<p><strong>ಚಿಕ್ಕಬಳ್ಳಾಪುರ:</strong> ‘ಪುಸ್ತಕ, ಓದಿನಿಂದ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಅವುಗಳು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತ. ಉತ್ತಮ ಜೀವನ ಸಾಗಿಸಲು ಬೇಕಾಗಿರುವುದು ಪ್ರೇರಣೆ ಅಂಶಗಳು ಮಾತ್ರ’ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಂರೆಡ್ಡಿ ತಿಳಿಸಿದರು.</p>.<p>ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಶನಿವಾರ ಆಯೋಜಿಸಿದ ‘ಕೃಷ್ಣ ಜನ್ಮಾಷ್ಟಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶಾಲೆಯಲ್ಲಿ ಕಲಿಸುವ ಪಾಠದಿಂದಲೇ ಮಕ್ಕಳ ಭವಿಷ್ಯ ಅರ್ಥಪೂರ್ಣವಾಗದು. ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುವಂತಹ ಚಟುವಟಿಕೆಗಳನ್ನು ಶಾಲೆಗಳಲ್ಲಿ ರೂಪಿಸಬೇಕು. ಜತೆಗೆ ಪೋಷಕರು ತಮ್ಮ ಮಗುವಿನ ಭಾವನೆ ಅರಿತು ಅವರ ಆಸೆಗಳನ್ನು ಈಡೇರಿಸಲು ಸಹಕರಿಸಬೇಕು’ ಎಂದು ಹೇಳಿದರು.</p>.<p>‘ಮಕ್ಕಳಿಗೆ ಸಂಭ್ರಮ, ಸಡಗರಗಳಿಂತಲೂ ಕಹಿ ನೆನಪುಗಳೇ ಅತಿಯಾಗಿ ಜ್ಞಾಪಕವಿರುತ್ತವೆ. ಆದ್ದರಿಂದ ಪೋಷಕರು ಮಕ್ಕಳ ಮನ ಮುದಗೊಳಿಸುವ ಹಬ್ಬಗಳು ಯಾವಾಗ ಬರುತ್ತವೆ ಎಂದು ಎದುರು ನೋಡುತ್ತಿರಬೇಕು. ತಮ್ಮ ಮಗುವನ್ನು ಈ ಹಬ್ಬದಲ್ಲಿ ಕೃಷ್ಣನ ಬಗೆ ಬಗೆಯ ವೇಷಭೂಷಣಗಳಿಂದ ಅಲಂಕರಿಸಿ, ಅವರ ತುಂಟಾಟ ಕಂಡು ಸಂಭ್ರಮಿಸಬೇಕು. ಮಕ್ಕಳಿಗೆ ಆತ್ಮಸ್ಥೆರ್ಯ, ಪ್ರೇರಣೆ ತುಂಬುವ ಹಬ್ಬಗಳ ಆಚರಣೆಗೆ ಪೋಷಕರು ಒತ್ತು ನೀಡಬೇಕು’ ಎಂದು ತಿಳಿಸಿದರು.</p>.<p>ಬಿಜಿಎಸ್ ಆಂಗ್ಲ ಶಾಲೆ ಪ್ರಾಂಶುಪಾಲ ಮೋಹನ್ ಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಧುಸೂಧನ್, ಹಾಸ್ಟೆಲ್ ವಾರ್ಡನ್ ರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ‘ಪುಸ್ತಕ, ಓದಿನಿಂದ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಅವುಗಳು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತ. ಉತ್ತಮ ಜೀವನ ಸಾಗಿಸಲು ಬೇಕಾಗಿರುವುದು ಪ್ರೇರಣೆ ಅಂಶಗಳು ಮಾತ್ರ’ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಂರೆಡ್ಡಿ ತಿಳಿಸಿದರು.</p>.<p>ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಶನಿವಾರ ಆಯೋಜಿಸಿದ ‘ಕೃಷ್ಣ ಜನ್ಮಾಷ್ಟಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶಾಲೆಯಲ್ಲಿ ಕಲಿಸುವ ಪಾಠದಿಂದಲೇ ಮಕ್ಕಳ ಭವಿಷ್ಯ ಅರ್ಥಪೂರ್ಣವಾಗದು. ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುವಂತಹ ಚಟುವಟಿಕೆಗಳನ್ನು ಶಾಲೆಗಳಲ್ಲಿ ರೂಪಿಸಬೇಕು. ಜತೆಗೆ ಪೋಷಕರು ತಮ್ಮ ಮಗುವಿನ ಭಾವನೆ ಅರಿತು ಅವರ ಆಸೆಗಳನ್ನು ಈಡೇರಿಸಲು ಸಹಕರಿಸಬೇಕು’ ಎಂದು ಹೇಳಿದರು.</p>.<p>‘ಮಕ್ಕಳಿಗೆ ಸಂಭ್ರಮ, ಸಡಗರಗಳಿಂತಲೂ ಕಹಿ ನೆನಪುಗಳೇ ಅತಿಯಾಗಿ ಜ್ಞಾಪಕವಿರುತ್ತವೆ. ಆದ್ದರಿಂದ ಪೋಷಕರು ಮಕ್ಕಳ ಮನ ಮುದಗೊಳಿಸುವ ಹಬ್ಬಗಳು ಯಾವಾಗ ಬರುತ್ತವೆ ಎಂದು ಎದುರು ನೋಡುತ್ತಿರಬೇಕು. ತಮ್ಮ ಮಗುವನ್ನು ಈ ಹಬ್ಬದಲ್ಲಿ ಕೃಷ್ಣನ ಬಗೆ ಬಗೆಯ ವೇಷಭೂಷಣಗಳಿಂದ ಅಲಂಕರಿಸಿ, ಅವರ ತುಂಟಾಟ ಕಂಡು ಸಂಭ್ರಮಿಸಬೇಕು. ಮಕ್ಕಳಿಗೆ ಆತ್ಮಸ್ಥೆರ್ಯ, ಪ್ರೇರಣೆ ತುಂಬುವ ಹಬ್ಬಗಳ ಆಚರಣೆಗೆ ಪೋಷಕರು ಒತ್ತು ನೀಡಬೇಕು’ ಎಂದು ತಿಳಿಸಿದರು.</p>.<p>ಬಿಜಿಎಸ್ ಆಂಗ್ಲ ಶಾಲೆ ಪ್ರಾಂಶುಪಾಲ ಮೋಹನ್ ಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಧುಸೂಧನ್, ಹಾಸ್ಟೆಲ್ ವಾರ್ಡನ್ ರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>