<p><strong>ಚಾಮರಾಜನಗರ:</strong> ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ತಡ ರಾತ್ರಿವರೆಗೆ ಹುಂಡಿ ಎಣಿಕೆ ನಡೆದಿದ್ದು, ₹2.33 ಕೋಟಿ ಸಂಗ್ರಹವಾಗಿದೆ.</p>.<p>122 ದಿನಗಳ ಬಳಿಕ ಹುಂಡಿ ಎಣಿಕೆ ನಡೆದಿದೆ. ಈ ಪೈಕಿ 75 ದಿನಗಳ ಕಾಲ ಲಾಕ್ಡೌನ್ ಕಾರಣಕ್ಕೆ ದೇವಾಲಯ ಭಕ್ತರಿಗೆ ಬಂದ್ ಆಗಿತ್ತು. ಹಾಗಾಗಿ, 47 ದಿನಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಕಾಣಿಕೆ ಸಂಗ್ರಹ ಆದಂತಾಗಿದೆ.</p>.<p>ಭಕ್ತರು 155 ಗ್ರಾಂ ಚಿನ್ನ ಹಾಗೂ 3.258 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ.</p>.<p><strong>ಇಂದಿನಿಂದ ದಾಸೋಹ:</strong> ಈ ಮಧ್ಯೆ, ಕೋವಿಡ್ ಎರಡನೇ ಅಲೆಯ ಕಾರಣಕ್ಕೆ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಶುಕ್ರವಾರ ಮಧ್ಯಾಹ್ನದಿಂದ ಆರಂಭವಾಗಲಿದೆ.</p>.<p>ಏಪ್ರಿಲ್ 22ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಜುಲೈ 6ರಂದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಮುಂಜಾಗ್ರತಾ ಕ್ರಮವಾಗಿ ದಾಸೋಹ ವ್ಯವಸ್ಥೆಯನ್ನು ಆರಂಭಿಸಿರಲಿಲ್ಲ.</p>.<p>ಶುಕ್ರವಾರ ಮಧ್ಯಾಹ್ನದಿಂದ ದಾಸೋಹ ಆರಂಭಿಸಲಾಗುವುದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಡಾರ್ಮಿಟಿರಿ, ಕಾಟೇಜ್ ಸೌಲಭ್ಯ:</strong> ದರ್ಶನಕ್ಕೆ ಅವಕಾಶ ಕಲ್ಪಿಸಿದ ನಂತರ ಕೆಲವೊಂದು ವಸತಿಗೃಹಗಳನ್ನು ಮಾತ್ರ ಕಾಯ್ದಿರಿಸಲು ಅವಕಾಶ ಇತ್ತು. ಇಂದಿನಿಂದ ಡಾರ್ಮಿಟರಿ ಹಾಗೂ ಕಾಟೇಜುಗಳನ್ನು ಭಕ್ತಾದಿಗಳ ಮಿತಿಯೊಂದಿಗೆ ತಂಗಲು ವ್ಯವಸ್ಥೆ ಮಾಡಿದೆ.</p>.<p>ಪ್ರತಿ ಡಾರ್ಮಿಟರಿಯಲ್ಲಿನ ಒಂದು ದೊಡ್ಡ ಹಾಲ್ನಲ್ಲಿ 10 ಜನರಿಗೆ ಮಾತ್ರ ತಂಗಲು ಅವಕಾಶ. ಎಲ್ಲ 10 ಭಕ್ತಾದಿಗಳಿಗೆ ಉಚಿತ ಚಾಪೆ, ದಿಂಬು ನೀಡಲಾಗುವುದು ಮತ್ತು ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಯವಿಭವಸ್ವಾಮಿ ಅವರು ಹೇಳಿದ್ದಾರೆ.</p>.<p>ಉಳಿದಂತೆ ಮುಡಿ ಸೇವೆ, ಲಾಡು ಪ್ರಸಾದ, ಹಣ್ಣು ಕಾಯಿ ಒಡೆಯುವುದು, ತೀರ್ಥ ಪ್ರಸಾದ, ಸೇವೆಗಳು ಮತ್ತು ಉತ್ಸವಗಳ ನಿರ್ಬಂಧ ಮುಂದಿನ ಆದೇಶದವರೆಗೆ ಮುಂದುವರೆದಿದೆ.</p>.<p>ಸಂದೇಹಗಳಿದ್ದಲ್ಲಿ ದೇವಾಲಯದ ಸಹಾಯವಾಣಿ 1860 425 4350 ಸಂಪರ್ಕಿಸಬಹುದು ಎಂದು ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/district/belagavi/karnataka-rains-pune-bangalore-highway-bund-due-to-heavy-rain-in-belagavi-district-850813.html" target="_blank">ಉಕ್ಕಿ ಹರಿದ ವೇದಗಂಗಾ ನದಿ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ತಡ ರಾತ್ರಿವರೆಗೆ ಹುಂಡಿ ಎಣಿಕೆ ನಡೆದಿದ್ದು, ₹2.33 ಕೋಟಿ ಸಂಗ್ರಹವಾಗಿದೆ.</p>.<p>122 ದಿನಗಳ ಬಳಿಕ ಹುಂಡಿ ಎಣಿಕೆ ನಡೆದಿದೆ. ಈ ಪೈಕಿ 75 ದಿನಗಳ ಕಾಲ ಲಾಕ್ಡೌನ್ ಕಾರಣಕ್ಕೆ ದೇವಾಲಯ ಭಕ್ತರಿಗೆ ಬಂದ್ ಆಗಿತ್ತು. ಹಾಗಾಗಿ, 47 ದಿನಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಕಾಣಿಕೆ ಸಂಗ್ರಹ ಆದಂತಾಗಿದೆ.</p>.<p>ಭಕ್ತರು 155 ಗ್ರಾಂ ಚಿನ್ನ ಹಾಗೂ 3.258 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ.</p>.<p><strong>ಇಂದಿನಿಂದ ದಾಸೋಹ:</strong> ಈ ಮಧ್ಯೆ, ಕೋವಿಡ್ ಎರಡನೇ ಅಲೆಯ ಕಾರಣಕ್ಕೆ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಶುಕ್ರವಾರ ಮಧ್ಯಾಹ್ನದಿಂದ ಆರಂಭವಾಗಲಿದೆ.</p>.<p>ಏಪ್ರಿಲ್ 22ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಜುಲೈ 6ರಂದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಮುಂಜಾಗ್ರತಾ ಕ್ರಮವಾಗಿ ದಾಸೋಹ ವ್ಯವಸ್ಥೆಯನ್ನು ಆರಂಭಿಸಿರಲಿಲ್ಲ.</p>.<p>ಶುಕ್ರವಾರ ಮಧ್ಯಾಹ್ನದಿಂದ ದಾಸೋಹ ಆರಂಭಿಸಲಾಗುವುದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಡಾರ್ಮಿಟಿರಿ, ಕಾಟೇಜ್ ಸೌಲಭ್ಯ:</strong> ದರ್ಶನಕ್ಕೆ ಅವಕಾಶ ಕಲ್ಪಿಸಿದ ನಂತರ ಕೆಲವೊಂದು ವಸತಿಗೃಹಗಳನ್ನು ಮಾತ್ರ ಕಾಯ್ದಿರಿಸಲು ಅವಕಾಶ ಇತ್ತು. ಇಂದಿನಿಂದ ಡಾರ್ಮಿಟರಿ ಹಾಗೂ ಕಾಟೇಜುಗಳನ್ನು ಭಕ್ತಾದಿಗಳ ಮಿತಿಯೊಂದಿಗೆ ತಂಗಲು ವ್ಯವಸ್ಥೆ ಮಾಡಿದೆ.</p>.<p>ಪ್ರತಿ ಡಾರ್ಮಿಟರಿಯಲ್ಲಿನ ಒಂದು ದೊಡ್ಡ ಹಾಲ್ನಲ್ಲಿ 10 ಜನರಿಗೆ ಮಾತ್ರ ತಂಗಲು ಅವಕಾಶ. ಎಲ್ಲ 10 ಭಕ್ತಾದಿಗಳಿಗೆ ಉಚಿತ ಚಾಪೆ, ದಿಂಬು ನೀಡಲಾಗುವುದು ಮತ್ತು ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಯವಿಭವಸ್ವಾಮಿ ಅವರು ಹೇಳಿದ್ದಾರೆ.</p>.<p>ಉಳಿದಂತೆ ಮುಡಿ ಸೇವೆ, ಲಾಡು ಪ್ರಸಾದ, ಹಣ್ಣು ಕಾಯಿ ಒಡೆಯುವುದು, ತೀರ್ಥ ಪ್ರಸಾದ, ಸೇವೆಗಳು ಮತ್ತು ಉತ್ಸವಗಳ ನಿರ್ಬಂಧ ಮುಂದಿನ ಆದೇಶದವರೆಗೆ ಮುಂದುವರೆದಿದೆ.</p>.<p>ಸಂದೇಹಗಳಿದ್ದಲ್ಲಿ ದೇವಾಲಯದ ಸಹಾಯವಾಣಿ 1860 425 4350 ಸಂಪರ್ಕಿಸಬಹುದು ಎಂದು ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/district/belagavi/karnataka-rains-pune-bangalore-highway-bund-due-to-heavy-rain-in-belagavi-district-850813.html" target="_blank">ಉಕ್ಕಿ ಹರಿದ ವೇದಗಂಗಾ ನದಿ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>