ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನರಂಜಿಸಿದವು. ವಿದ್ಯಾ ವಿಕಾಸ ಕೇಂದ್ರದ ದಾನಿ ಮುನಿಕೃಷ್ಣಪ್ಪ ಅವರನ್ನು ಗೌರವಿಸಲಾಯಿತು. ಮಂಚನಬಲೆ ಬಿಜಿಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಜಿ.ವಿ.ಗಂಗಾಧರ್, ಎನ್.ವಿ.ಬೋರಯ್ಯ, ಸಹ ಶಿಕ್ಷಕ ದೇವರಾಜು, ದೈಹಿಕ ಶಿಕ್ಷಣ ಶಿಕ್ಷಕ ಚನ್ನಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಅರುಣ ವೆಂಕಟ ನಾರಾಯಣ್, ಗ್ರಾಮದ ಮುಖಂಡರಾದ ಮುನಿ ಆಂಜನಪ್ಪ, ಕೆ.ಆರ್.ಶಿವಶಂಕರ್, ಕೆ.ಎನ್.ಮುರಳಿ ದೊಡ್ಡವೆಂಕಟಪ್ಪ, ಡ್ರೈವರ್ ನಾಗರಾಜು, ಕೆ.ಟಿ.ನಾಗರಾಜು ನಾರಾಯಣಸ್ವಾಮಿ, ಮುನಿಯಮ್ಮ, ಶಿಕ್ಷಣ ಕೇಂದ್ರದ ಶಿಕ್ಷಕ ಚಂದ್ರಶೇಖರ್ ಹಾಜರಿದ್ದರು.