<p><strong>ಯಳಂದೂರು</strong>: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥನ ಸಂಕ್ರಾಂತಿ ಚಿಕ್ಕಜಾತ್ರೆ ಇದೇ 15 ರಂದುಜರುಗಲಿದೆ. ಕೋವಿಡ್ ಕಾರಣಕ್ಕೆ ಈ ಬಾರಿ ಸರಳ ರೀತಿಯಲ್ಲಿ ಜಾತ್ರೆ ನಡೆಯಲಿದೆ.ಜಾತ್ರೆಯಲ್ಲಿ ರಥೋತ್ಸವಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳು ಇರುವುದಿಲ್ಲ. ಭಕ್ತರು ಕೋವಿಡ್ಮಾರ್ಗಸೂಚಿ ಪಾಲನೆಯೊಂದಿಗೆ ಸ್ವಾಮಿಯ ದರ್ಶನ ಪಡೆಯಲು ಅವಕಾಶ ಇರಲಿದೆ.</p>.<p>ಪ್ರತಿ ವರ್ಷ ಉತ್ತರಾಯಣ ಪುಣ್ಯ ಕಾಲದ ಆರಂಭದಲ್ಲಿ ಚಿಕ್ಕ ರಥೋತ್ಸವಕ್ಕೆ ಚಾಲನೆನೀಡಲಾಗುತ್ತಿತ್ತು. ಗ್ರಾಮೀಣ ಜನರು ಹೊಸ ಋತು ಸ್ವಾಗತಿಸುತ್ತ, ಕೊಯ್ಲು ಮಾಡಿದ ಧವಸಧಾನ್ಯಗಳನ್ನು ತೇರಿಗೆ ಸಮಪರ್ಪಿಸಿ, ಧನ್ಯತೆ ಮೆರೆಯುತ್ತಿದ್ದರು. ದೇವಾಲಯದದ ಸುತ್ತ ಕಬ್ಬುಮತ್ತು ತಳಿರು ತೋರಣಗಳಿಂದ ಅಲಂಕರಿಸಿ, ಎಳ್ಳು, ಬೆಲ್ಲದ ಬ್ಯಾಟಮಣೆ ಉತ್ಸವ ಬನದ ತುಂಬಕಲರವ ತುಂಬುತ್ತಿತ್ತು. ದಾಸರ ಜಾಗಟೆ ಸದ್ದು, ಧೂಪ, ದೀಪದ ಸುಗಂಧ ನೆರದವರ ಮನದಲ್ಲಿಭಕ್ತಿ, ಭಾವ ತುಂಬುತ್ತಿತ್ತು</p>.<p>ದೇವಸ್ಥಾನದ ಕಾಮಗಾರಿಯ ಕಾರಣಕ್ಕೆ ನಾಲ್ಕು ವರ್ಷಗಳಿಂದ ಚಿಕ್ಕ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿಲ್ಲ. ಚಿಕ್ಕರಥೋತ್ಸವವೂ ನಡೆದಿರಲಿಲ್ಲ. ಈ ವರ್ಷ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಕೋವಿಡ್ ಹಾವಳಿಯೂ ಸೇರಿ ಜಾತ್ರೋತ್ಸವವನ್ನು ಮಸುಕಾಗಿಸಿದೆ. ಸಂಕ್ರಾಂತಿ ಹಬ್ಬದ ಮರುದಿನ ಜರುಗುತ್ತಿದ್ದಚಿಕ್ಕರಥದ ಸದ್ದು ಈ ಬಾರಿಯೂ ಕೇಳಿಸದು.</p>.<p><strong>ಧನುರ್ಮಾಸ ಸಮಾಪ್ತಿ: </strong>‘ಜ.14ರಂದು ಮಕರ ರಾಶಿಗೆ ಸೂರ್ಯನ ಪ್ರವೇಶದ ಮೂಲಕಸಂಕ್ರಾಂತಿ ಹಬ್ಬ ಕಳೆಗಟ್ಟುತ್ತದೆ. ಧನುರ್ಮಾಸ ಪೂಜೆ ಸಮಾಪ್ತಿಯಾಗುತ್ತದೆ.ಶುಕ್ರವಾರ ಬೆಟ್ಟದಲ್ಲಿ ಸಂಕ್ರಾಂತಿ ಪೂಜೆ ಮಾತ್ರ ನಡೆಯಲಿದೆ. ಶನಿವಾರವೂ ರಂಗನಾಥನದೇವಾಲಯಕ್ಕೆ ಹೆಚ್ಚಿನ ಭಕ್ತರ ಆಗಮನದ ನಿರೀಕ್ಷೆ ಇದೆ. ಮುಂಜಾನೆ 7 ರಿಂದ ನಿತ್ಯ ಪೂಜೆಪೂಜೆ ಆರಂಭವಾಗುತ್ತದೆ. ವಿಶೇಷ ಪೂಜೆ, ತೀರ್ಥ ಮತ್ತು ಪ್ರಸಾದ ವಿತರಣೆ ಇರುವುದಿಲ್ಲ’ ಎಂದು ಪ್ರಧಾನ ಅರ್ಚಕ ರವಿಕುಮಾರ್ ಹೇಳಿದರು.</p>.<p class="Subhead"><strong>ಜಾತ್ರೆ ಬದಲು ದರ್ಶನ: </strong>‘ಜನಸಂದಣಿ ಇದ್ದ ಸ್ಥಳದಲ್ಲಿ ಒಟ್ಟಿಗೆ ಸೇರಬಾರದು. ಮುಖಗವಸು, ಸ್ಯಾನಿಟೈಸರ್ ಮತ್ತುವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು.ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು. ಕೋವಿಡ್-19 ಕಾರಣದಿಂದ ಜಾತ್ರೋತ್ಸವಕ್ಕೆ ಬದಲು ಸಾಂಪ್ರದಾಯಿಕ ದರ್ಶನ ಮಾತ್ರ ಇರಲಿದೆ. ಭಕ್ತರಿಗೆ ಶೌಚಾಲಯ,ಶುದ್ಧ ಕುಡಿಯುವ ನೀರು ಅನುಕೂಲ ಕಲ್ಪಿಸಲಾಗುವುದು. ದಾಸೋಹ ಮತ್ತು ಅರವಟ್ಟಿಗೆತೆರೆಯಲು ಅವಕಾಶ ಇರುವುದಿಲ್ಲ’ ಎಂದು ದೇವಾಲಯದ ದೇಗುಲದ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ಸಂಕ್ರಾಂತಿ ಸಂಕ್ರಮಣ: </strong>ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುತ್ತದೆ. ಈ ಸಮಯ ಹುಟ್ಟು ಮತ್ತು ಸಾವಿಗೆ ಶ್ರೇಷ್ಠವೆಂದುಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸಮಸ್ತ ದೇವತಾ ಕಾರ್ಯಗಳು ಇಲ್ಲಿಂದಲೇಆರಂಭವಾಗುತ್ತವೆ. ಎಳ್ಳೆಣ್ಣೆ ದೀಪ, ಎಳ್ಳಿನ ಸ್ನಾನ ಮತ್ತು ಎಳ್ಳುದಾನಕ್ಕೆಮಹತ್ವವಿದೆ. ರೈತರು ಪೈರು ತೆಗೆಯುವಾಗ ಕಾಳನ್ನು ಸಂಗ್ರಹಿಸಿ, ದೇವರಿಗೆ ಅರ್ಪಿಸುವಮೂಲಕ ಸಮೃದ್ಧಿ, ಶುಭ ಕಾಮನೆಗಳು ದೊರೆಯಲೆಂದು ಭಕ್ತರು ಈ ಪರ್ವ ಕಾಲದಲ್ಲಿ ದೇವರನ್ನು ಬೇಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥನ ಸಂಕ್ರಾಂತಿ ಚಿಕ್ಕಜಾತ್ರೆ ಇದೇ 15 ರಂದುಜರುಗಲಿದೆ. ಕೋವಿಡ್ ಕಾರಣಕ್ಕೆ ಈ ಬಾರಿ ಸರಳ ರೀತಿಯಲ್ಲಿ ಜಾತ್ರೆ ನಡೆಯಲಿದೆ.ಜಾತ್ರೆಯಲ್ಲಿ ರಥೋತ್ಸವಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳು ಇರುವುದಿಲ್ಲ. ಭಕ್ತರು ಕೋವಿಡ್ಮಾರ್ಗಸೂಚಿ ಪಾಲನೆಯೊಂದಿಗೆ ಸ್ವಾಮಿಯ ದರ್ಶನ ಪಡೆಯಲು ಅವಕಾಶ ಇರಲಿದೆ.</p>.<p>ಪ್ರತಿ ವರ್ಷ ಉತ್ತರಾಯಣ ಪುಣ್ಯ ಕಾಲದ ಆರಂಭದಲ್ಲಿ ಚಿಕ್ಕ ರಥೋತ್ಸವಕ್ಕೆ ಚಾಲನೆನೀಡಲಾಗುತ್ತಿತ್ತು. ಗ್ರಾಮೀಣ ಜನರು ಹೊಸ ಋತು ಸ್ವಾಗತಿಸುತ್ತ, ಕೊಯ್ಲು ಮಾಡಿದ ಧವಸಧಾನ್ಯಗಳನ್ನು ತೇರಿಗೆ ಸಮಪರ್ಪಿಸಿ, ಧನ್ಯತೆ ಮೆರೆಯುತ್ತಿದ್ದರು. ದೇವಾಲಯದದ ಸುತ್ತ ಕಬ್ಬುಮತ್ತು ತಳಿರು ತೋರಣಗಳಿಂದ ಅಲಂಕರಿಸಿ, ಎಳ್ಳು, ಬೆಲ್ಲದ ಬ್ಯಾಟಮಣೆ ಉತ್ಸವ ಬನದ ತುಂಬಕಲರವ ತುಂಬುತ್ತಿತ್ತು. ದಾಸರ ಜಾಗಟೆ ಸದ್ದು, ಧೂಪ, ದೀಪದ ಸುಗಂಧ ನೆರದವರ ಮನದಲ್ಲಿಭಕ್ತಿ, ಭಾವ ತುಂಬುತ್ತಿತ್ತು</p>.<p>ದೇವಸ್ಥಾನದ ಕಾಮಗಾರಿಯ ಕಾರಣಕ್ಕೆ ನಾಲ್ಕು ವರ್ಷಗಳಿಂದ ಚಿಕ್ಕ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿಲ್ಲ. ಚಿಕ್ಕರಥೋತ್ಸವವೂ ನಡೆದಿರಲಿಲ್ಲ. ಈ ವರ್ಷ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಕೋವಿಡ್ ಹಾವಳಿಯೂ ಸೇರಿ ಜಾತ್ರೋತ್ಸವವನ್ನು ಮಸುಕಾಗಿಸಿದೆ. ಸಂಕ್ರಾಂತಿ ಹಬ್ಬದ ಮರುದಿನ ಜರುಗುತ್ತಿದ್ದಚಿಕ್ಕರಥದ ಸದ್ದು ಈ ಬಾರಿಯೂ ಕೇಳಿಸದು.</p>.<p><strong>ಧನುರ್ಮಾಸ ಸಮಾಪ್ತಿ: </strong>‘ಜ.14ರಂದು ಮಕರ ರಾಶಿಗೆ ಸೂರ್ಯನ ಪ್ರವೇಶದ ಮೂಲಕಸಂಕ್ರಾಂತಿ ಹಬ್ಬ ಕಳೆಗಟ್ಟುತ್ತದೆ. ಧನುರ್ಮಾಸ ಪೂಜೆ ಸಮಾಪ್ತಿಯಾಗುತ್ತದೆ.ಶುಕ್ರವಾರ ಬೆಟ್ಟದಲ್ಲಿ ಸಂಕ್ರಾಂತಿ ಪೂಜೆ ಮಾತ್ರ ನಡೆಯಲಿದೆ. ಶನಿವಾರವೂ ರಂಗನಾಥನದೇವಾಲಯಕ್ಕೆ ಹೆಚ್ಚಿನ ಭಕ್ತರ ಆಗಮನದ ನಿರೀಕ್ಷೆ ಇದೆ. ಮುಂಜಾನೆ 7 ರಿಂದ ನಿತ್ಯ ಪೂಜೆಪೂಜೆ ಆರಂಭವಾಗುತ್ತದೆ. ವಿಶೇಷ ಪೂಜೆ, ತೀರ್ಥ ಮತ್ತು ಪ್ರಸಾದ ವಿತರಣೆ ಇರುವುದಿಲ್ಲ’ ಎಂದು ಪ್ರಧಾನ ಅರ್ಚಕ ರವಿಕುಮಾರ್ ಹೇಳಿದರು.</p>.<p class="Subhead"><strong>ಜಾತ್ರೆ ಬದಲು ದರ್ಶನ: </strong>‘ಜನಸಂದಣಿ ಇದ್ದ ಸ್ಥಳದಲ್ಲಿ ಒಟ್ಟಿಗೆ ಸೇರಬಾರದು. ಮುಖಗವಸು, ಸ್ಯಾನಿಟೈಸರ್ ಮತ್ತುವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು.ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು. ಕೋವಿಡ್-19 ಕಾರಣದಿಂದ ಜಾತ್ರೋತ್ಸವಕ್ಕೆ ಬದಲು ಸಾಂಪ್ರದಾಯಿಕ ದರ್ಶನ ಮಾತ್ರ ಇರಲಿದೆ. ಭಕ್ತರಿಗೆ ಶೌಚಾಲಯ,ಶುದ್ಧ ಕುಡಿಯುವ ನೀರು ಅನುಕೂಲ ಕಲ್ಪಿಸಲಾಗುವುದು. ದಾಸೋಹ ಮತ್ತು ಅರವಟ್ಟಿಗೆತೆರೆಯಲು ಅವಕಾಶ ಇರುವುದಿಲ್ಲ’ ಎಂದು ದೇವಾಲಯದ ದೇಗುಲದ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ಸಂಕ್ರಾಂತಿ ಸಂಕ್ರಮಣ: </strong>ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುತ್ತದೆ. ಈ ಸಮಯ ಹುಟ್ಟು ಮತ್ತು ಸಾವಿಗೆ ಶ್ರೇಷ್ಠವೆಂದುಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸಮಸ್ತ ದೇವತಾ ಕಾರ್ಯಗಳು ಇಲ್ಲಿಂದಲೇಆರಂಭವಾಗುತ್ತವೆ. ಎಳ್ಳೆಣ್ಣೆ ದೀಪ, ಎಳ್ಳಿನ ಸ್ನಾನ ಮತ್ತು ಎಳ್ಳುದಾನಕ್ಕೆಮಹತ್ವವಿದೆ. ರೈತರು ಪೈರು ತೆಗೆಯುವಾಗ ಕಾಳನ್ನು ಸಂಗ್ರಹಿಸಿ, ದೇವರಿಗೆ ಅರ್ಪಿಸುವಮೂಲಕ ಸಮೃದ್ಧಿ, ಶುಭ ಕಾಮನೆಗಳು ದೊರೆಯಲೆಂದು ಭಕ್ತರು ಈ ಪರ್ವ ಕಾಲದಲ್ಲಿ ದೇವರನ್ನು ಬೇಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>