<p><strong>ಚಿಕ್ಕಬಳ್ಳಾಪುರ: </strong>ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಬೇಕಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ಸುರಕ್ಷಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಸ್ಜೆಸಿಐಟಿ ವಿದ್ಯಾಲಯದ ಪ್ರಾಂಶುಪಾಲ ಜಿ.ಟಿ. ರಾಜು ತಿಳಿಸಿದರು.</p>.<p>ಪರೀಕ್ಷೆ ಬರೆಯಲು ಬರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡುವಂತೆ ಡಿಡಿಪಿಐ ಕೆ.ಎಂ. ಜಯರಾಮರೆಡ್ಡಿ ಅವರಿಗೆ ಶುಕ್ರವಾರ ಉಚಿತವಾಗಿ ಮಾಸ್ಕ್ಗಳನ್ನು ನೀಡಿ ಮಾತನಾಡಿದರು. ಎಸ್ಜೆಸಿಐಟಿ, ಬಿಜಿಎಸ್ ರೋಟರಿ, ರೋಟರಿ ಮಿಡ್ಟೈನ್ ಮತ್ತು ರೋಟರಿ ಶಂಕರ ಪಾರ್ಕ್ ಸಂಸ್ಥೆಗಳು ಈ ಮಾಸ್ಕ್ಗಳನ್ನು ಕೊಡುಗೆಯಾಗಿ ನೀಡಿದವು.</p>.<p>ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಮಕ್ಕಳು ಉತ್ತಮವಾಗಿ ಪರೀಕ್ಷೆ ಬರೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಕೋವಿಡ್ನ ಈ ಸಂಕಷ್ಟದ ಕಾಲದಲ್ಲಿ ಎಲ್ಲರೂ ಸರ್ಕಾರದ ಮಾರ್ಗಸೂಚಿ ಪಾಲಿಸಿ ತಮ್ಮ ಹಾಗೂ ಸಮಾಜರ ಆರೋಗ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.</p>.<p>ಎಸ್ಜೆಐಟಿ ಕುಲಸಚಿವ ಜೆ. ಸುರೇಶ್, ರೋಟರಿ ಅಧ್ಯಕ್ಷ ಜಿ. ನಾರಾಯಣ, ಕಾರ್ಯದರ್ಶಿ ಸುನಿಲ್, ರೋಟರಿ ಸಂಸ್ಥೆಯ ಶೋಭಾ, ಸತೀಶ್ ಚಂದ್ರರೆಡ್ಡಿ, ನಾಗೇಂದ್ರಬಾಬು ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಹಾಗೂ ರೋಟರಿ ಸಂಸ್ಥೆ ಪದಾಧಿಕಾರಿಗಳು<br />ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಬೇಕಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ಸುರಕ್ಷಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಸ್ಜೆಸಿಐಟಿ ವಿದ್ಯಾಲಯದ ಪ್ರಾಂಶುಪಾಲ ಜಿ.ಟಿ. ರಾಜು ತಿಳಿಸಿದರು.</p>.<p>ಪರೀಕ್ಷೆ ಬರೆಯಲು ಬರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡುವಂತೆ ಡಿಡಿಪಿಐ ಕೆ.ಎಂ. ಜಯರಾಮರೆಡ್ಡಿ ಅವರಿಗೆ ಶುಕ್ರವಾರ ಉಚಿತವಾಗಿ ಮಾಸ್ಕ್ಗಳನ್ನು ನೀಡಿ ಮಾತನಾಡಿದರು. ಎಸ್ಜೆಸಿಐಟಿ, ಬಿಜಿಎಸ್ ರೋಟರಿ, ರೋಟರಿ ಮಿಡ್ಟೈನ್ ಮತ್ತು ರೋಟರಿ ಶಂಕರ ಪಾರ್ಕ್ ಸಂಸ್ಥೆಗಳು ಈ ಮಾಸ್ಕ್ಗಳನ್ನು ಕೊಡುಗೆಯಾಗಿ ನೀಡಿದವು.</p>.<p>ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಮಕ್ಕಳು ಉತ್ತಮವಾಗಿ ಪರೀಕ್ಷೆ ಬರೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಕೋವಿಡ್ನ ಈ ಸಂಕಷ್ಟದ ಕಾಲದಲ್ಲಿ ಎಲ್ಲರೂ ಸರ್ಕಾರದ ಮಾರ್ಗಸೂಚಿ ಪಾಲಿಸಿ ತಮ್ಮ ಹಾಗೂ ಸಮಾಜರ ಆರೋಗ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.</p>.<p>ಎಸ್ಜೆಐಟಿ ಕುಲಸಚಿವ ಜೆ. ಸುರೇಶ್, ರೋಟರಿ ಅಧ್ಯಕ್ಷ ಜಿ. ನಾರಾಯಣ, ಕಾರ್ಯದರ್ಶಿ ಸುನಿಲ್, ರೋಟರಿ ಸಂಸ್ಥೆಯ ಶೋಭಾ, ಸತೀಶ್ ಚಂದ್ರರೆಡ್ಡಿ, ನಾಗೇಂದ್ರಬಾಬು ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಹಾಗೂ ರೋಟರಿ ಸಂಸ್ಥೆ ಪದಾಧಿಕಾರಿಗಳು<br />ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>