<p><strong>ಗುಂಡ್ಲುಪೇಟೆ:</strong> ‘ಯುವತಿ ಕಾಣೆಯಾಗಿದ್ದ ವಿಷಯದಲ್ಲಿ ಪೊಲೀಸ್ ಠಾಣೆಗೆ ಪ್ರತಿದೂರು ನೀಡಲು ಬಂದಿದ್ದ ಯುವಕನಿಗೆ ಶನಿವಾರ ರಾತ್ರಿ ಚಾಕುವಿನಿಂದ ದಾಳಿ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.</p>.<p>ಪಟ್ಟಣದ ಪೌರ ಕಾರ್ಮಿಕರ ಕಾಲೊನಿಯ ಅರ್ಮುಗಂ (22) ಗಾಯಾಳು. ಜಾಕೀರ್ ಶರೀಫ್ ಚಾಕು ಇರಿದ ಆರೋಪಿ. ಜಕೀರ್ ಶರೀಫ್ ಹಾಗೂ ಮಹದೇವಪ್ರಸಾದ್ ಎಂಬುವರ ವಿರುದ್ಧ ಜಾತಿನಿಂದನೆ, ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.</p>.<p>ಅರ್ಮುಗಂ ಸಂಬಂಧಿ ಮಹೇಂದ್ರ ಎಂಬಾತ ನಮ್ಮ ಯುವಕ ಕಾಣೆಯಾಗಿದ್ದಾನೆ ಎಂದು ಪಟ್ಟಣದ ಠಾಣೆಗೆ ಪ್ರತಿದೂರು ಸಲ್ಲಿಸಲು ಬಂದಿದ್ದ ವೇಳೆ ಘಟನೆ ನಡೆದಿದೆ. ಗಾಯಾಳು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಯುವತಿ ಅ.1 ರಿಂದ ಕಾಣೆಯಾಗಿದ್ದರು. ಕಾಣೆಯಾಗಿದ್ದ ಯುವತಿಯನ್ನು ಮಹೇಂದ್ರ ಎಂಬಾತ ಕರೆದೊಯ್ದಿದ್ದಾನೆ ಎಂಬ ಸಂಶಯದಿಂದ ಯುವತಿಯ ಸಹೋದರ ಜಾಕೀರ್ ಶರೀಫ್ ಮಹೇಂದ್ರನ ತಾಯಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ್ದರು ಎಂದು ದೂರಲಾಗಿದೆ. ಹೀಗಾಗಿ, ‘ ತನ್ನ ಮಗನೂ ಕಾಣೆಯಾಗಿದ್ದಾನೆ’ ಎಂದು ಪ್ರತಿದೂರು ಸಲ್ಲಿಸಲು ಬಂದಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.</p>.<p>ಯುವತಿಯನ್ನು ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong> ‘ಯುವತಿ ಕಾಣೆಯಾಗಿದ್ದ ವಿಷಯದಲ್ಲಿ ಪೊಲೀಸ್ ಠಾಣೆಗೆ ಪ್ರತಿದೂರು ನೀಡಲು ಬಂದಿದ್ದ ಯುವಕನಿಗೆ ಶನಿವಾರ ರಾತ್ರಿ ಚಾಕುವಿನಿಂದ ದಾಳಿ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.</p>.<p>ಪಟ್ಟಣದ ಪೌರ ಕಾರ್ಮಿಕರ ಕಾಲೊನಿಯ ಅರ್ಮುಗಂ (22) ಗಾಯಾಳು. ಜಾಕೀರ್ ಶರೀಫ್ ಚಾಕು ಇರಿದ ಆರೋಪಿ. ಜಕೀರ್ ಶರೀಫ್ ಹಾಗೂ ಮಹದೇವಪ್ರಸಾದ್ ಎಂಬುವರ ವಿರುದ್ಧ ಜಾತಿನಿಂದನೆ, ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.</p>.<p>ಅರ್ಮುಗಂ ಸಂಬಂಧಿ ಮಹೇಂದ್ರ ಎಂಬಾತ ನಮ್ಮ ಯುವಕ ಕಾಣೆಯಾಗಿದ್ದಾನೆ ಎಂದು ಪಟ್ಟಣದ ಠಾಣೆಗೆ ಪ್ರತಿದೂರು ಸಲ್ಲಿಸಲು ಬಂದಿದ್ದ ವೇಳೆ ಘಟನೆ ನಡೆದಿದೆ. ಗಾಯಾಳು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಯುವತಿ ಅ.1 ರಿಂದ ಕಾಣೆಯಾಗಿದ್ದರು. ಕಾಣೆಯಾಗಿದ್ದ ಯುವತಿಯನ್ನು ಮಹೇಂದ್ರ ಎಂಬಾತ ಕರೆದೊಯ್ದಿದ್ದಾನೆ ಎಂಬ ಸಂಶಯದಿಂದ ಯುವತಿಯ ಸಹೋದರ ಜಾಕೀರ್ ಶರೀಫ್ ಮಹೇಂದ್ರನ ತಾಯಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ್ದರು ಎಂದು ದೂರಲಾಗಿದೆ. ಹೀಗಾಗಿ, ‘ ತನ್ನ ಮಗನೂ ಕಾಣೆಯಾಗಿದ್ದಾನೆ’ ಎಂದು ಪ್ರತಿದೂರು ಸಲ್ಲಿಸಲು ಬಂದಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.</p>.<p>ಯುವತಿಯನ್ನು ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>