ಕೃಷಿಕರ ಮನವಿ: ‘ಬೇಸಾಯಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಕರಿಕಲ್ಲು ಪೊಟರೆಯಿಂದ ಗೌಡಹಳ್ಳಿ ಅಣೆಕಟ್ಟೆವರೆಗೂ ಕೆಲಸ ಪೂರೈಸಬೇಕು. ಕೆಲವು ಭಾಗಗಳಲ್ಲಿ ಮಾತ್ರ ಕಾಮಗಾರಿ ಮಾಡಿ, ಉಳಿದ ಕಡೆಗಳಲ್ಲಿ ಕೆಲಸ ಅಪೂರ್ಣಗೊಂಡರೆ, ವನ್ಯ ಜೀವಿಗಳು ಮತ್ತೆ ಕಾಡಿನಿಂದ ನಾಡಿನತ್ತ ನುಗ್ಗುತ್ತವೆ. ಬೇಸಿಗೆ ಸಮಯದಲ್ಲಿ ಮೇವು ಮತ್ತು ನೀರು ಸಿಗದಿದ್ದರೆ, ಆನೆ, ಕಾಡಮ್ಮೆ, ಜಿಂಕೆ, ಕಡವೆ ಜಮೀನಿಗೆ ಲಗ್ಗೆ ಇಡುತ್ತವೆ. ಹಾಗಾಗಿ, ಕಾಡಂಚಿನ ಪ್ರದೇಶಗಳಲ್ಲಿ ಸೋಲಾರ್ ನಿರ್ಮಾಣ ಕಾಮಗಾರಿಯನ್ನು ಕಾಡಂಚಿನ ಗ್ರಾಮಗಳಲ್ಲಿ ಪೂರ್ಣಗೊಳಿಸಲಿ’ ಎಂದು ರೈತರಾದ ಬೂದಿತಿಟ್ಟು ನಂಜುಂಡೇಗೌಡ ಹಾಗೂ ಗುಂಬಳ್ಳಿ ಬಸಪ್ಪ ಹೇಳಿದರು.