<p><strong>ಚಿಕ್ಕಬಳ್ಳಾಪುರ</strong>: ಇಲ್ಲಿನ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯ 54 ಬಸ್ಗಳು ಗುಜರಿ ಸೇರಿವೆ. ಹೌದು 15 ವರ್ಷ ಮೀರಿದ ಮತ್ತು ಇದಕ್ಕಿಂತಲೂ ಹಳೆಯದಾದ ಬಸ್ಗಳನ್ನು ಸಂಸ್ಥೆಯು ಗುಜರಿಗೆ ನೀಡಿದೆ.</p>.<p>ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿತ್ತು. ಆ ಪ್ರಕಾರ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ವಾಹನಗಳು ಗುಜರಿ ಸೇರುವುದಕ್ಕೆ ಅರ್ಹವಾಗಿವೆ. 15 ವರ್ಷ ಮೇಲ್ಪಟ್ಟ ಮ್ಯಾಕ್ಸಿಕ್ಯಾಬ್, ಕಾರು, ಆಟೊ, ಬಸ್ ಮತ್ತು ಲಾರಿಗಳು ಸೇರಿದಂತೆ ಒಟ್ಟು 39 ಲಕ್ಷ ವಾಹನಗಳು ಗುಜರಿ ಸೇರುತ್ತವೆ. ಈ ನೀತಿಯಡಿ ರಾಜ್ಯದಲ್ಲಿ 45 ಸಾವಿರ ಬಸ್ಗಳು ಗುಜರಿ ಸೇರಲಿವೆ.</p>.<p>ಈಗ ಚಿಕ್ಕಬಳ್ಳಾಪುರ ಮತ್ತು ಕೋಲಾರ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯ 59 ಬಸ್ಗಳು ಗುಜರಿ ಸೇರಿವೆ. ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ವಿಭಾಗೀಯ 54 ಮತ್ತು ಕೋಲಾರ ವಿಭಾಗದ 5 ಬಸ್ಗಳು ಇವೆ. ನಗರದ ಹೊರವಲಯದ ಕೆ.ವಿ.ಕ್ಯಾಂಪಸ್ ಬಳಿ ಬಸ್ಗಳನ್ನು ಟೆಂಡರ್ ಪಡೆದ ಗುಜರಿಯವರು ಹಲವು ದಿನಗಳಿಂದ ವಿಲೇವಾರಿ ಮಾಡುತ್ತಿದ್ದಾರೆ.</p>.<p>ಪರಿಸರ ಮಾಲಿನ್ಯವನ್ನು ತಡೆಯುವುದು ಮತ್ತು ಹೊಸ ವಾಹನಗಳ ಖರೀದಿಗೆ ಉತ್ತೇಜಿಸವ ಕಾರಣ ಕೇಂದ್ರ ಸರ್ಕಾರ ಗುಜರಿ ನೀತಿಯನ್ನು ಜಾರಿಗೊಳಿಸಿದೆ.</p>.<p>ಒಂದು ಸಮಯದಲ್ಲಿ ಅಂದಚೆಂದದಿಂದ ಕಂಗೊಳಿಸಿದ್ದ ಮತ್ತು ಲಕ್ಷಾಂತರ ಕಿಲೋಮೀಟರ್ ಸಂಚರಿಸಿರುವ ರಾಜಹಂಸ ಹಾಗೂ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಗಳ ಬಿಡಿಭಾಗಗಳನ್ನು ಕಳಚಲಾಗುತ್ತಿದೆ. ಬಸ್ಗಳು ತಮ್ಮ ಅಂಗಗಳನ್ನು ಒಂದೊಂದಾಗಿ ಕಳಚುತ್ತಿವೆ. ಈ ಬಸ್ಗಳನ್ನು ನಾಲ್ಕು ಗುಜರಿ ವ್ಯಾಪಾರಿಗಳು<br />ಪಡೆದಿದ್ದಾರಂತೆ.</p>.<p>ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಜನರಿಂದ ಅಬ್ಬಾ ಎನ್ನುವ ಉದ್ಗಾರ ಖಂಡಿತ ಬರುತ್ತದೆ. ಸೀಟ್ಗಳು, ಟೈರ್ಗಳು, ಗೇರ್ಗಳು, ಬಸ್ನ ಹೊರಕವಚದ ತಗಡು, ಸ್ಟೇರಿಂಗ್, ಎಂಜಿನ್...ಹೀಗೆ ನಾನಾ ಬಿಡಿಭಾಗಗಳು ಕಾಣುತ್ತವೆ. ಹತ್ತಾರು ಮಂದಿ ಕಾರ್ಮಿಕರು ಹಲವು ದಿನಗಳಿಂದ ಈ ವಾಹನಗಳನ್ನು ಕಳಚುತ್ತಿದ್ದಾರೆ.</p>.<p>‘ಟೆಂಡರ್ನಲ್ಲಿ ಈ ಬಸ್ಗಳನ್ನು ಖರೀದಿಸಿದ್ದೇವೆ. ₹ 1.80 ಲಕ್ಷ, ₹ 2.20 ಲಕ್ಷ ಹೀಗೆ ವಿವಿಧ ಬೆಲೆಯಲ್ಲಿ ಖರೀದಿಸಿದ್ದೇವೆ. ಈ ಹಳೇ ಬಸ್ಗಳನ್ನು ಇಲ್ಲಿ ಕಳಚುತ್ತಿದ್ದೇವೆ. ನಮಗೆ ಯಾವ ಭಾಗಗಳು ಬೇಕೊ ಅವುಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೊ ಮಾಡುತ್ತಿದ್ದೇವೆ. ಕೋಲಾರ ಹತ್ತಿರವಿರುವ ಕಾರಣ ಅಲ್ಲಿನ ಬಸ್ಗಳನ್ನೂ ಇಲ್ಲಿಯೇ ಕಳಚುತ್ತಿದ್ದೇವೆ’ ಎಂದು ಗುಜರಿ ವ್ಯಾಪಾರಿಯೊಬ್ಬರು ತಿಳಿಸಿದರು.</p>.<p>‘15, 20 ವರ್ಷದ ಹಳೇ ಬಸ್ಗಳು ಇಲ್ಲಿವೆ. ರಾಜ್ಯದಾದ್ಯಂತ ಟೆಂಡರ್ನಲ್ಲಿ ಈ ಗುಜರಿ ಬಸ್ಗಳನ್ನು ಮಾರಾಟಕ್ಕೆ ಇಟ್ಟಿದ್ದರು. ನಾವು ಬಿಡ್ ಹಾಕಿದೆವು. ಬಸ್ ಅನ್ನು ಪೂರ್ಣವಾಗಿ ಕಳಚುತ್ತಿದ್ದೇವೆ. ನಮಗೆ ಅಗತ್ಯವಾದ ಭಾಗಗಳನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಇಲ್ಲಿನ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯ 54 ಬಸ್ಗಳು ಗುಜರಿ ಸೇರಿವೆ. ಹೌದು 15 ವರ್ಷ ಮೀರಿದ ಮತ್ತು ಇದಕ್ಕಿಂತಲೂ ಹಳೆಯದಾದ ಬಸ್ಗಳನ್ನು ಸಂಸ್ಥೆಯು ಗುಜರಿಗೆ ನೀಡಿದೆ.</p>.<p>ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿತ್ತು. ಆ ಪ್ರಕಾರ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ವಾಹನಗಳು ಗುಜರಿ ಸೇರುವುದಕ್ಕೆ ಅರ್ಹವಾಗಿವೆ. 15 ವರ್ಷ ಮೇಲ್ಪಟ್ಟ ಮ್ಯಾಕ್ಸಿಕ್ಯಾಬ್, ಕಾರು, ಆಟೊ, ಬಸ್ ಮತ್ತು ಲಾರಿಗಳು ಸೇರಿದಂತೆ ಒಟ್ಟು 39 ಲಕ್ಷ ವಾಹನಗಳು ಗುಜರಿ ಸೇರುತ್ತವೆ. ಈ ನೀತಿಯಡಿ ರಾಜ್ಯದಲ್ಲಿ 45 ಸಾವಿರ ಬಸ್ಗಳು ಗುಜರಿ ಸೇರಲಿವೆ.</p>.<p>ಈಗ ಚಿಕ್ಕಬಳ್ಳಾಪುರ ಮತ್ತು ಕೋಲಾರ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯ 59 ಬಸ್ಗಳು ಗುಜರಿ ಸೇರಿವೆ. ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ವಿಭಾಗೀಯ 54 ಮತ್ತು ಕೋಲಾರ ವಿಭಾಗದ 5 ಬಸ್ಗಳು ಇವೆ. ನಗರದ ಹೊರವಲಯದ ಕೆ.ವಿ.ಕ್ಯಾಂಪಸ್ ಬಳಿ ಬಸ್ಗಳನ್ನು ಟೆಂಡರ್ ಪಡೆದ ಗುಜರಿಯವರು ಹಲವು ದಿನಗಳಿಂದ ವಿಲೇವಾರಿ ಮಾಡುತ್ತಿದ್ದಾರೆ.</p>.<p>ಪರಿಸರ ಮಾಲಿನ್ಯವನ್ನು ತಡೆಯುವುದು ಮತ್ತು ಹೊಸ ವಾಹನಗಳ ಖರೀದಿಗೆ ಉತ್ತೇಜಿಸವ ಕಾರಣ ಕೇಂದ್ರ ಸರ್ಕಾರ ಗುಜರಿ ನೀತಿಯನ್ನು ಜಾರಿಗೊಳಿಸಿದೆ.</p>.<p>ಒಂದು ಸಮಯದಲ್ಲಿ ಅಂದಚೆಂದದಿಂದ ಕಂಗೊಳಿಸಿದ್ದ ಮತ್ತು ಲಕ್ಷಾಂತರ ಕಿಲೋಮೀಟರ್ ಸಂಚರಿಸಿರುವ ರಾಜಹಂಸ ಹಾಗೂ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಗಳ ಬಿಡಿಭಾಗಗಳನ್ನು ಕಳಚಲಾಗುತ್ತಿದೆ. ಬಸ್ಗಳು ತಮ್ಮ ಅಂಗಗಳನ್ನು ಒಂದೊಂದಾಗಿ ಕಳಚುತ್ತಿವೆ. ಈ ಬಸ್ಗಳನ್ನು ನಾಲ್ಕು ಗುಜರಿ ವ್ಯಾಪಾರಿಗಳು<br />ಪಡೆದಿದ್ದಾರಂತೆ.</p>.<p>ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಜನರಿಂದ ಅಬ್ಬಾ ಎನ್ನುವ ಉದ್ಗಾರ ಖಂಡಿತ ಬರುತ್ತದೆ. ಸೀಟ್ಗಳು, ಟೈರ್ಗಳು, ಗೇರ್ಗಳು, ಬಸ್ನ ಹೊರಕವಚದ ತಗಡು, ಸ್ಟೇರಿಂಗ್, ಎಂಜಿನ್...ಹೀಗೆ ನಾನಾ ಬಿಡಿಭಾಗಗಳು ಕಾಣುತ್ತವೆ. ಹತ್ತಾರು ಮಂದಿ ಕಾರ್ಮಿಕರು ಹಲವು ದಿನಗಳಿಂದ ಈ ವಾಹನಗಳನ್ನು ಕಳಚುತ್ತಿದ್ದಾರೆ.</p>.<p>‘ಟೆಂಡರ್ನಲ್ಲಿ ಈ ಬಸ್ಗಳನ್ನು ಖರೀದಿಸಿದ್ದೇವೆ. ₹ 1.80 ಲಕ್ಷ, ₹ 2.20 ಲಕ್ಷ ಹೀಗೆ ವಿವಿಧ ಬೆಲೆಯಲ್ಲಿ ಖರೀದಿಸಿದ್ದೇವೆ. ಈ ಹಳೇ ಬಸ್ಗಳನ್ನು ಇಲ್ಲಿ ಕಳಚುತ್ತಿದ್ದೇವೆ. ನಮಗೆ ಯಾವ ಭಾಗಗಳು ಬೇಕೊ ಅವುಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೊ ಮಾಡುತ್ತಿದ್ದೇವೆ. ಕೋಲಾರ ಹತ್ತಿರವಿರುವ ಕಾರಣ ಅಲ್ಲಿನ ಬಸ್ಗಳನ್ನೂ ಇಲ್ಲಿಯೇ ಕಳಚುತ್ತಿದ್ದೇವೆ’ ಎಂದು ಗುಜರಿ ವ್ಯಾಪಾರಿಯೊಬ್ಬರು ತಿಳಿಸಿದರು.</p>.<p>‘15, 20 ವರ್ಷದ ಹಳೇ ಬಸ್ಗಳು ಇಲ್ಲಿವೆ. ರಾಜ್ಯದಾದ್ಯಂತ ಟೆಂಡರ್ನಲ್ಲಿ ಈ ಗುಜರಿ ಬಸ್ಗಳನ್ನು ಮಾರಾಟಕ್ಕೆ ಇಟ್ಟಿದ್ದರು. ನಾವು ಬಿಡ್ ಹಾಕಿದೆವು. ಬಸ್ ಅನ್ನು ಪೂರ್ಣವಾಗಿ ಕಳಚುತ್ತಿದ್ದೇವೆ. ನಮಗೆ ಅಗತ್ಯವಾದ ಭಾಗಗಳನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>