ಎಲ್ಲ ಸೇವೆಗಳ ದರ ಹೆಚ್ಚಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಟ್ಟದಲ್ಲಿ ನವೆಂಬರ್ 25ರಂದು ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ರಥೋತ್ಸವದ ಶುಲ್ಕ ಪರಿಷ್ಕರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಚಿನ್ನದ ತೇರು ಮಾತ್ರವಲ್ಲದೇ, ಇತರ ತೇರು ಸೇವೆಗಳ (ಬಸವ ವಾಹನ, ರುದ್ರಾಕ್ಷಿ ವಾಹನ) ದರಗಳನ್ನು ಶೇ 30–35ರಷ್ಟು ಹೆಚ್ಚಿಸಲಾಗಿದೆ. ಮಿಶ್ರ ಪ್ರಸಾದದ ಬೆಲೆ ₹100ರಿಂದ ₹125ಕ್ಕೆ ಏರಿದೆ. ಬೆಟ್ಟದ ಪ್ರವೇಶ ಶುಲ್ಕದರವನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.