‘ಮಕ್ಕಳಿಗೆ ಸಂಭ್ರಮ, ಸಡಗರಗಳಿಂತಲೂ ಕಹಿ ನೆನಪುಗಳೇ ಅತಿಯಾಗಿ ಜ್ಞಾಪಕವಿರುತ್ತವೆ. ಆದ್ದರಿಂದ ಪೋಷಕರು ಮಕ್ಕಳ ಮನ ಮುದಗೊಳಿಸುವ ಹಬ್ಬಗಳು ಯಾವಾಗ ಬರುತ್ತವೆ ಎಂದು ಎದುರು ನೋಡುತ್ತಿರಬೇಕು. ತಮ್ಮ ಮಗುವನ್ನು ಈ ಹಬ್ಬದಲ್ಲಿ ಕೃಷ್ಣನ ಬಗೆ ಬಗೆಯ ವೇಷಭೂಷಣಗಳಿಂದ ಅಲಂಕರಿಸಿ, ಅವರ ತುಂಟಾಟ ಕಂಡು ಸಂಭ್ರಮಿಸಬೇಕು. ಮಕ್ಕಳಿಗೆ ಆತ್ಮಸ್ಥೆರ್ಯ, ಪ್ರೇರಣೆ ತುಂಬುವ ಹಬ್ಬಗಳ ಆಚರಣೆಗೆ ಪೋಷಕರು ಒತ್ತು ನೀಡಬೇಕು’ ಎಂದು ತಿಳಿಸಿದರು.