ನಾರಾಯಣಸ್ವಾಮಿ ಕೆಲಸ ಮುಗಿಸಿ ರಾತ್ರಿ 9 ಸುಮಾರಿನಲ್ಲಿ ಪೆರೇಸಂದ್ರ ಕ್ರಾಸ್ಗೆ ಬಂದಿದ್ದಾರೆ. ಅವರ ಪುತ್ರ ಶರತ್, ನಾರಾಯಣಸ್ವಾಮಿ ಅವರನ್ನು ಕರೆ ತರಲು ಹೋಗಿದ್ದಾರೆ. ಈ ವೇಳೆ ನಾಲ್ಕು ಮಂದಿ ಅಪರಿಚಿತರು ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿ ನಾರಾಯಣಸ್ವಾಮಿ ಅವರ ಪತ್ನಿ ಮತ್ತು ಸೊಸೆ ಇದ್ದರು. ನಗದು ಮತ್ತು ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ.