<p><strong>ಚಿಕ್ಕಬಳ್ಳಾಪುರ:</strong> ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವ್ಯಕ್ತಿ ಪರವಾಗಿ ಸಚಿವ ಸಚಿವ ಜಮೀರ್ ಅಹಮದ್ ಖಾನ್ ತಾಲ್ಲೂಕಿನ ಪೆರೇಸಂದ್ರ ಠಾಣೆ ಪಿಎಸ್ಐ ಜಗದೀಶ್ ರೆಡ್ಡಿ ಅವರ ಜೊತೆ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. </p><p>ಈ ವಿಚಾರವಾಗಿ ಜೆಡಿಎಸ್ ರಾಜ್ಯ ಘಟಕವು ‘ಎಕ್ಸ್’ನಲ್ಲಿ ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. </p>.ಬಡವರಿಗೆ ಬಿಜೆಪಿ ಒಂದೇ ಒಂದು ಸೂರು ಕೊಟ್ಟಿದ್ದರೆ ಇಂದೇ ರಾಜೀನಾಮೆ: ಜಮೀರ್.<p>ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಕೃಷ್ಣಪ್ಪ ಮತ್ತಿತರರು ತೆಲಂಗಾಣದ ವ್ಯಾಪಾರಿಗಳಿಗೆ ಜೋಳ ಮಾರಾಟ ಮಾಡಿದ್ದರು. ಆದರೆ ವ್ಯಾಪಾರಿಗಳು ಹಣ ನೀಡದೆ ಸತಾಯಿಸುತ್ತಿದ್ದರು. </p><p>ಈ ಸಂಬಂಧ ಹೈದರಾಬಾದ್ನ ವ್ಯಾಪಾರಿಗಳಾದ ಅಬ್ದುಲ್ ರಜಾಕ್, ಅಕ್ಬರ್ ಪಾಷಾ, ನಾಸೀರ್ ಅಹಮದ್ ವಿರುದ್ಧ ಪೆರೇಸಂದ್ರ ಠಾಣೆಯಲ್ಲಿ ದೂರು ನೀಡಲಾಗಿತ್ತು. </p><p><strong>ಆಡಿಯೊದಲ್ಲಿ ಏನಿದೆ:</strong> ಪಿಎಸ್ಐ ಜಗದೀಶ್ ರೆಡ್ಡಿ ಅವರಿಗೆ ಕರೆ ಮಾಡಿರುವ ಸಚಿವರು, ‘ನಮಸ್ತೆ ಬ್ರದರ್. ಹೈದರಾಬಾದ್ನ ನಮ್ಮ ಸಂಬಂಧಿ ಅಕ್ಬರ್ ಪಾಷಾ ಯಾರಿಗೊ ಹಣ ಕೊಡಬೇಕಿತ್ತಂತೆ. ಅವರನ್ನು ಕರೆದುಕೊಂಡು ಬಂದಿದ್ದೀರಂತೆ. ಸ್ವಲ್ಪ ಸಹಾಯ ಮಾಡಿ ಬ್ರದರ್’ ಎಂದು ಕೇಳಿದ್ದಾರೆ. </p><p>ಆಗ ಪಿಎಸ್ಐ ಜಗದೀಶ್ ರೆಡ್ಡಿ, ‘ಸೆಟ್ಲು ಮಾಡಿಕೊಳ್ಳಿ ಎಂದು ಹೇಳಿದ್ದೇವೆ. ನಮ್ಮ ಮುಂದೆ ಕುಳಿತು ಮಾತನಾಡಿದ್ದರೆ ಕ್ಲಿಯರ್ ಮಾಡುತ್ತಿದ್ದೆ. ಸೆಟ್ಲು ಮಾಡಿಕೊಂಡರೆ ‘ಬಿ’ ರಿಪೋರ್ಟ್ ಹಾಕುತ್ತೇವೆ ಎಂದಿದ್ದೆವು. ಅವರಿಗೂ ಇವರಿಗೂ ಈಗೊ ಸಮಸ್ಯೆ’ ಎಂದಿದ್ದಾರೆ.</p>.ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ: ಜಮೀರ್ ವಿಚಾರಣೆ ನಡೆಸಿದ ಲೋಕಾಯುಕ್ತ.<p>ಆಗ ಸಚಿವರು, ಈಗೊಂದು ಅವಕಾಶಕೊಡಿ ಎಂದು ಕೋರಿದ್ದಾರೆ.</p><p><strong>‘ಎಕ್ಸ್’ನಲ್ಲಿ ಜೆಡಿಎಸ್ ಆಕ್ರೋಶ:</strong> ‘ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆಯುವ ಸಚಿವ ಜಮೀರ್ ಅಹಮದ್ ನಿಮಗೆ ನಾಚಿಕೆಯಾಗಬೇಕು !</p><p>ರಾಜ್ಯದ ರೈತರಿಗೆ ವಂಚಿಸಿರುವ ನಿಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಶಿಫಾರಸ್ಸು ಮಾಡಿರುವುದು ಅಕ್ಷಮ್ಯ.</p><p>ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ, ರಾಜ್ಯದ ರೈತರಿಗೆ ಮೋಸ ಮಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ ?</p><p>ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವುದನ್ನು ಬಿಟ್ಟು ಪೊಲೀಸ್ ಇಲಾಖೆ ಸೆಟಲ್ಮೆಂಟ್ ಕೇಂದ್ರಗಳಾಗಿವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ ಎಂದು ಜೆಡಿಎಸ್ ‘ಎಕ್ಸ್’ನಲ್ಲಿ ಸಚಿವರ ನಡೆಯನ್ನು ಟೀಕಿಸಿದೆ.</p> .ಸಚಿವ ಜಮೀರ್ ವಿರುದ್ಧದ ಪ್ರಕರಣ: ಲೋಕಾಯುಕ್ತ ಪೊಲೀಸರಿಗೆ ದಾಖಲೆ ನೀಡಿದ KGF ಬಾಬು.<p>ಇತ್ತೀಚೆಗೆ ಪಿಎಸ್ಐ ಜಗದೀಶ್ ರೆಡ್ಡಿ ಅವರು ಪೆರೇಸಂದ್ರದಿಂದ ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವ್ಯಕ್ತಿ ಪರವಾಗಿ ಸಚಿವ ಸಚಿವ ಜಮೀರ್ ಅಹಮದ್ ಖಾನ್ ತಾಲ್ಲೂಕಿನ ಪೆರೇಸಂದ್ರ ಠಾಣೆ ಪಿಎಸ್ಐ ಜಗದೀಶ್ ರೆಡ್ಡಿ ಅವರ ಜೊತೆ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. </p><p>ಈ ವಿಚಾರವಾಗಿ ಜೆಡಿಎಸ್ ರಾಜ್ಯ ಘಟಕವು ‘ಎಕ್ಸ್’ನಲ್ಲಿ ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. </p>.ಬಡವರಿಗೆ ಬಿಜೆಪಿ ಒಂದೇ ಒಂದು ಸೂರು ಕೊಟ್ಟಿದ್ದರೆ ಇಂದೇ ರಾಜೀನಾಮೆ: ಜಮೀರ್.<p>ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಕೃಷ್ಣಪ್ಪ ಮತ್ತಿತರರು ತೆಲಂಗಾಣದ ವ್ಯಾಪಾರಿಗಳಿಗೆ ಜೋಳ ಮಾರಾಟ ಮಾಡಿದ್ದರು. ಆದರೆ ವ್ಯಾಪಾರಿಗಳು ಹಣ ನೀಡದೆ ಸತಾಯಿಸುತ್ತಿದ್ದರು. </p><p>ಈ ಸಂಬಂಧ ಹೈದರಾಬಾದ್ನ ವ್ಯಾಪಾರಿಗಳಾದ ಅಬ್ದುಲ್ ರಜಾಕ್, ಅಕ್ಬರ್ ಪಾಷಾ, ನಾಸೀರ್ ಅಹಮದ್ ವಿರುದ್ಧ ಪೆರೇಸಂದ್ರ ಠಾಣೆಯಲ್ಲಿ ದೂರು ನೀಡಲಾಗಿತ್ತು. </p><p><strong>ಆಡಿಯೊದಲ್ಲಿ ಏನಿದೆ:</strong> ಪಿಎಸ್ಐ ಜಗದೀಶ್ ರೆಡ್ಡಿ ಅವರಿಗೆ ಕರೆ ಮಾಡಿರುವ ಸಚಿವರು, ‘ನಮಸ್ತೆ ಬ್ರದರ್. ಹೈದರಾಬಾದ್ನ ನಮ್ಮ ಸಂಬಂಧಿ ಅಕ್ಬರ್ ಪಾಷಾ ಯಾರಿಗೊ ಹಣ ಕೊಡಬೇಕಿತ್ತಂತೆ. ಅವರನ್ನು ಕರೆದುಕೊಂಡು ಬಂದಿದ್ದೀರಂತೆ. ಸ್ವಲ್ಪ ಸಹಾಯ ಮಾಡಿ ಬ್ರದರ್’ ಎಂದು ಕೇಳಿದ್ದಾರೆ. </p><p>ಆಗ ಪಿಎಸ್ಐ ಜಗದೀಶ್ ರೆಡ್ಡಿ, ‘ಸೆಟ್ಲು ಮಾಡಿಕೊಳ್ಳಿ ಎಂದು ಹೇಳಿದ್ದೇವೆ. ನಮ್ಮ ಮುಂದೆ ಕುಳಿತು ಮಾತನಾಡಿದ್ದರೆ ಕ್ಲಿಯರ್ ಮಾಡುತ್ತಿದ್ದೆ. ಸೆಟ್ಲು ಮಾಡಿಕೊಂಡರೆ ‘ಬಿ’ ರಿಪೋರ್ಟ್ ಹಾಕುತ್ತೇವೆ ಎಂದಿದ್ದೆವು. ಅವರಿಗೂ ಇವರಿಗೂ ಈಗೊ ಸಮಸ್ಯೆ’ ಎಂದಿದ್ದಾರೆ.</p>.ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ: ಜಮೀರ್ ವಿಚಾರಣೆ ನಡೆಸಿದ ಲೋಕಾಯುಕ್ತ.<p>ಆಗ ಸಚಿವರು, ಈಗೊಂದು ಅವಕಾಶಕೊಡಿ ಎಂದು ಕೋರಿದ್ದಾರೆ.</p><p><strong>‘ಎಕ್ಸ್’ನಲ್ಲಿ ಜೆಡಿಎಸ್ ಆಕ್ರೋಶ:</strong> ‘ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆಯುವ ಸಚಿವ ಜಮೀರ್ ಅಹಮದ್ ನಿಮಗೆ ನಾಚಿಕೆಯಾಗಬೇಕು !</p><p>ರಾಜ್ಯದ ರೈತರಿಗೆ ವಂಚಿಸಿರುವ ನಿಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಶಿಫಾರಸ್ಸು ಮಾಡಿರುವುದು ಅಕ್ಷಮ್ಯ.</p><p>ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ, ರಾಜ್ಯದ ರೈತರಿಗೆ ಮೋಸ ಮಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ ?</p><p>ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವುದನ್ನು ಬಿಟ್ಟು ಪೊಲೀಸ್ ಇಲಾಖೆ ಸೆಟಲ್ಮೆಂಟ್ ಕೇಂದ್ರಗಳಾಗಿವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ ಎಂದು ಜೆಡಿಎಸ್ ‘ಎಕ್ಸ್’ನಲ್ಲಿ ಸಚಿವರ ನಡೆಯನ್ನು ಟೀಕಿಸಿದೆ.</p> .ಸಚಿವ ಜಮೀರ್ ವಿರುದ್ಧದ ಪ್ರಕರಣ: ಲೋಕಾಯುಕ್ತ ಪೊಲೀಸರಿಗೆ ದಾಖಲೆ ನೀಡಿದ KGF ಬಾಬು.<p>ಇತ್ತೀಚೆಗೆ ಪಿಎಸ್ಐ ಜಗದೀಶ್ ರೆಡ್ಡಿ ಅವರು ಪೆರೇಸಂದ್ರದಿಂದ ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>