<p><strong>ಶಿಡ್ಲಘಟ್ಟ</strong>: ‘ಸ್ಮೈಲ್ ಪ್ಲೀಸ್’ ಎಂದು ಹೇಳುತ್ತಾ ಸುಂದರ ನೋಟಗಳನ್ನು ಸೆರೆಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದಲ್ಲಿನ ನಗು ಕಳೆದ ವರ್ಷದ ಕೊರೊನಾ ಮೊದಲ ಅಲೆ ಕಿತ್ತುಕೊಂಡಿತ್ತು. ಇದೀಗಎರಡನೇ ಅಲೆ ಕೂಡ ಅವರ ಮೊಗದಲ್ಲಿಕಣ್ಣೀರು ಹರಿಸುತ್ತಿದೆ.</p>.<p>ಲಾಕ್ಡೌನ್ ಎಂಬ ಬರಸಿಡಿಲು ಬಡಿದು ಛಾಯಾಗ್ರಹಣದ ಉದ್ಯಮವೇ ತತ್ತರಿಸಿಹೋಯಿತು. ಪ್ರತಿ ವರ್ಷ ಫೆಬ್ರುವರಿಯಿಂದ ಮೇ ವರೆಗಿನ ನಾಲ್ಕು ತಿಂಗಳು ಉತ್ತಮ ಸೀಸನ್. ಈಗ ಕೊರೊನಾ ಸೋಂಕಿನ ಭೀತಿಯಿಂದ ಶುಭಕಾರ್ಯಗಳು ರದ್ದಾದವು.</p>.<p>ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 90 ಸ್ಟುಡಿಯೋಗಳಿವೆ. ಸುಮಾರು 150 ಮಂದಿ ಮನೆಗಳಿಂದಲೇಛಾಯಾಗ್ರಹಣ ವ್ಯವಹಾರ ನಡೆಸುತ್ತಾರೆ. ಒಟ್ಟಾರೆ ಸುಮಾರು ಇನ್ನೂರೈವತ್ತು ಕುಟುಂಬಗಳು ಸಂಕಷ್ಟದಲ್ಲಿವೆ.</p>.<p>‘ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ತಾಲ್ಲೂಕಿನ ಛಾಯಾಗ್ರಾಹಕರು ತಮ್ಮ ಕಷ್ಟವನ್ನು ವಿವರಿಸಿ ಸರ್ಕಾರದಿಂದ ನೆರವು ಕೊಡಿಸುವಂತೆ ಶಾಸಕ ವಿ.ಮುನಿಯಪ್ಪ ಅವರಿಗೆ ಹಾಗೂ ಆಗಿದ್ದತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಏನು ಪ್ರಯೋಜನವಾಗಲಿಲ್ಲ’ ಎನ್ನುತ್ತಾರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ<br />ಮೇಘನಾ ಶ್ರೀನಿವಾಸ್.</p>.<p>‘ಬಹುತೇಕರು ಛಾಯಾಗ್ರಹಣವನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿ ಕೊಂಡಿದ್ದಾರೆ. ಅವರಿಗೆಲ್ಲ ಬೇರೆ ಸಂಪಾದನೆಯಿಲ್ಲದೇ ಕುಟುಂಬ ನಡೆಸುವುದು ಕಷ್ಟವಾಗಿದೆ. ಛಾಯಾಗ್ರಾಹಕರ ನೆರವಿಗೆ ಸರ್ಕಾರ ತಿಂಗಳಿಗೆ ₹2 ಸಾವಿರ ಸಹಾಯಧನ ನೀಡಬೇಕು ಎಂದು ಅವರು ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಇದೀಗ ಎರಡನೇ ಕೊರೊನಾ ಅಲೆಯಿಂದಾಗಿ ಛಾಯಾಗ್ರಾಹಕರು ಕೆಲಸ ಇಲ್ಲದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕ್ಯಾಮೆರಾ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಮೇಘನಾ ಶ್ರೀನಿವಾಸ್.</p>.<p>‘ಕೊರೊನ ಭೀತಿಯಲ್ಲಿ ಲಾಕ್ಡೌನ್ ಸಮಯದಲ್ಲಿ ಈಗ ಯಾವ ಛಾಯಾಗ್ರಾಹಕರ ಕೈಯಲ್ಲಿಯೂ ಹಣವಿಲ್ಲ. ಮನೆ ಸಂಸಾರ ನಡೆಸಲು ಕಷ್ಟಕರ ಸನ್ನಿವೇಶ ಎದುರಾಗಿದೆ. ಸರ್ಕಾರದಿಂದ ಛಾಯಾಗ್ರಾಹಕರಿಗೆ ನೆರವಿನ ಅಗತ್ಯವಿದೆ’ ಎಂದು ಕ್ಯಮೆರಾ ಮ್ಯಾನ್ ಮನೋ ಅಂಟೋನಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ</strong>: ‘ಸ್ಮೈಲ್ ಪ್ಲೀಸ್’ ಎಂದು ಹೇಳುತ್ತಾ ಸುಂದರ ನೋಟಗಳನ್ನು ಸೆರೆಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದಲ್ಲಿನ ನಗು ಕಳೆದ ವರ್ಷದ ಕೊರೊನಾ ಮೊದಲ ಅಲೆ ಕಿತ್ತುಕೊಂಡಿತ್ತು. ಇದೀಗಎರಡನೇ ಅಲೆ ಕೂಡ ಅವರ ಮೊಗದಲ್ಲಿಕಣ್ಣೀರು ಹರಿಸುತ್ತಿದೆ.</p>.<p>ಲಾಕ್ಡೌನ್ ಎಂಬ ಬರಸಿಡಿಲು ಬಡಿದು ಛಾಯಾಗ್ರಹಣದ ಉದ್ಯಮವೇ ತತ್ತರಿಸಿಹೋಯಿತು. ಪ್ರತಿ ವರ್ಷ ಫೆಬ್ರುವರಿಯಿಂದ ಮೇ ವರೆಗಿನ ನಾಲ್ಕು ತಿಂಗಳು ಉತ್ತಮ ಸೀಸನ್. ಈಗ ಕೊರೊನಾ ಸೋಂಕಿನ ಭೀತಿಯಿಂದ ಶುಭಕಾರ್ಯಗಳು ರದ್ದಾದವು.</p>.<p>ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 90 ಸ್ಟುಡಿಯೋಗಳಿವೆ. ಸುಮಾರು 150 ಮಂದಿ ಮನೆಗಳಿಂದಲೇಛಾಯಾಗ್ರಹಣ ವ್ಯವಹಾರ ನಡೆಸುತ್ತಾರೆ. ಒಟ್ಟಾರೆ ಸುಮಾರು ಇನ್ನೂರೈವತ್ತು ಕುಟುಂಬಗಳು ಸಂಕಷ್ಟದಲ್ಲಿವೆ.</p>.<p>‘ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ತಾಲ್ಲೂಕಿನ ಛಾಯಾಗ್ರಾಹಕರು ತಮ್ಮ ಕಷ್ಟವನ್ನು ವಿವರಿಸಿ ಸರ್ಕಾರದಿಂದ ನೆರವು ಕೊಡಿಸುವಂತೆ ಶಾಸಕ ವಿ.ಮುನಿಯಪ್ಪ ಅವರಿಗೆ ಹಾಗೂ ಆಗಿದ್ದತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಏನು ಪ್ರಯೋಜನವಾಗಲಿಲ್ಲ’ ಎನ್ನುತ್ತಾರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ<br />ಮೇಘನಾ ಶ್ರೀನಿವಾಸ್.</p>.<p>‘ಬಹುತೇಕರು ಛಾಯಾಗ್ರಹಣವನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿ ಕೊಂಡಿದ್ದಾರೆ. ಅವರಿಗೆಲ್ಲ ಬೇರೆ ಸಂಪಾದನೆಯಿಲ್ಲದೇ ಕುಟುಂಬ ನಡೆಸುವುದು ಕಷ್ಟವಾಗಿದೆ. ಛಾಯಾಗ್ರಾಹಕರ ನೆರವಿಗೆ ಸರ್ಕಾರ ತಿಂಗಳಿಗೆ ₹2 ಸಾವಿರ ಸಹಾಯಧನ ನೀಡಬೇಕು ಎಂದು ಅವರು ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಇದೀಗ ಎರಡನೇ ಕೊರೊನಾ ಅಲೆಯಿಂದಾಗಿ ಛಾಯಾಗ್ರಾಹಕರು ಕೆಲಸ ಇಲ್ಲದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕ್ಯಾಮೆರಾ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಮೇಘನಾ ಶ್ರೀನಿವಾಸ್.</p>.<p>‘ಕೊರೊನ ಭೀತಿಯಲ್ಲಿ ಲಾಕ್ಡೌನ್ ಸಮಯದಲ್ಲಿ ಈಗ ಯಾವ ಛಾಯಾಗ್ರಾಹಕರ ಕೈಯಲ್ಲಿಯೂ ಹಣವಿಲ್ಲ. ಮನೆ ಸಂಸಾರ ನಡೆಸಲು ಕಷ್ಟಕರ ಸನ್ನಿವೇಶ ಎದುರಾಗಿದೆ. ಸರ್ಕಾರದಿಂದ ಛಾಯಾಗ್ರಾಹಕರಿಗೆ ನೆರವಿನ ಅಗತ್ಯವಿದೆ’ ಎಂದು ಕ್ಯಮೆರಾ ಮ್ಯಾನ್ ಮನೋ ಅಂಟೋನಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>