ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಚಾಲಕ ನಾಗರಾಜು ಅವರು, ‘ತಮಿಳುನಾಡಿನ ಪ್ರವೇಶ ಪಡೆಯುವ ಚೆಕ್ಪೋಸ್ಟ್ ಸೇರಿದಂತೆ ನಾಲ್ಕೈದು ಕಡೆ ಸಿಬ್ಬಂದಿಗಳಿದ್ದು, ಎಲ್ಲ ವಾಹನಗಳ ಬಗ್ಗೆಗೂ ಗಮನ ಹರಿಸುತ್ತಿದ್ದು, ಬಂಪರ್ ಕ್ರ್ಯಾಶ್ ಗಾರ್ಡ್ಗಳಿದ್ದರೆ ತಡೆದು, ಅದನ್ನು ತೆಗೆಯುತ್ತಿದ್ದಾರೆ. ದಂಡವನ್ನೂ ವಿಧಿಸುತ್ತಿದ್ದಾರೆ. ಜಿಲ್ಲೆಯಿಂದ ಹೋಗುವವರು ತಮ್ಮ ವಾಹನಗಳಲ್ಲಿರುವ ಬಂಪರ್ ಗಾರ್ಡ್ಗಳನ್ನು ತೆಗೆದು ಹೋಗುವುದು ಒಳ್ಳೆಯದು’ ಎಂದರು.