<p><strong>ಚಿಕ್ಕಬಳ್ಳಾಪುರ: ಜಿ</strong>ಲ್ಲೆಯಾದ್ಯಂತ ಶುಕ್ರವಾರದಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸಾರ್ವಜನಿಕರಿಗೆ ಪೊಲೀಸರು ದಂಡ ವಿಧಿಸಿದರು. </p>.<p>ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸುತ್ತಿದ್ದಾರೆ ಎನ್ನುವುದು ವಾಹನ ಸವಾರರಿಗೆ ತಿಳಿದ ತಕ್ಷಣ ನಗರದ ಸಣ್ಣ ಪುಟ್ಟ ಗಲ್ಲಿಗಳಲ್ಲಿ ಸಾಗಿದರು. ಆದರೆ ಪೊಲೀಸರು ಈ ಗಲ್ಲಿಗಳಲ್ಲಿಯೂ ಕಾರ್ಯಾಚರಣೆ ನಡೆಸಿದರು.</p>.<p>ವಿಶೇಷ ಎಂದರೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ‘ನಾನು ಪೊಲೀಸ್’ ಎಂದ ಸಿಬ್ಬಂದಿಗೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡು ರಸ್ತೆಯಲ್ಲಿಯೇ ಶಿಕ್ಷೆ ವಿಧಿಸಿದರು. ಈ ಸಿಬ್ಬಂದಿ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಂಚಾರ ಠಾಣೆಯಲ್ಲಿಯೇ ಕೆಲಸ ನಿರ್ವಹಿಸಿದ್ದರು.</p>.<p>ಸಿಬ್ಬಂದಿಯೊಬ್ಬರು ಹೆಲ್ಮೆಟ್ ಧರಿಸದೆ ಸಾಮಾನ್ಯ ಬಟ್ಟೆ ತೊಟ್ಟು ಬೈಕ್ನಲ್ಲಿ ಬಿಬಿ ರಸ್ತೆಯಲ್ಲಿ ಬಂದರು. ಆಗ ಬಿಬಿ ರಸ್ತೆಯಲ್ಲಿ ಖುದ್ದು ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಕಣ್ಣಿಗೆ ಬಿದ್ದರು. </p>.<p>ಹೆಲ್ಮೆಟ್ ಏಕೆ ಧರಿಸಿಲ್ಲ ಎಂದು ಎಸ್ಪಿ ಪ್ರಶ್ನಿಸಿದರು. ‘ಸರ್ ನಾನು ಪೊಲೀಸ್’ ಎಂದು ಸಿಬ್ಬಂದಿ ಉತ್ತರಿಸಿದರು. ‘ನೀನು ಪೊಲೀಸ್ ಆದರೆ ನನಗೇನು ಮೊದಲು ದಂಡ ಕಟ್ಟು ತೆರಳು’ ಎಂದರು.</p>.<p>‘ನೀನು ಪೋಲಿಸ್ ಆದರೂ ಸಹ ಹೆಲ್ಮೆಟ್ ಧರಿಸಬೇಕು ಎನ್ನುವುದು ಗೊತ್ತಾಗುವುದಿಲ್ಲವೇ? ದಂಡ ಕಟ್ಟು. ನಾನು ಹೇಳುವವರೆಗೂ ರಸ್ತೆಯ ನಡುವೆ ನಿಂತು ಯಾರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಬರುವರೊ ಅವರನ್ನು ತಡೆ’ ಎಂದು ಶಿಕ್ಷೆ ಸಹ ನೀಡಿದರು.</p>.<p>ಸರ್.ಎಂ.ವಿಶ್ವೇಶ್ವರಯ್ಯ ವೃತ್ತ, ಶಿಡ್ಲಘಟ್ಟ ವೃತ್ತ, ಎಂ.ಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಯ ಎಲ್ಲೆಡೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಡಿವೈಎಸ್ಪಿ ಶಿವಕುಮಾರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. </p>.<p>ಹೆಲ್ಮೆಟ್ ಧರಿಸದ ಕೆಲವರನ್ನು ಎಸ್ಪಿ ತಡೆದಾಗ ಅವರು ಎಸ್ಪಿ ಅವರ ಜೊತೆಯೇ ವಾಗ್ವಾದ ನಡೆಸಿದರು. ಆಗ ಎಸ್ಪಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಸುಮ್ಮನಾದರು. ದಂಡ ಪಾವತಿಸಿದರು. </p>.<p>ಹೆಲ್ಮೆಟ್ ಧರಿಸದವರು ಗಲ್ಲಿ ರಸ್ತೆಗಳಲ್ಲಿ ಸಾಗುತ್ತಿದ್ದಾರೆ ಎನ್ನುವುದು ಕಂಡೊಡನೆ ಆ ರಸ್ತೆಗಳಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದರು. ‘ಸರ್, ನಾನು ಆಸ್ಪತ್ರೆಗೆ ಬಂದಿದ್ದೆ’, ‘ಹೆಲ್ಮೆಟ್ ಮನೆಯಲ್ಲಿದೆ’ ಹೀಗೆ ನಾನಾ ಸಬೂಬು ಹೇಳಿದರೂ ಅಧಿಕಾರಿಗಳು ದಂಡ ವಿಧಿಸಿದರು. ಇನ್ನು ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು. </p>.<p>ಬಜಾರ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸದೆ ಬಂದರು. ಮಹಿಳಾ ಅಧಿಕಾರಿ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ‘ಆಸ್ಪತ್ರೆಗೆ ಬಂದಿದ್ದೇನೆ. ದಂಡಕಟ್ಟುವಷ್ಟು ಹಣವಿಲ್ಲ’ ಎಂದು ₹ 300 ಕೈಯಲ್ಲಿಡಿದು ಬೇಡಿಕೊಂಡರು. ಆಗ ಮಹಿಳಾ ಅಧಿಕಾರಿ, ‘ನಿಮ್ಮಿಂದ ದಂಡವನ್ನು ಪಡೆಯುವುದಿಲ್ಲ. ಆದರೆ ನೀವು ಈಗಲೇ ಹೆಲ್ಮೆಟ್ ತೆಗೆದುಕೊಂಡು ಬಂದು ಬೈಕ್ ತೆಗೆದುಕೊಂಡು ಹೋಗಿ. ನಿಮ್ಮ ರಕ್ಷಣೆಗಾಗಿ ನಾನು ಈ ಮಾತು ಹೇಳುತ್ತಿರುವುದು’ ಎಂದು ಮನವರಿಕೆ ಮಾಡಿಕೊಟ್ಟರು.</p>.<p>ಹೆಲ್ಮೆಟ್ ಧರಿಸದೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕೆಲವರು ನಾವು ರಾಜಕೀಯ ನಾಯಕರು ಎಂದು ಪ್ರಭಾವಗಳನ್ನು ಬೀರಲು ಸಹ ಮುಂದಾದರು. ಆದರೆ ಇದ್ಯಾವುದಕ್ಕೂ ಮಣಿಯದ ಅಧಿಕಾರಿಗಳು ದಂಡವನ್ನು ಪಾವತಿಸಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.</p>.<p>ಸ್ಪಂದನೆಯೂ ಉತ್ತಮ: ಸಾಮಾನ್ಯವಾಗಿ ಚಿಕ್ಕಬಳ್ಳಾಪುರದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಾಗುವುದು ಹೆಚ್ಚು ಕಂಡು ಬರುತ್ತಿತ್ತು. ಆದರೆ ಕಡ್ಡಾಯದ ಆದೇಶ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು.</p>.<p>ಹೀಗೆ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯದ ಮೊದಲ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದರು.</p>.<p> <strong>ಜಾಗೃತಿ ಜಾಥಾ</strong> </p><p>ಬೆಳ್ಳಿಗ್ಗೆ ನಗರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲು ಬೈಕ್ ಜಾಥಾ ನಡೆಸಿದರು. ನಗರದ ಬಿಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: ಜಿ</strong>ಲ್ಲೆಯಾದ್ಯಂತ ಶುಕ್ರವಾರದಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸಾರ್ವಜನಿಕರಿಗೆ ಪೊಲೀಸರು ದಂಡ ವಿಧಿಸಿದರು. </p>.<p>ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸುತ್ತಿದ್ದಾರೆ ಎನ್ನುವುದು ವಾಹನ ಸವಾರರಿಗೆ ತಿಳಿದ ತಕ್ಷಣ ನಗರದ ಸಣ್ಣ ಪುಟ್ಟ ಗಲ್ಲಿಗಳಲ್ಲಿ ಸಾಗಿದರು. ಆದರೆ ಪೊಲೀಸರು ಈ ಗಲ್ಲಿಗಳಲ್ಲಿಯೂ ಕಾರ್ಯಾಚರಣೆ ನಡೆಸಿದರು.</p>.<p>ವಿಶೇಷ ಎಂದರೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ‘ನಾನು ಪೊಲೀಸ್’ ಎಂದ ಸಿಬ್ಬಂದಿಗೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡು ರಸ್ತೆಯಲ್ಲಿಯೇ ಶಿಕ್ಷೆ ವಿಧಿಸಿದರು. ಈ ಸಿಬ್ಬಂದಿ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಂಚಾರ ಠಾಣೆಯಲ್ಲಿಯೇ ಕೆಲಸ ನಿರ್ವಹಿಸಿದ್ದರು.</p>.<p>ಸಿಬ್ಬಂದಿಯೊಬ್ಬರು ಹೆಲ್ಮೆಟ್ ಧರಿಸದೆ ಸಾಮಾನ್ಯ ಬಟ್ಟೆ ತೊಟ್ಟು ಬೈಕ್ನಲ್ಲಿ ಬಿಬಿ ರಸ್ತೆಯಲ್ಲಿ ಬಂದರು. ಆಗ ಬಿಬಿ ರಸ್ತೆಯಲ್ಲಿ ಖುದ್ದು ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಕಣ್ಣಿಗೆ ಬಿದ್ದರು. </p>.<p>ಹೆಲ್ಮೆಟ್ ಏಕೆ ಧರಿಸಿಲ್ಲ ಎಂದು ಎಸ್ಪಿ ಪ್ರಶ್ನಿಸಿದರು. ‘ಸರ್ ನಾನು ಪೊಲೀಸ್’ ಎಂದು ಸಿಬ್ಬಂದಿ ಉತ್ತರಿಸಿದರು. ‘ನೀನು ಪೊಲೀಸ್ ಆದರೆ ನನಗೇನು ಮೊದಲು ದಂಡ ಕಟ್ಟು ತೆರಳು’ ಎಂದರು.</p>.<p>‘ನೀನು ಪೋಲಿಸ್ ಆದರೂ ಸಹ ಹೆಲ್ಮೆಟ್ ಧರಿಸಬೇಕು ಎನ್ನುವುದು ಗೊತ್ತಾಗುವುದಿಲ್ಲವೇ? ದಂಡ ಕಟ್ಟು. ನಾನು ಹೇಳುವವರೆಗೂ ರಸ್ತೆಯ ನಡುವೆ ನಿಂತು ಯಾರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಬರುವರೊ ಅವರನ್ನು ತಡೆ’ ಎಂದು ಶಿಕ್ಷೆ ಸಹ ನೀಡಿದರು.</p>.<p>ಸರ್.ಎಂ.ವಿಶ್ವೇಶ್ವರಯ್ಯ ವೃತ್ತ, ಶಿಡ್ಲಘಟ್ಟ ವೃತ್ತ, ಎಂ.ಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಯ ಎಲ್ಲೆಡೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಡಿವೈಎಸ್ಪಿ ಶಿವಕುಮಾರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. </p>.<p>ಹೆಲ್ಮೆಟ್ ಧರಿಸದ ಕೆಲವರನ್ನು ಎಸ್ಪಿ ತಡೆದಾಗ ಅವರು ಎಸ್ಪಿ ಅವರ ಜೊತೆಯೇ ವಾಗ್ವಾದ ನಡೆಸಿದರು. ಆಗ ಎಸ್ಪಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಸುಮ್ಮನಾದರು. ದಂಡ ಪಾವತಿಸಿದರು. </p>.<p>ಹೆಲ್ಮೆಟ್ ಧರಿಸದವರು ಗಲ್ಲಿ ರಸ್ತೆಗಳಲ್ಲಿ ಸಾಗುತ್ತಿದ್ದಾರೆ ಎನ್ನುವುದು ಕಂಡೊಡನೆ ಆ ರಸ್ತೆಗಳಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದರು. ‘ಸರ್, ನಾನು ಆಸ್ಪತ್ರೆಗೆ ಬಂದಿದ್ದೆ’, ‘ಹೆಲ್ಮೆಟ್ ಮನೆಯಲ್ಲಿದೆ’ ಹೀಗೆ ನಾನಾ ಸಬೂಬು ಹೇಳಿದರೂ ಅಧಿಕಾರಿಗಳು ದಂಡ ವಿಧಿಸಿದರು. ಇನ್ನು ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು. </p>.<p>ಬಜಾರ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸದೆ ಬಂದರು. ಮಹಿಳಾ ಅಧಿಕಾರಿ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ‘ಆಸ್ಪತ್ರೆಗೆ ಬಂದಿದ್ದೇನೆ. ದಂಡಕಟ್ಟುವಷ್ಟು ಹಣವಿಲ್ಲ’ ಎಂದು ₹ 300 ಕೈಯಲ್ಲಿಡಿದು ಬೇಡಿಕೊಂಡರು. ಆಗ ಮಹಿಳಾ ಅಧಿಕಾರಿ, ‘ನಿಮ್ಮಿಂದ ದಂಡವನ್ನು ಪಡೆಯುವುದಿಲ್ಲ. ಆದರೆ ನೀವು ಈಗಲೇ ಹೆಲ್ಮೆಟ್ ತೆಗೆದುಕೊಂಡು ಬಂದು ಬೈಕ್ ತೆಗೆದುಕೊಂಡು ಹೋಗಿ. ನಿಮ್ಮ ರಕ್ಷಣೆಗಾಗಿ ನಾನು ಈ ಮಾತು ಹೇಳುತ್ತಿರುವುದು’ ಎಂದು ಮನವರಿಕೆ ಮಾಡಿಕೊಟ್ಟರು.</p>.<p>ಹೆಲ್ಮೆಟ್ ಧರಿಸದೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕೆಲವರು ನಾವು ರಾಜಕೀಯ ನಾಯಕರು ಎಂದು ಪ್ರಭಾವಗಳನ್ನು ಬೀರಲು ಸಹ ಮುಂದಾದರು. ಆದರೆ ಇದ್ಯಾವುದಕ್ಕೂ ಮಣಿಯದ ಅಧಿಕಾರಿಗಳು ದಂಡವನ್ನು ಪಾವತಿಸಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.</p>.<p>ಸ್ಪಂದನೆಯೂ ಉತ್ತಮ: ಸಾಮಾನ್ಯವಾಗಿ ಚಿಕ್ಕಬಳ್ಳಾಪುರದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಾಗುವುದು ಹೆಚ್ಚು ಕಂಡು ಬರುತ್ತಿತ್ತು. ಆದರೆ ಕಡ್ಡಾಯದ ಆದೇಶ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು.</p>.<p>ಹೀಗೆ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯದ ಮೊದಲ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದರು.</p>.<p> <strong>ಜಾಗೃತಿ ಜಾಥಾ</strong> </p><p>ಬೆಳ್ಳಿಗ್ಗೆ ನಗರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲು ಬೈಕ್ ಜಾಥಾ ನಡೆಸಿದರು. ನಗರದ ಬಿಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>