<p><strong>ಗೌರಿಬಿದನೂರು</strong>: ನಕಲಿ ಚಿನ್ನದ ಹಾರ ನೀಡಿ ಆಂಧ್ರಪ್ರದೇಶದ ನಂದ್ಯಾಲ ನಗರದ ಚಿನ್ನಾಭರಣ ಕೆಲಸಗಾರ ಅಲ್ಲುರೈಯಾ ಅವರಿಗೆ ₹ 24 ಲಕ್ಷ ವಂಚಿಸಲಾಗಿದೆ. ಈ ಬಗ್ಗೆ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.</p>.<p>ಆಂಧ್ರಪ್ರದೇಶದ ಯಾಲೂರು ಗ್ರಾಮದ ಶಬ್ಬೀರ್ ನನ್ನ ಸ್ನೇಹಿತನಾಗಿದ್ದು ನಂದ್ಯಾಲಕ್ಕೆ ಬಂದಾಗ ಭೇಟಿ ಆಗುತ್ತಿದ್ದರು. ಇತ್ತೀಚೆಗೆ ಕರೆ ಮಾಡಿ ನಮ್ಮ ಗ್ರಾಮದ ಅಹಮದ್ ಹುಸೇನ್ ಬಳಿ ಮೂರು ಬಂಗಾರದ ಗುಂಡುಗಳಿವೆ. ಪರೀಕ್ಷಿಸಬೇಕು ಎಂದು ಬಂದಿದ್ದರು. ಪರೀಕ್ಷಿಸಿ ಬಂಗಾರದ್ದು ಎಂದು ತಿಳಿಸಿದೆ.</p>.<p>ಎರಡು ದಿನಗಳ ನಂತರ ಮತ್ತೆ ಶಬ್ಬೀರ್ ಕರೆ ಮಾಡಿ ಗೌರಿಬಿದನೂರು ತಾಲ್ಲೂಕಿನ ಹಕ್ಕಿಪಿಕ್ಕಿ ಕಾಲೊನಿಯಲ್ಲಿ 2-3 ಕೆ.ಜಿ ಬಂಗಾರದ ಗುಂಡುಗಳ ಹಾರ ಇದೆ. ಅದರ ಬೆಲೆ ₹ 24 ಲಕ್ಷ ಎಂದು ಅಹಮದ್ ಹುಸೇನ್ ತಿಳಿಸಿದ್ದಾರೆ. ಹಾರ ತೆಗೆದುಕೊಳ್ಳುತ್ತೀರಾ ಎಂದರು.</p>.<p>ಎರಡು ದಿನ ಸಮಯ ಕೊಡು ಹಣ ಹೊಂದಿಸಿಕೊಳ್ಳುತ್ತೇವೆ ಎಂದು ತಿಳಿಸಿದೆ. ನಾನು, ಶಬ್ಬೀರ್, ನರಸಿಂಹಯ್ಯ, ಸುರೇಂದ್ರ, ಬ್ರಹ್ಮಂ, ಅಹಮದ್ ಹುಸೇನ್ ಕಾರಿನಲ್ಲಿ ಹಕ್ಕಿ ಪಿಕ್ಕಿ ಕಾಲೊನಿಗೆ ಬಂಗಾರ ಖರೀದಿಸಲು ಭಾನುವಾರ ₹ 25 ಲಕ್ಷ ತೆಗೆದುಕೊಂಡು ಹೊರಟೆವು. </p>.<p>ಗೌರಿಬಿದನೂರಿನಿಂದ ಗೊಡ್ಡಾವಳಹಳ್ಳಿ ಗ್ರಾಮಕ್ಕೆ ಬಂದೆವು. ದೇವಸ್ಥಾನದ ಬಳಿ ಕಾರು ನಿಲ್ಲಿಸಲು ತಿಳಿಸಿದರು. ಅಲ್ಲಿ ಮೂವರು ಇದ್ದರು. ನಾನು ಬ್ರಹ್ಮಂ ಕೈಗೆ ₹ 24 ಲಕ್ಷ ಕೊಟ್ಟೆ. ಬ್ರಹ್ಮಂ ಇಲ್ಲಿದ್ದ ಮೂವರಿಗೆ ₹ 23 ಲಕ್ಷ ಕೊಟ್ಟು ಹಾರವನ್ನು ನನಗೆ ತಂದು ಕೊಟ್ಟರು. ನಾನು ಪರೀಕ್ಷಿಸುವಷ್ಟರಲ್ಲಿ ಬ್ರಹ್ಮಂ, ಆ ಮೇಲೆ ಪರೀಕ್ಷೆ ಮಾಡಿಕೊಳ್ಳುವೆ ಎಂದು ಕಾರಿನಲ್ಲಿ ಹತ್ತಿಸಿದರು. ಉಳಿದ ಹಣ ₹ 1 ಲಕ್ಷವನ್ನು ಬ್ರಹ್ಮಂ ಮತ್ತು ಅಹಮದ್ ಹುಸೇನ್ ಇಟ್ಟುಕೊಂಡರು. ನಾನು ಕಾರಿನಲ್ಲಿ ಬಂಗಾರ ಪರೀಕ್ಷಿಸಲಾಗಿ ಅದು ನಕಲಿ ಎಂದು ಗೊತ್ತಾಯಿತು. </p>.<p>ಅದೇ ಸ್ಥಳಕ್ಕೆ ಹೋಗಿ ನೋಡಿದಾಗ ಮೂವರು ಅಲ್ಲಿರಲಿಲ್ಲ. ಬಂಗಾರದ ಗುಂಡಿನ ಹಾರ ಕೊಡುವುದಾಗಿ ನನ್ನ ಹತ್ತಿರ ₹ 24 ಲಕ್ಷ ಪಡೆದು ನಕಲಿ ಹಾರ ನೀಡಿ ಮೋಸ ಮಾಡಿರುವ ಮೂವರು ಮತ್ತು ಹಾರ ಕೊಡಿಸುತ್ತೇವೆ ಎಂದು ನಮ್ಮನ್ನು ಕರೆ ತಂದ ಬ್ರಹ್ಮಂ ಮತ್ತು ಅಹಮದ್ ಹುಸೇನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಅಲ್ಲುರೈಯಾ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ನಕಲಿ ಚಿನ್ನದ ಹಾರ ನೀಡಿ ಆಂಧ್ರಪ್ರದೇಶದ ನಂದ್ಯಾಲ ನಗರದ ಚಿನ್ನಾಭರಣ ಕೆಲಸಗಾರ ಅಲ್ಲುರೈಯಾ ಅವರಿಗೆ ₹ 24 ಲಕ್ಷ ವಂಚಿಸಲಾಗಿದೆ. ಈ ಬಗ್ಗೆ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.</p>.<p>ಆಂಧ್ರಪ್ರದೇಶದ ಯಾಲೂರು ಗ್ರಾಮದ ಶಬ್ಬೀರ್ ನನ್ನ ಸ್ನೇಹಿತನಾಗಿದ್ದು ನಂದ್ಯಾಲಕ್ಕೆ ಬಂದಾಗ ಭೇಟಿ ಆಗುತ್ತಿದ್ದರು. ಇತ್ತೀಚೆಗೆ ಕರೆ ಮಾಡಿ ನಮ್ಮ ಗ್ರಾಮದ ಅಹಮದ್ ಹುಸೇನ್ ಬಳಿ ಮೂರು ಬಂಗಾರದ ಗುಂಡುಗಳಿವೆ. ಪರೀಕ್ಷಿಸಬೇಕು ಎಂದು ಬಂದಿದ್ದರು. ಪರೀಕ್ಷಿಸಿ ಬಂಗಾರದ್ದು ಎಂದು ತಿಳಿಸಿದೆ.</p>.<p>ಎರಡು ದಿನಗಳ ನಂತರ ಮತ್ತೆ ಶಬ್ಬೀರ್ ಕರೆ ಮಾಡಿ ಗೌರಿಬಿದನೂರು ತಾಲ್ಲೂಕಿನ ಹಕ್ಕಿಪಿಕ್ಕಿ ಕಾಲೊನಿಯಲ್ಲಿ 2-3 ಕೆ.ಜಿ ಬಂಗಾರದ ಗುಂಡುಗಳ ಹಾರ ಇದೆ. ಅದರ ಬೆಲೆ ₹ 24 ಲಕ್ಷ ಎಂದು ಅಹಮದ್ ಹುಸೇನ್ ತಿಳಿಸಿದ್ದಾರೆ. ಹಾರ ತೆಗೆದುಕೊಳ್ಳುತ್ತೀರಾ ಎಂದರು.</p>.<p>ಎರಡು ದಿನ ಸಮಯ ಕೊಡು ಹಣ ಹೊಂದಿಸಿಕೊಳ್ಳುತ್ತೇವೆ ಎಂದು ತಿಳಿಸಿದೆ. ನಾನು, ಶಬ್ಬೀರ್, ನರಸಿಂಹಯ್ಯ, ಸುರೇಂದ್ರ, ಬ್ರಹ್ಮಂ, ಅಹಮದ್ ಹುಸೇನ್ ಕಾರಿನಲ್ಲಿ ಹಕ್ಕಿ ಪಿಕ್ಕಿ ಕಾಲೊನಿಗೆ ಬಂಗಾರ ಖರೀದಿಸಲು ಭಾನುವಾರ ₹ 25 ಲಕ್ಷ ತೆಗೆದುಕೊಂಡು ಹೊರಟೆವು. </p>.<p>ಗೌರಿಬಿದನೂರಿನಿಂದ ಗೊಡ್ಡಾವಳಹಳ್ಳಿ ಗ್ರಾಮಕ್ಕೆ ಬಂದೆವು. ದೇವಸ್ಥಾನದ ಬಳಿ ಕಾರು ನಿಲ್ಲಿಸಲು ತಿಳಿಸಿದರು. ಅಲ್ಲಿ ಮೂವರು ಇದ್ದರು. ನಾನು ಬ್ರಹ್ಮಂ ಕೈಗೆ ₹ 24 ಲಕ್ಷ ಕೊಟ್ಟೆ. ಬ್ರಹ್ಮಂ ಇಲ್ಲಿದ್ದ ಮೂವರಿಗೆ ₹ 23 ಲಕ್ಷ ಕೊಟ್ಟು ಹಾರವನ್ನು ನನಗೆ ತಂದು ಕೊಟ್ಟರು. ನಾನು ಪರೀಕ್ಷಿಸುವಷ್ಟರಲ್ಲಿ ಬ್ರಹ್ಮಂ, ಆ ಮೇಲೆ ಪರೀಕ್ಷೆ ಮಾಡಿಕೊಳ್ಳುವೆ ಎಂದು ಕಾರಿನಲ್ಲಿ ಹತ್ತಿಸಿದರು. ಉಳಿದ ಹಣ ₹ 1 ಲಕ್ಷವನ್ನು ಬ್ರಹ್ಮಂ ಮತ್ತು ಅಹಮದ್ ಹುಸೇನ್ ಇಟ್ಟುಕೊಂಡರು. ನಾನು ಕಾರಿನಲ್ಲಿ ಬಂಗಾರ ಪರೀಕ್ಷಿಸಲಾಗಿ ಅದು ನಕಲಿ ಎಂದು ಗೊತ್ತಾಯಿತು. </p>.<p>ಅದೇ ಸ್ಥಳಕ್ಕೆ ಹೋಗಿ ನೋಡಿದಾಗ ಮೂವರು ಅಲ್ಲಿರಲಿಲ್ಲ. ಬಂಗಾರದ ಗುಂಡಿನ ಹಾರ ಕೊಡುವುದಾಗಿ ನನ್ನ ಹತ್ತಿರ ₹ 24 ಲಕ್ಷ ಪಡೆದು ನಕಲಿ ಹಾರ ನೀಡಿ ಮೋಸ ಮಾಡಿರುವ ಮೂವರು ಮತ್ತು ಹಾರ ಕೊಡಿಸುತ್ತೇವೆ ಎಂದು ನಮ್ಮನ್ನು ಕರೆ ತಂದ ಬ್ರಹ್ಮಂ ಮತ್ತು ಅಹಮದ್ ಹುಸೇನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಅಲ್ಲುರೈಯಾ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>