ಶಿಡ್ಲಘಟ್ಟದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆ.ಎಚ್.ಮುನಿಯಪ್ಪ ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ. ಹಾಗೇನಾದರೂ ಅಂದುಕೊಳ್ಳುವಂತಿದ್ದರೆ ಅವರಷ್ಟಕ್ಕೆ ಅವರೇ ಹೇಳಿಕೊಳ್ಳಬೇಕು. ಹೈಕಮಾಂಡ್ ಮಟ್ಟದಲ್ಲಿ ಆಗಲಿ, ರಾಜ್ಯ ಮಟ್ಟದಲ್ಲಿ ಆಗಲಿ ಅವರು ಹೆಸರು ಪ್ರಸ್ತಾಪವೇ ಆಗಿಲ್ಲ. ಅವರಷ್ಟಕ್ಕೆ ಅವರೇ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.