೆಯಾಗಿ ವಿವಿಧ ಬೆಳೆಗಳನ್ನು ಬೆಳೆದು ವ್ಯವಸಾಯದಲ್ಲಿ ಯಶಸ್ವಿಯಾಗಿದ್ದಾರೆ ಸಂತೇಮರಹಳ್ಳಿಯ ಕುಮಾರ್.</p>.<p>ವಾರ್ಷಿಕ ಬೆಳೆ ಬಾಳೆಯ ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕೋಸು, ಮಂಗಳೂರು ಸೌತೆ, ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾರೆ.</p>.<p>ಕುಮಾರ್ ಅವರು ಎರಡೂವರೆ ಎಕರೆಯಲ್ಲಿ ನೇಂದ್ರ ಬಾಳೆ ಹಾಕಿದ್ದಾರೆ. ಈ ಪೈಕಿ ಎರಡು ಎಕರೆಯಲ್ಲಿ ಅಂತರಬೆಳೆಯಾಗಿ ಎಲೆಕೋಸು (ಕ್ಯಾಬೇಜ್) ಬೆಳೆದು ಈಗ ಕಟಾವು ಹಂತಕ್ಕೆ ಬಂದಿದೆ.</p>.<p>ನರ್ಸರಿಯಲ್ಲಿ 1 ಪೈರಿಗೆ 60 ಪೈಸೆಯಂತೆ 35 ಸಾವಿರ ಪೈರಿಗೆ ₹20 ಸಾವಿರ ನೀಡಿ ನಾಟಿ ಮಾಡಿದ್ದಾರೆ. ಹೈನುಗಾರಿಕೆಯನ್ನೂ ಇವರು ಮಾಡುವುದರಿಂದ ಕೊಟ್ಟಿಗೆ ಗೊಬ್ಬರವನ್ನು ವ್ಯವಸಾಯಕ್ಕೆ ಹೆಚ್ಚು ಬಳಸಿ ಅಲ್ಪ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರಕ್ಕೆ ಹಣ ಖರ್ಚು ಮಾಡಿದ್ದಾರೆ. 90 ದಿನಗಳ ಅವಧಿಯ ಈ ಬೆಳೆಗೆ ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು. ಔಷಧ ಯಾವ ಸಮಯದಲ್ಲಿ ಸಿಂಪಡಿಸಬೇಕು. ಎಂಬುದಕ್ಕೆ ಆಗಾಗ್ಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ವ್ಯವಸಾಯ ಮುಂದುವರಿಸುತ್ತಾರೆ.</p>.<p>ಈವರೆಗೂ ಮೋಹನ್ ಅವರು ಕೋಸು ಬೆಳೆಯಲು ₹50 ಸಾವಿರ ಖರ್ಚು ಮಾಡಿದ್ದಾರೆ. ಫಸಲು ಚೆನ್ನಾಗಿದ್ದು, ಮೂರು ತಿಂಗಳಿಗೆ ಸರಿಯಾಗಿ ಕಟಾವು ಹಂತಕ್ಕೆ ಬಂದಿದೆ. ಒಂದು ಕೋಸು ಒಂದು ಕೆಜಿಯಿಂದ ಒಂದು ಮುಕ್ಕಾಲು ಕೆಜಿವರೆಗೆ ತೂಗುತ್ತದೆ. ಕೆಜಿಗೆ ₹12ರಂತೆ ಟನ್ ಕೋಸಿಗೆ ಸರಾಸರಿ ₹12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.</p>.<p>‘ಎರಡು ಎಕರೆಯಲ್ಲಿ 30ರಿಂದ 35 ಟನ್ವರೆಗೆ ಇಳುವರಿ ಬರುತ್ತದೆ. ₹3ಲಕ್ಷದವರೆಗೂ ಆದಾಯ ಸಿಗುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ತಮಿಳುನಾಡಿನಿಂದ ಬಂದು ಕೋಸು ಖರೀದಿಸುತ್ತಾರೆ’ ಎಂದು ಕುಮಾರ್ ಹೇಳಿದರು.</p>.<p>ಕೋಸು ಕಟಾವು ಆದ ನಂತರ ಗಿಡಗಳನ್ನು ಜಮೀನಿನಲ್ಲಿಯೇ ಬಿಟ್ಟು ಹಸಿರೆಲೆ ಗೊಬ್ಬರವಾಗಿ ಬಳಸಲಾಗುತ್ತದೆ. ನಂತರ ಮುಂದಿನ ಬೆಳೆಗೆ ಈರುಳ್ಳಿ, ಮಂಗಳೂರು ಸೌತೆ ಬೆಳೆಗಳನ್ನು ಕುಮಾರ್ ಬೆಳೆಯುತ್ತಾರೆ.</p>.<p class="Briefhead"><strong>ಹೈನುಗಾರಿಕೆಯಲ್ಲೂ ಯಶಸ್ಸು</strong></p>.<p>ಕುಮಾರ್ ಅವರು ಕೃಷಿ ಅಲ್ಲದೆ ಹೈನುಗಾರಿಕೆಯನ್ನು ಮಾಡುತ್ತಾರೆ. ಎರಡು ಹಸುಗಳನ್ನು ಸಾಕಿಕೊಂಡಿದ್ದಾರೆ.</p>.<p>ಬೆಳಿಗ್ಗೆಯಿಂದ ಸಂಜೆವರೆಗೆ ಜಮೀನಿನಲ್ಲಿಯೇ ಹಸುಗಳಿಗೆ ಆರೈಕೆ ಮಾಡುತ್ತಿದ್ದಾರೆ. ಜಮೀನಿನ ಅಂಚಿನ ಪ್ರದೇಶಗಳಲ್ಲಿ ಮೇವನ್ನು ಬೆಳೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ 6ರಿಂದ 7ಲೀಟರ್ವರೆಗೆ ಹಾಲು ಕರೆದು ಡೇರಿಗೆ ಹಾಕುತ್ತಾರೆ. ಹೈನುಗಾರಿಕೆಯಲ್ಲಿ ತಂದೆ ಇವರಿಗೆ ಸಹಾಯ ಮಾಡುತ್ತಾರೆ.</p>.<p>‘ವಾರ್ಷಿಕ ಬೆಳೆ ಒಂದನ್ನೇ ನಂಬಿಕೊಂಡರೆ ಕಷ್ಟ. ಜತೆಗೆ ಅಂತರ್ ಬೆಳೆಗಳನ್ನು ಬೆಳೆದು ಪ್ರತಿ ಮೂರು ತಿಂಗಳಿಗೊಮ್ಮೆ ಆದಾಯ ಕಾಣುತ್ತಿದ್ದೇನೆ. ಇದರಿಂದ ಯಶಸ್ಸು ಸಿಕ್ಕಿದೆ’ ಎಂದು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂತೇಮರಹಳ್ಳಿ:ಬಾಳೆಯ ಜೊತೆಗೆ ಅಂತರ್ ಬೆಳೆಯಾಗಿ ವಿವಿಧ ಬೆಳೆಗಳನ್ನು ಬೆಳೆದು ವ್ಯವಸಾಯದಲ್ಲಿ ಯಶಸ್ವಿಯಾಗಿದ್ದಾರೆ ಸಂತೇಮರಹಳ್ಳಿಯ ಕುಮಾರ್.</p>.<p>ವಾರ್ಷಿಕ ಬೆಳೆ ಬಾಳೆಯ ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕೋಸು, ಮಂಗಳೂರು ಸೌತೆ, ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾರೆ.</p>.<p>ಕುಮಾರ್ ಅವರು ಎರಡೂವರೆ ಎಕರೆಯಲ್ಲಿ ನೇಂದ್ರ ಬಾಳೆ ಹಾಕಿದ್ದಾರೆ. ಈ ಪೈಕಿ ಎರಡು ಎಕರೆಯಲ್ಲಿ ಅಂತರಬೆಳೆಯಾಗಿ ಎಲೆಕೋಸು (ಕ್ಯಾಬೇಜ್) ಬೆಳೆದು ಈಗ ಕಟಾವು ಹಂತಕ್ಕೆ ಬಂದಿದೆ.</p>.<p>ನರ್ಸರಿಯಲ್ಲಿ 1 ಪೈರಿಗೆ 60 ಪೈಸೆಯಂತೆ 35 ಸಾವಿರ ಪೈರಿಗೆ ₹20 ಸಾವಿರ ನೀಡಿ ನಾಟಿ ಮಾಡಿದ್ದಾರೆ. ಹೈನುಗಾರಿಕೆಯನ್ನೂ ಇವರು ಮಾಡುವುದರಿಂದ ಕೊಟ್ಟಿಗೆ ಗೊಬ್ಬರವನ್ನು ವ್ಯವಸಾಯಕ್ಕೆ ಹೆಚ್ಚು ಬಳಸಿ ಅಲ್ಪ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರಕ್ಕೆ ಹಣ ಖರ್ಚು ಮಾಡಿದ್ದಾರೆ. 90 ದಿನಗಳ ಅವಧಿಯ ಈ ಬೆಳೆಗೆ ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು. ಔಷಧ ಯಾವ ಸಮಯದಲ್ಲಿ ಸಿಂಪಡಿಸಬೇಕು. ಎಂಬುದಕ್ಕೆ ಆಗಾಗ್ಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ವ್ಯವಸಾಯ ಮುಂದುವರಿಸುತ್ತಾರೆ.</p>.<p>ಈವರೆಗೂ ಮೋಹನ್ ಅವರು ಕೋಸು ಬೆಳೆಯಲು ₹50 ಸಾವಿರ ಖರ್ಚು ಮಾಡಿದ್ದಾರೆ. ಫಸಲು ಚೆನ್ನಾಗಿದ್ದು, ಮೂರು ತಿಂಗಳಿಗೆ ಸರಿಯಾಗಿ ಕಟಾವು ಹಂತಕ್ಕೆ ಬಂದಿದೆ. ಒಂದು ಕೋಸು ಒಂದು ಕೆಜಿಯಿಂದ ಒಂದು ಮುಕ್ಕಾಲು ಕೆಜಿವರೆಗೆ ತೂಗುತ್ತದೆ. ಕೆಜಿಗೆ ₹12ರಂತೆ ಟನ್ ಕೋಸಿಗೆ ಸರಾಸರಿ ₹12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.</p>.<p>‘ಎರಡು ಎಕರೆಯಲ್ಲಿ 30ರಿಂದ 35 ಟನ್ವರೆಗೆ ಇಳುವರಿ ಬರುತ್ತದೆ. ₹3ಲಕ್ಷದವರೆಗೂ ಆದಾಯ ಸಿಗುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ತಮಿಳುನಾಡಿನಿಂದ ಬಂದು ಕೋಸು ಖರೀದಿಸುತ್ತಾರೆ’ ಎಂದು ಕುಮಾರ್ ಹೇಳಿದರು.</p>.<p>ಕೋಸು ಕಟಾವು ಆದ ನಂತರ ಗಿಡಗಳನ್ನು ಜಮೀನಿನಲ್ಲಿಯೇ ಬಿಟ್ಟು ಹಸಿರೆಲೆ ಗೊಬ್ಬರವಾಗಿ ಬಳಸಲಾಗುತ್ತದೆ. ನಂತರ ಮುಂದಿನ ಬೆಳೆಗೆ ಈರುಳ್ಳಿ, ಮಂಗಳೂರು ಸೌತೆ ಬೆಳೆಗಳನ್ನು ಕುಮಾರ್ ಬೆಳೆಯುತ್ತಾರೆ.</p>.<p class="Briefhead"><strong>ಹೈನುಗಾರಿಕೆಯಲ್ಲೂ ಯಶಸ್ಸು</strong></p>.<p>ಕುಮಾರ್ ಅವರು ಕೃಷಿ ಅಲ್ಲದೆ ಹೈನುಗಾರಿಕೆಯನ್ನು ಮಾಡುತ್ತಾರೆ. ಎರಡು ಹಸುಗಳನ್ನು ಸಾಕಿಕೊಂಡಿದ್ದಾರೆ.</p>.<p>ಬೆಳಿಗ್ಗೆಯಿಂದ ಸಂಜೆವರೆಗೆ ಜಮೀನಿನಲ್ಲಿಯೇ ಹಸುಗಳಿಗೆ ಆರೈಕೆ ಮಾಡುತ್ತಿದ್ದಾರೆ. ಜಮೀನಿನ ಅಂಚಿನ ಪ್ರದೇಶಗಳಲ್ಲಿ ಮೇವನ್ನು ಬೆಳೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ 6ರಿಂದ 7ಲೀಟರ್ವರೆಗೆ ಹಾಲು ಕರೆದು ಡೇರಿಗೆ ಹಾಕುತ್ತಾರೆ. ಹೈನುಗಾರಿಕೆಯಲ್ಲಿ ತಂದೆ ಇವರಿಗೆ ಸಹಾಯ ಮಾಡುತ್ತಾರೆ.</p>.<p>‘ವಾರ್ಷಿಕ ಬೆಳೆ ಒಂದನ್ನೇ ನಂಬಿಕೊಂಡರೆ ಕಷ್ಟ. ಜತೆಗೆ ಅಂತರ್ ಬೆಳೆಗಳನ್ನು ಬೆಳೆದು ಪ್ರತಿ ಮೂರು ತಿಂಗಳಿಗೊಮ್ಮೆ ಆದಾಯ ಕಾಣುತ್ತಿದ್ದೇನೆ. ಇದರಿಂದ ಯಶಸ್ಸು ಸಿಕ್ಕಿದೆ’ ಎಂದು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>