ಮಕ್ಕಳು ಎಂದಿನಂತೆ ಗುರುವಾರ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದರು. ಬೆಳಿಗ್ಗೆ 10.30ಕ್ಕೆ ಮಕ್ಕಳು ಹಾಲು ಕುಡಿಯುತ್ತಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲ್ಚಾವಣಿಯ ಮಧ್ಯಭಾಗದಿಂದ ಗಾರೆ ಕಳಚಿದೆ. ಈ ಸಂದರ್ಭದಲ್ಲಿ ಅಶೋಕ (5), ಜ್ಯೋತಿ (5), ಅರ್ಜುನ (6) ಮತ್ತು ಲಂಕೇಶ (5) ಎಂಬ ಮಕ್ಕಳ ಕಾಲಿನ ಮೇಲೆ ಗಾರೆ ಬಿದ್ದಿದೆ. ಹೀಗಾಗಿ ತರಚಿದ ಗಾಯವಾಗಿದೆ. ತಕ್ಷಣವೇ ಅಂಗನವಾಡಿ ಕಾರ್ಯಕರ್ತರು ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು.