ಬೆಳೆಗಾರರು ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ಮಿಶ್ರ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ, ಮೆಣಸಿನಕಾಯಿ ನಾಟಿ ಮಾಡುವವರು ಹೆಚ್ಚಿನ ಇಳುವರಿ ಮತ್ತು ಹಲವು ತಿಂಗಳು ನಿರಂತರ ಕೊಯ್ಲಿಗೆ ಬರುವ ಹೊಸ ತಳಿಗಳತ್ತ ಚಿತ್ತ ಹರಿಸುತ್ತಾರೆ. ತಾಕಿನಲ್ಲಿ ಹದವಾದ ಬಿಸಿಲು, ಸಸಿಗಳ ದಟ್ಟಣೆ ನಿಯಂತ್ರಿಸಿ, ಕಳೆ ನಿಯಂತ್ರಣ, ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಆದರೆ, ಈಚೆಗೆ ನಿರೀಕ್ಷೆಗೂ ಮೀರಿ ಸುರಿದ ಮಳೆ ಕೃಷಿಕರ ಯೋಜನೆಗಳನ್ನು ಹಿಮ್ಮೆಟ್ಟಿಸಿದೆ. ಹೆಚ್ಚು ಖರ್ಚು–ವೆಚ್ಚಕ್ಕೆ ಕಾರಣವಾಗಿದೆ.