<p><strong>ಚಿಕ್ಕಬಳ್ಳಾಪುರ:</strong> ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯು ಗೊಂದಲದ ಗೂಡಾಯಿತು.</p>.<p>ಸಭೆಗೆ ಕೆಲ ದಲಿತ ಮುಖಂಡರು ಬಹಿಷ್ಕಾರ ಹಾಕಿ ಹೊರ ನಡೆದರೆ, ಸಭೆಯಲ್ಲಿ ಹಾಜರಿದ್ದವರ ಸಮಸ್ಯೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಆಲಿಸಿದರು. ಪರಿಹಾರ ನೀಡುವ ಭರವಸೆ ನೀಡಿದರು.</p>.<p>ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮುಖಂಡರು ಬಹಿಷ್ಕಾರ ಹಾಕಿದ ಪರಿಣಾಮ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಸಭೆಯಲ್ಲಿದ್ದವರ ಸಮಸ್ಯೆ ಆಲಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತು.</p>.<p>ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸಭೆಯಿಂದ ವಾಪಸ್ ಹೋದವರು ನಮ್ಮನ್ನು ಸಂಪರ್ಕಿಸಿ, ಅವರ ಸಮಸ್ಯೆ ಏನು ಎಂದು ಹೇಳಿಲ್ಲ. ಬಂದವರ ಸಮಸ್ಯೆ ಆಲಿಸಿದ್ದೇವೆ. ವಾಪಸ್ ಹೋದವರು ಸಮಸ್ಯೆ ಹೇಳಿದರೆ ಅವರ ಸಮಸ್ಯೆಯನ್ನೂ ಬಗೆಹರಿಸಲು ಶ್ರಮಿಸಲಾಗುವುದು ಎಂದರು.</p>.<p>ಈ ಸಭೆ ಇಂದಿಗೆ ಮಾತ್ರ ಸೀಮಿತವಲ್ಲ. ನಿರಂತರವಾಗಿ ನಡೆಯಲಿದೆ. ಯಾರಿಗೆ ಸಮಸ್ಯೆ ಇದೆ ಅವರು ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಯಾರಿಗೆ ಸಮಸ್ಯೆ ಇಲ್ಲ ಅವರು ಸಭೆ ಬಹಿಷ್ಕರಿಸಿದ್ದಾರೆ ಎಂದರು.</p>.<p>ಪ್ರತಿ ಜಿಲ್ಲೆಯಲ್ಲಿ ಡಿಸಿಆರ್ ಠಾಣೆ ಆರಂಭಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿಯೂ ಡಿಸಿಆರ್ ಠಾಣೆಯನ್ನು ಬೆಸ್ಕಾಂ ಕಚೇರಿಯ ಪಕ್ಕದ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿದೆ. ಡಿಸಿಆರ್ ಠಾಣೆಯಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ತನಿಖೆ ನಡೆಯುತ್ತಿವೆ ಎಂದು ಹೇಳಿದರು.</p>.<p>ಯಾವ ಪ್ರಕರಣಗಳು ನ್ಯಾಯಾಲಯದಲ್ಲಿವೆ ಅವುಗಳ ಪರಿಹಾರ ನಮ್ಮಿಂದ ಸಾಧ್ಯವಿಲ್ಲ. ನಮ್ಮಿಂದ ಆಗುವ ಎಲ್ಲ ವಿಚಾರಗಳಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.<br>ಕುಂದುಕೊರತೆ ಸಭೆಯಲ್ಲಿ ಜಮೀನು ವಿವಾದ, ಹಳೆಯ ಪ್ರಕರಣಗಳಲ್ಲಿ ಅಟ್ರಾಸಿಟಿ ಆಗಿಲ್ಲ ಅಂತ ದೂರಿದ್ದಾರೆ, ಜನರ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ, ನಮ್ಮಿಂದ ಪರಿಹಾರ ಸಾಧ್ಯವಾದರೆ ನಾವು ಪರಿಹರಿಸುತ್ತೇವೆ, ಬೇರೆ ಇಲಾಖೆಗಳ ಸಮಸ್ಯೆ ಇದ್ದರೆ ಆ ಇಲಾಖೆಗಳಿಗೆ ದೂರು ವರ್ಗಾಯಿಸುತ್ತೇವೆ ಎಂದು ಹೇಳಿದರು.</p>.<p><strong>ಚಿಂತಾಮಣಿ ಸಭೆ</strong></p><p>200 ಮಂದಿ ಭಾಗಿ ಕಳೆದ ವಾರ ಚಿಂತಾಮಣಿಯಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಹಿಂದೆಯೇ ಕುಂದುಕೊರತೆ ಸಭೆ ಕರೆಯಲಾಗಿತ್ತು. ಆದರೆ ಅಂದು ಮತ್ತೊಂದು ಸಭೆ ಇದ್ದ ಕಾರಣ ಮತ್ತೊಂದು ದಿನ ಸಭೆ ನಡೆಸುವಂತೆ ಕೋರಿದ್ದರು. ಆದ ಕಾರಣ ಸಭೆ ಆಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯು ಗೊಂದಲದ ಗೂಡಾಯಿತು.</p>.<p>ಸಭೆಗೆ ಕೆಲ ದಲಿತ ಮುಖಂಡರು ಬಹಿಷ್ಕಾರ ಹಾಕಿ ಹೊರ ನಡೆದರೆ, ಸಭೆಯಲ್ಲಿ ಹಾಜರಿದ್ದವರ ಸಮಸ್ಯೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಆಲಿಸಿದರು. ಪರಿಹಾರ ನೀಡುವ ಭರವಸೆ ನೀಡಿದರು.</p>.<p>ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮುಖಂಡರು ಬಹಿಷ್ಕಾರ ಹಾಕಿದ ಪರಿಣಾಮ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಸಭೆಯಲ್ಲಿದ್ದವರ ಸಮಸ್ಯೆ ಆಲಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತು.</p>.<p>ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸಭೆಯಿಂದ ವಾಪಸ್ ಹೋದವರು ನಮ್ಮನ್ನು ಸಂಪರ್ಕಿಸಿ, ಅವರ ಸಮಸ್ಯೆ ಏನು ಎಂದು ಹೇಳಿಲ್ಲ. ಬಂದವರ ಸಮಸ್ಯೆ ಆಲಿಸಿದ್ದೇವೆ. ವಾಪಸ್ ಹೋದವರು ಸಮಸ್ಯೆ ಹೇಳಿದರೆ ಅವರ ಸಮಸ್ಯೆಯನ್ನೂ ಬಗೆಹರಿಸಲು ಶ್ರಮಿಸಲಾಗುವುದು ಎಂದರು.</p>.<p>ಈ ಸಭೆ ಇಂದಿಗೆ ಮಾತ್ರ ಸೀಮಿತವಲ್ಲ. ನಿರಂತರವಾಗಿ ನಡೆಯಲಿದೆ. ಯಾರಿಗೆ ಸಮಸ್ಯೆ ಇದೆ ಅವರು ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಯಾರಿಗೆ ಸಮಸ್ಯೆ ಇಲ್ಲ ಅವರು ಸಭೆ ಬಹಿಷ್ಕರಿಸಿದ್ದಾರೆ ಎಂದರು.</p>.<p>ಪ್ರತಿ ಜಿಲ್ಲೆಯಲ್ಲಿ ಡಿಸಿಆರ್ ಠಾಣೆ ಆರಂಭಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿಯೂ ಡಿಸಿಆರ್ ಠಾಣೆಯನ್ನು ಬೆಸ್ಕಾಂ ಕಚೇರಿಯ ಪಕ್ಕದ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿದೆ. ಡಿಸಿಆರ್ ಠಾಣೆಯಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ತನಿಖೆ ನಡೆಯುತ್ತಿವೆ ಎಂದು ಹೇಳಿದರು.</p>.<p>ಯಾವ ಪ್ರಕರಣಗಳು ನ್ಯಾಯಾಲಯದಲ್ಲಿವೆ ಅವುಗಳ ಪರಿಹಾರ ನಮ್ಮಿಂದ ಸಾಧ್ಯವಿಲ್ಲ. ನಮ್ಮಿಂದ ಆಗುವ ಎಲ್ಲ ವಿಚಾರಗಳಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.<br>ಕುಂದುಕೊರತೆ ಸಭೆಯಲ್ಲಿ ಜಮೀನು ವಿವಾದ, ಹಳೆಯ ಪ್ರಕರಣಗಳಲ್ಲಿ ಅಟ್ರಾಸಿಟಿ ಆಗಿಲ್ಲ ಅಂತ ದೂರಿದ್ದಾರೆ, ಜನರ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ, ನಮ್ಮಿಂದ ಪರಿಹಾರ ಸಾಧ್ಯವಾದರೆ ನಾವು ಪರಿಹರಿಸುತ್ತೇವೆ, ಬೇರೆ ಇಲಾಖೆಗಳ ಸಮಸ್ಯೆ ಇದ್ದರೆ ಆ ಇಲಾಖೆಗಳಿಗೆ ದೂರು ವರ್ಗಾಯಿಸುತ್ತೇವೆ ಎಂದು ಹೇಳಿದರು.</p>.<p><strong>ಚಿಂತಾಮಣಿ ಸಭೆ</strong></p><p>200 ಮಂದಿ ಭಾಗಿ ಕಳೆದ ವಾರ ಚಿಂತಾಮಣಿಯಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಹಿಂದೆಯೇ ಕುಂದುಕೊರತೆ ಸಭೆ ಕರೆಯಲಾಗಿತ್ತು. ಆದರೆ ಅಂದು ಮತ್ತೊಂದು ಸಭೆ ಇದ್ದ ಕಾರಣ ಮತ್ತೊಂದು ದಿನ ಸಭೆ ನಡೆಸುವಂತೆ ಕೋರಿದ್ದರು. ಆದ ಕಾರಣ ಸಭೆ ಆಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>