<p><strong>ಯಳಂದೂರು:</strong>ವನಪಾಲಕರ ಕಣ್ಣು ತಪ್ಪಿಸಿ ಕಾಡು ಪ್ರವೇಶ, ಅರಣ್ಯಕ್ಕೆ ಹೊಂದಿಕೊಂಡಂತಿರುವ ಕೆರೆ,ಕಟ್ಟೆ, ಜಲಾಶಯಗಳಿಗೆ ಅನಧಿಕೃತ ಪ್ರವೇಶ, ವನ್ಯಧಾಮದ ಸುತ್ತಮುತ್ತ ಕುಳಿತು ಹರಟುವುದು ಮತ್ತು ಮದ್ಯಪಾನ ಮಾಡುವವರಿಗೆ ಇನ್ನೂ ಮುಂದೆ ₹1000 ದಂಡ ಬೀಳಲಿದೆ.</p>.<p>ಅರಣ್ಯ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿರುವವ ವಿರುದ್ಧ ‘ದಂಡ’ ಪ್ರಯೋಗಕ್ಕೆ ಮುಂದಾಗಿರುವ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಅಲ್ಲಲ್ಲಿ ಫಲಕಗಳನ್ನು ಅಳವಡಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪ್ರವೇಶದ್ವಾರ, ಜಲಾವರಗಳ ಸಮೀಪ ರಜಾದಿನ, ವಿಶೇಷ ಸಂದರ್ಭಗಳಲ್ಲಿ ಕಾಡು-ಮೇಡು ಅಲೆಯುವವರ ಸಂಖ್ಯೆ ಇತ್ತೀಚೆಗೆಹೆಚ್ಚಾಗುತ್ತಿದೆ. ಮೋಜು-ಮಸ್ತಿಗಾಗಿ ಇಲ್ಲವೇ ಅಡವಿ ಸುತ್ತುವ ಚಟ ಹೊಂದಿರುವ ಕೆಲವರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನೊಳಕ್ಕೆ ಪ್ರವೇಶಿಸುತ್ತಿದ್ದಾರೆ.ಇದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.</p>.<p>‘ಸುಂದರ ಪರಿಸರ ಹುಡುಕಿಕೊಂಡು ಆಮೆಕೆರೆ ಸಮೀಪದ ಹೊಸಹಳ್ಳಿಕೆರೆ, ಕೃಷ್ಣಯ್ಯನಕಟ್ಟೆಮತ್ತು ಬೆಲವತ್ತ ಜಲಾಶಯಗಳ ಸುತ್ತಮುತ್ತ ಅಲೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರುಮೋಜು-ಮಸ್ತಿಗಾಗಿ ಇಲ್ಲವೇ ಗಾಂಜಾ ಗಿಡಗಳ ಸಂಗ್ರಹಕ್ಕೆ ಅಲೆದಾಡುವುದೂ ಇದೆ. ಈ ವೇಳೆ ಕಾಡುಪ್ರಾಣಿಗಳ ವೀಕ್ಷಣೆ ನೆಪದಲ್ಲಿ ಅರಣ್ಯ ಪ್ರವೇಶಿಸುವವರನ್ನು ತಡೆಯಲು ಜಾಗೃತಿಮೂಡಿಸಲಾಗುತ್ತದೆ. ಇದರ ಭಾಗವಾಗಿ ಮೊದಲು ಎಚ್ಚರಿಕೆ ಫಲಕ ಅಳವಡಿಸಲಾಗುತ್ತಿದೆ’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.</p>.<p>ಕಾಡಂಚಿನ ಪ್ರದೇಶಗಳಲ್ಲಿ ಜನ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ದಂಡ ವಿಧಿಸುವ ಎಚ್ಚರಿಕೆ ಹೊಂದಿರುವ ಸೂಚನಾ ಫಲಕ ಅಳವಡಿಸಲಾಗುತ್ತಿದೆ ಎಂದು ಬಿಳಿಗಿರಿರಂಗನಬೆಟ್ಟ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಲೋಕೇಶ್ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಆಮೆಕೆರೆ ಆಣೆಕಟ್ಟೆ, ಬೆಲವತ್ತ ಡ್ಯಾಂ ಮತ್ತಿತರ ಕಡೆಗಳಲ್ಲಿ ಫಲಕಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿ ಇದೆ. ಬಾಗಿಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯಗುಂಬಳ್ಳಿ ತಪಾಸಣಾ ಕೇಂದ್ರದ ಮುಂಭಾಗ ದೊಡ್ಡ ಫಲಕ ಅಳವಡಿಸಲು ಸಿದ್ಧತೆ ನಡೆದಿದೆ.</p>.<p class="Subhead">₹1000 ದಂಡ:ಬೆಟ್ಟದ ಪ್ರವೇಶದ್ವಾರದ ಚೆಕ್ ಪೋಸ್ಟ್ ಬಳಿ ದೊಡ್ಡ ಫಲಕ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಉಳಿದ ಭಾಗಗಳಲ್ಲಿ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಪ್ರಕಾರ, ಬಿಆರ್ಟ ವನ್ಯ ಜೀವಿಧಾಮದ ಒಳಭಾಗಕ್ಕೆ<br />ಪ್ರವೇಶಿಸುವುದನ್ನು ನಿಷೇಧಿಸಿದೆ. ನಿಯಮಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದೆ ಜೊತೆಗೆ ₹1,000ದಂಡವನ್ನೂ ವಿಧಿಸಲಾಗುವುದು’ ಎಂದು ಆರ್ಎಫ್ಒ ಲೋಕೇಶ್ ಮೂರ್ತಿ ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong>ವನಪಾಲಕರ ಕಣ್ಣು ತಪ್ಪಿಸಿ ಕಾಡು ಪ್ರವೇಶ, ಅರಣ್ಯಕ್ಕೆ ಹೊಂದಿಕೊಂಡಂತಿರುವ ಕೆರೆ,ಕಟ್ಟೆ, ಜಲಾಶಯಗಳಿಗೆ ಅನಧಿಕೃತ ಪ್ರವೇಶ, ವನ್ಯಧಾಮದ ಸುತ್ತಮುತ್ತ ಕುಳಿತು ಹರಟುವುದು ಮತ್ತು ಮದ್ಯಪಾನ ಮಾಡುವವರಿಗೆ ಇನ್ನೂ ಮುಂದೆ ₹1000 ದಂಡ ಬೀಳಲಿದೆ.</p>.<p>ಅರಣ್ಯ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿರುವವ ವಿರುದ್ಧ ‘ದಂಡ’ ಪ್ರಯೋಗಕ್ಕೆ ಮುಂದಾಗಿರುವ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಅಲ್ಲಲ್ಲಿ ಫಲಕಗಳನ್ನು ಅಳವಡಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪ್ರವೇಶದ್ವಾರ, ಜಲಾವರಗಳ ಸಮೀಪ ರಜಾದಿನ, ವಿಶೇಷ ಸಂದರ್ಭಗಳಲ್ಲಿ ಕಾಡು-ಮೇಡು ಅಲೆಯುವವರ ಸಂಖ್ಯೆ ಇತ್ತೀಚೆಗೆಹೆಚ್ಚಾಗುತ್ತಿದೆ. ಮೋಜು-ಮಸ್ತಿಗಾಗಿ ಇಲ್ಲವೇ ಅಡವಿ ಸುತ್ತುವ ಚಟ ಹೊಂದಿರುವ ಕೆಲವರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನೊಳಕ್ಕೆ ಪ್ರವೇಶಿಸುತ್ತಿದ್ದಾರೆ.ಇದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.</p>.<p>‘ಸುಂದರ ಪರಿಸರ ಹುಡುಕಿಕೊಂಡು ಆಮೆಕೆರೆ ಸಮೀಪದ ಹೊಸಹಳ್ಳಿಕೆರೆ, ಕೃಷ್ಣಯ್ಯನಕಟ್ಟೆಮತ್ತು ಬೆಲವತ್ತ ಜಲಾಶಯಗಳ ಸುತ್ತಮುತ್ತ ಅಲೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರುಮೋಜು-ಮಸ್ತಿಗಾಗಿ ಇಲ್ಲವೇ ಗಾಂಜಾ ಗಿಡಗಳ ಸಂಗ್ರಹಕ್ಕೆ ಅಲೆದಾಡುವುದೂ ಇದೆ. ಈ ವೇಳೆ ಕಾಡುಪ್ರಾಣಿಗಳ ವೀಕ್ಷಣೆ ನೆಪದಲ್ಲಿ ಅರಣ್ಯ ಪ್ರವೇಶಿಸುವವರನ್ನು ತಡೆಯಲು ಜಾಗೃತಿಮೂಡಿಸಲಾಗುತ್ತದೆ. ಇದರ ಭಾಗವಾಗಿ ಮೊದಲು ಎಚ್ಚರಿಕೆ ಫಲಕ ಅಳವಡಿಸಲಾಗುತ್ತಿದೆ’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.</p>.<p>ಕಾಡಂಚಿನ ಪ್ರದೇಶಗಳಲ್ಲಿ ಜನ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ದಂಡ ವಿಧಿಸುವ ಎಚ್ಚರಿಕೆ ಹೊಂದಿರುವ ಸೂಚನಾ ಫಲಕ ಅಳವಡಿಸಲಾಗುತ್ತಿದೆ ಎಂದು ಬಿಳಿಗಿರಿರಂಗನಬೆಟ್ಟ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಲೋಕೇಶ್ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಆಮೆಕೆರೆ ಆಣೆಕಟ್ಟೆ, ಬೆಲವತ್ತ ಡ್ಯಾಂ ಮತ್ತಿತರ ಕಡೆಗಳಲ್ಲಿ ಫಲಕಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿ ಇದೆ. ಬಾಗಿಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯಗುಂಬಳ್ಳಿ ತಪಾಸಣಾ ಕೇಂದ್ರದ ಮುಂಭಾಗ ದೊಡ್ಡ ಫಲಕ ಅಳವಡಿಸಲು ಸಿದ್ಧತೆ ನಡೆದಿದೆ.</p>.<p class="Subhead">₹1000 ದಂಡ:ಬೆಟ್ಟದ ಪ್ರವೇಶದ್ವಾರದ ಚೆಕ್ ಪೋಸ್ಟ್ ಬಳಿ ದೊಡ್ಡ ಫಲಕ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಉಳಿದ ಭಾಗಗಳಲ್ಲಿ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಪ್ರಕಾರ, ಬಿಆರ್ಟ ವನ್ಯ ಜೀವಿಧಾಮದ ಒಳಭಾಗಕ್ಕೆ<br />ಪ್ರವೇಶಿಸುವುದನ್ನು ನಿಷೇಧಿಸಿದೆ. ನಿಯಮಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದೆ ಜೊತೆಗೆ ₹1,000ದಂಡವನ್ನೂ ವಿಧಿಸಲಾಗುವುದು’ ಎಂದು ಆರ್ಎಫ್ಒ ಲೋಕೇಶ್ ಮೂರ್ತಿ ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>