<p><strong>ಗೌರಿಬಿದನೂರು</strong>: ದಸರಾ ಹಬ್ಬದ ಅಂಗವಾಗಿ ನಗರದ ಕೋಟಿ ಬಡಾವಣೆಯ ಪಿನಾಕಿನಿ ಯೂತ್ಸ್ ಬಳಗ ಪ್ರತಿಷ್ಠಾಪಿಸಲಾಗಿದ್ದ ದುರ್ಗಾಮಾತೆಯ ಗಂಗಾ ವಿಲೀನ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.</p>.<p>ದಸರಾ ಹಬ್ಬದ ಹಿನ್ನೆಲೆಯಲ್ಲಿ 50 ಅಡಿಯ ಬೃಹತ್ ಶಿವಲಿಂಗ ನಿರ್ಮಾಣ ಮಾಡಿ, ಅದರೊಳಗೆ 20 ಅಡಿಯ ದುರ್ಗಾಮಾತೆ ದರ್ಶನಕ್ಕೆ ಭಕ್ತರಿಗೆ 10 ದಿನ ಸಕಲ ವ್ಯವಸ್ಥೆ ಮಾಡಿಕೊಡಲಾಗಿತ್ತು. </p>.<p>ಗಂಗಾ ವಿಲೀನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ದುರ್ಗಾದೇವಿ ಕ್ಷೇತ್ರದ ಜನರನ್ನು ಸುಭಿಕ್ಷವಾಗಿಡಲಿ, ಇಂತಹ ಉತ್ಸವಗಳು ಜನರಲ್ಲಿ ಪರಸ್ಪರ ಸಹಬಾಳ್ವೆ ಮತ್ತು ಸೌಹಾರ್ದತೆ ಮೂಡಿಸಲಿ ಎಂದು ಆಶಿಸಿದರು.</p>.<p>ಮಾಜಿ ಸಚಿವ ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿ, ಇಂತಹ ಉತ್ಸವಗಳು ನಾಡಿನ ಏಳ್ಗೆ ಮತ್ತು ಏಕತೆಗೆ ಸಹಕಾರಿಯಾಗಿವೆ ಎಂದರು.</p>.<p>ಬೃಹತ್ ವಾಹನದಲ್ಲಿ ಪುಷ್ಪಾಲಂಕಾರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ರಾಜಗಾಂಭೀರ್ಯದಿಂದ ಸಾಗಿತು. ಕೇರಳದ ಪುಲಿ-ಕಲಿ ವೇಷಗಳ ತಂಡದ ನೃತ್ಯವು ನೋಡುಗರನ್ನು ಆಕರ್ಷಿಸಿತು. ಕೀಲುಕುದುರೆ, ಬೊಂಬೆ ನೃತ್ಯ, ವಿವಿಧ ಜಾನಪದ ಕಲಾ ತಂಡಗಳು, ತಮಟೆ ವಾದ್ಯಗಳು ಮೆರಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು ಶ್ರದ್ಧಾಭಕ್ತಿಯಿಂದ ದುರ್ಗಾದೇವಿಯ ದರ್ಶನ ಪಡೆದರು.</p>.<p>ಮೆರವಣಿಗೆಯಲ್ಲಿ ನಗರಸಭೆ ಸದಸ್ಯ ಎ. ಮೋಹನ್, ಮುಖಂಡರಾದ ಆರ್. ಅಶೋಕ್ಕುಮಾರ್, ಎ.ಎನ್. ವೇಣು, ಶ್ರೀನಿವಾಸಗೌಡ, ಪಿನಾಕಿನಿ ಯೂತ್ಸ್ ನ ರವೀಂದ್ರನಾಥ್, ಮಂಜುನಾಥ್, ಬಾಬು, ಹರೀಶ್, ಮಹೇಂದ್ರ, ರಾಜುರೆಡ್ಡಿ, ಮನೋಜ್, ಎ. ಅಶ್ವತ್ಥಪ್ಪ, ಪ್ರದೀಪ್, ವೆಂಕಟಾದ್ರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ದಸರಾ ಹಬ್ಬದ ಅಂಗವಾಗಿ ನಗರದ ಕೋಟಿ ಬಡಾವಣೆಯ ಪಿನಾಕಿನಿ ಯೂತ್ಸ್ ಬಳಗ ಪ್ರತಿಷ್ಠಾಪಿಸಲಾಗಿದ್ದ ದುರ್ಗಾಮಾತೆಯ ಗಂಗಾ ವಿಲೀನ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.</p>.<p>ದಸರಾ ಹಬ್ಬದ ಹಿನ್ನೆಲೆಯಲ್ಲಿ 50 ಅಡಿಯ ಬೃಹತ್ ಶಿವಲಿಂಗ ನಿರ್ಮಾಣ ಮಾಡಿ, ಅದರೊಳಗೆ 20 ಅಡಿಯ ದುರ್ಗಾಮಾತೆ ದರ್ಶನಕ್ಕೆ ಭಕ್ತರಿಗೆ 10 ದಿನ ಸಕಲ ವ್ಯವಸ್ಥೆ ಮಾಡಿಕೊಡಲಾಗಿತ್ತು. </p>.<p>ಗಂಗಾ ವಿಲೀನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ದುರ್ಗಾದೇವಿ ಕ್ಷೇತ್ರದ ಜನರನ್ನು ಸುಭಿಕ್ಷವಾಗಿಡಲಿ, ಇಂತಹ ಉತ್ಸವಗಳು ಜನರಲ್ಲಿ ಪರಸ್ಪರ ಸಹಬಾಳ್ವೆ ಮತ್ತು ಸೌಹಾರ್ದತೆ ಮೂಡಿಸಲಿ ಎಂದು ಆಶಿಸಿದರು.</p>.<p>ಮಾಜಿ ಸಚಿವ ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿ, ಇಂತಹ ಉತ್ಸವಗಳು ನಾಡಿನ ಏಳ್ಗೆ ಮತ್ತು ಏಕತೆಗೆ ಸಹಕಾರಿಯಾಗಿವೆ ಎಂದರು.</p>.<p>ಬೃಹತ್ ವಾಹನದಲ್ಲಿ ಪುಷ್ಪಾಲಂಕಾರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ರಾಜಗಾಂಭೀರ್ಯದಿಂದ ಸಾಗಿತು. ಕೇರಳದ ಪುಲಿ-ಕಲಿ ವೇಷಗಳ ತಂಡದ ನೃತ್ಯವು ನೋಡುಗರನ್ನು ಆಕರ್ಷಿಸಿತು. ಕೀಲುಕುದುರೆ, ಬೊಂಬೆ ನೃತ್ಯ, ವಿವಿಧ ಜಾನಪದ ಕಲಾ ತಂಡಗಳು, ತಮಟೆ ವಾದ್ಯಗಳು ಮೆರಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು ಶ್ರದ್ಧಾಭಕ್ತಿಯಿಂದ ದುರ್ಗಾದೇವಿಯ ದರ್ಶನ ಪಡೆದರು.</p>.<p>ಮೆರವಣಿಗೆಯಲ್ಲಿ ನಗರಸಭೆ ಸದಸ್ಯ ಎ. ಮೋಹನ್, ಮುಖಂಡರಾದ ಆರ್. ಅಶೋಕ್ಕುಮಾರ್, ಎ.ಎನ್. ವೇಣು, ಶ್ರೀನಿವಾಸಗೌಡ, ಪಿನಾಕಿನಿ ಯೂತ್ಸ್ ನ ರವೀಂದ್ರನಾಥ್, ಮಂಜುನಾಥ್, ಬಾಬು, ಹರೀಶ್, ಮಹೇಂದ್ರ, ರಾಜುರೆಡ್ಡಿ, ಮನೋಜ್, ಎ. ಅಶ್ವತ್ಥಪ್ಪ, ಪ್ರದೀಪ್, ವೆಂಕಟಾದ್ರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>