<p><strong>ಚಿಕ್ಕಬಳ್ಳಾಪುರ</strong>: ನಂದಿಬೆಟ್ಟ ಪ್ರವಾಸಿಗರು, ಚಾರಣಪ್ರಿಯರು ಹಾಗೂ ಯುವ ಪ್ರೇಮಿಗಳಿಗೆ ಮಾತ್ರ ಅಚ್ಚುಮೆಚ್ಚಿನ ತಾಣವಲ್ಲ. ಫೋಟೊಶೂಟ್ ಪ್ರಿಯರಿಗೂ ಅತ್ಯಂತ ಮೆಚ್ಚಿನ ಗಿರಿಧಾಮ. ರಾಜ್ಯದಲ್ಲಿಯೇ ಅತಿ ಹೆಚ್ಚು ಫೋಟೊಶೂಟ್ಗಳು ನಡೆಯುವ ತಾಣಗಳಲ್ಲಿ ನಂದಿಬೆಟ್ಟವೂ ಪ್ರಮುಖವಾಗಿದೆ.</p>.<p>ಇಂತಿಪ್ಪ ನಂದಿಬೆಟ್ಟದಲ್ಲಿ ಲಾಕ್ಡೌನ್ ಮತ್ತು ಕೊರೊನಾ ಕಾರಣದಿಂದ ಫೋಟೊಶೂಟ್ ಆದಾಯ ಗಣನೀಯವಾಗಿ ಕುಸಿದಿದೆ. ಕ್ಯಾಮೆರಾ ಹಿಡಿದು ಬೆಟ್ಟದ ಬುಡದಲ್ಲೊ ತುದಿಯಲ್ಲೊ ಕಾಣುತ್ತಿದ್ದವರು ಗೌಣವಾಗಿದ್ದಾರೆ. ಸಾಮಾನ್ಯವಾಗಿ ನಿತ್ಯ ಫೋಟೊಶೂಟ್ಗೆ ಮೂರರಿಂದ ನಾಲ್ಕು ಮಂದಿಯಾದರೂ ಬರುತ್ತಿದ್ದರು. ಆದರೆ ಈಗ ಅಪರೂಪವಾಗಿದ್ದಾರೆ.</p>.<p>ಫೋಟೊಶೂಟ್ಗೆ ನಂದಿಬೆಟ್ಟದಲ್ಲಿರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಇಲ್ಲಿಯೇ ಹಣವನ್ನು ಪಾವತಿಸಬೇಕು. ವಿವಾಹಕ್ಕೆ ಪೂರ್ವ ನವಜೋಡಿ, ಪ್ರೆಗ್ನೆನ್ಸಿ, ನಾಮಕರಣ ಹೀಗೆ ವಿವಿಧ ಜನರು ಫೋಟೊಶೂಟ್ ಮಾಡಿಕೊಳ್ಳುವರು. ಧಾರಾವಾಹಿ, ಜಾಹೀರಾತು, ಸಿನಿಮಾ ಚಿತ್ರೀಕರಣವೂ ನಂದಿಬೆಟ್ಟದಲ್ಲಿ ನಡೆಯುತ್ತದೆ. ಹೀಗೆ ಚಿತ್ರೀಕರಣಗಳಿಂದ ವಾರ್ಷಿಕ ಸರಾಸರಿ ₹ 2 ಲಕ್ಷ ಆದಾಯ ಸಂಗ್ರಹವಾಗುತ್ತದೆ. ಆದರೆ ಲಾಕ್ಡೌನ್ ಮತ್ತು ಕೊರೊನಾ ಪರಿಣಾಮ 2019–20ನೇ ಸಾಲಿನಲ್ಲಿ ಕೇವಲ ₹ 65,940 ಆದಾಯ ಮಾತ್ರ ಸಂಗ್ರಹವಾಗಿದೆ.</p>.<p>ಕೋವಿಡ್ ಮೊದಲ ಅಲೆಯ ನಂತರ ‘ಪುಟ್ಟಗೌರಿ ಮದುವೆ’, ‘ಶಾಂತಂ ಪಾಪಂ’ ಸೇರಿದಂತೆ ನಾಲ್ಕು ಧಾರಾವಾಹಿಗಳ ಚಿತ್ರೀಕರಣವಾಗಿವೆ. ಎರಡು ಚಲನಚಿತ್ರಗಳ ಶೂಟಿಂಗ್ ಸಹ ಬೆಟ್ಟದಲ್ಲಿ ನಡೆದಿದೆ.</p>.<p>ಚಿತ್ರೀಕರಣಕ್ಕೆ ಹೊರ ರಾಜ್ಯದವರು: ಬೆಂಗಳೂರಿಗೆ ನಂದಿಬೆಟ್ಟ ಹತ್ತಿರವಿದೆ. ಈ ಕಾರಣದಿಂದ ಬೆಂಗಳೂರಿನವರೂ ಇಲ್ಲಿ ಹೆಚ್ಚು ಫೋಟೊಶೂಟ್ಗೆ ಬರುತ್ತಾರೆ. ಅಂದಮಾತ್ರಕ್ಕೆ ಬೇರೆ ಭಾಗಗಳ ಜನರು ಕಡಿಮೆ ಎಂದೇನಿಲ್ಲ. ರಾಜ್ಯದ ವಿವಿಧ ಭಾಗಗಳ ಜನರೂ ನಂದಿಬೆಟ್ಟವನ್ನು ಹುಡುಕಿ ಬರುವರು. ಅಷ್ಟೇಕೆ ನೆರೆಯ ಆಂಧ್ರಪ್ರದೇಶದ ನವಜೋಡಿಗಳು ಇಲ್ಲಿಗೆ ಬಂದು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.</p>.<p>ಬೆಟ್ಟದಲ್ಲಿಯೇ ಇರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಫೋಟೊಶೂಟ್ಗೆ ಅನುಮತಿ ಪಡೆಯಬೇಕು. ಸಿನಿಮಾ ಚಿತ್ರೀಕರಣಗಳಿಗೆ ಪೊಲೀಸ್ ಭದ್ರತೆ ಪಡೆಯಬೇಕು. ವಾರ್ತಾ ಇಲಾಖೆಯಿಂದ<br />ಅನುಮತಿ ಪತ್ರ ಸಹ ತರಬೇಕು. ಡ್ರೋನ್ನಲ್ಲಿ ಚಿತ್ರಗಳನ್ನು ಸೆರೆಹಿಡಿಯುವಂತಿಲ್ಲ. ಗಿರಿಧಾಮದ ಮೇಲಿನ ದೇವಸ್ಥಾನದಲ್ಲಿಯೂ ಚಿತ್ರೀಕರಣಕ್ಕೆ ಅವಕಾಶವಿಲ್ಲ.</p>.<p>ಕಲ್ಯಾಣಿಯಲ್ಲಿ ನೀರು ಇರುವ ಕಾರಣ ಜನರ ಪ್ರವೇಶ ಅಲ್ಲಿಗೆ ನಿಷೇಧವಿದೆ. ಆದರೆ ಫೋಟೊಶೂಟ್ಗೆ ಬರುವವರಿಗೆ ಎಚ್ಚರಿಕೆಯ ನಡುವೆ ಕಲ್ಯಾಣಿ ಬಳಿಗೆ ಬಿಡಲಾಗುತ್ತದೆ. ಅಲ್ಲಿಯೂ ಉತ್ತಮ ಚಿತ್ರಗಳು ಸೆರೆಯಾಗುತ್ತವೆ ಎನ್ನುವ ಕಾರಣಕ್ಕೆ ಈ ಅವಕಾಶವನ್ನು ಅಧಿಕಾರಿಗಳು ನೀಡಿದ್ದಾರೆ.</p>.<p>ಚಿತ್ರೀಕರಣಕ್ಕೆ ಎಷ್ಟು ಶುಲ್ಕ: ನಂದಿಬೆಟ್ಟದಲ್ಲಿ ನಡೆಯುವ ಚಿತ್ರೀಕರಣಗಳಿಗೂ ಜಿಎಸ್ಟಿ ಅನ್ವಯವಾಗುತ್ತದೆ. ಒಂದು ದಿನದ ಫೋಟೊಶೂಟ್ಗೆ ಒಂದು ಜೋಡಿಗೆ ₹ 3,540, ಧಾರಾವಾಹಿ, ಜಾಹೀರಾತು ಚಿತ್ರೀಕರಣಕ್ಕೆ ಒಂದು ದಿನಕ್ಕೆ ₹ 11,800, ಕನ್ನಡ ಸಿನಿಮಾಗಳಿಗೆ ₹ 23,600, ಕನ್ನಡೇತರ ಸಿನಿಮಾಗಳ ಚಿತ್ರೀಕರಣಕ್ಕೆ 29,500 ಶುಲ್ಕ ಪಾವತಿಸಬೇಕಾಗುತ್ತದೆ. ಜಿಎಸ್ಟಿ ಜಾರಿಗೂ ಮುನ್ನ ಈ ಹಣದಲ್ಲಿ ಶೇ 18ರಷ್ಟು ಹಣ ಕಡಿಮೆ ಇರುತ್ತಿತ್ತು.</p>.<p>ಚಿತ್ರೀಕರಣಕ್ಕಾಗಿ ಉದ್ಯಾನ ಮತ್ತಷ್ಟು ಅಂದ: ಲಾಕ್ಡೌನ್ ಮತ್ತು ಕೊರೊನಾ ಕಾರಣದಿಂದ ಸಿನಿಮಾಗಳು, ಧಾರಾವಾಹಿಗಳ ಚಿತ್ರೀಕರಣವೂ ಸ್ಥಗಿತವಾಗಿತ್ತು. ಈ ಕಾರಣದಿಂದ ಆದಾಯ ಕಡಿಮೆ ಆಗಿದೆ. ಜನಜೀವನ ಸೇರಿದಂತೆ ಎಲ್ಲ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದ ನಂತರ ಮತ್ತೆ ಆದಾಯ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ನಂದಿಬೆಟ್ಟದ ವಿಶೇಷ ಅಧಿಕಾರಿ ಗೋಪಾಲ್ ತಿಳಿಸಿದರು.</p>.<p>ಫೋಟೊಶೂಟ್ ಅಥವಾ ಚಿತ್ರೀಕರಣಕ್ಕೆ ಬರುವವರ ಜತೆ ನಾವು ಗ್ರಾಹಕ ಸ್ನೇಹಿಯಾಗಿ ಇರುತ್ತೇವೆ. ಫೋಟೊಶೂಟ್ಗೆ ಬರುವವರು ಆ ಚಿತ್ರಗಳು ನೆನಪಿನಲ್ಲಿ ಉಳಿಯಲಿ ಎಂದೇ ಬರುವರು. ಹಲವು ವರ್ಷಗಳು ಕಳೆದರೂ ಆ ಚಿತ್ರಗಳು ಅವರಿಗೆ ಖುಷಿಕೊಡುತ್ತವೆ. ಖುಷಿಯಲ್ಲಿ ಬರುವವರ ಜತೆ ನಾವೂ ಸ್ನೇಹದಿಂದ ನಡೆದುಕೊಂಡರೆ ಅವರು ಮತ್ತಷ್ಟು ಸಂತಸಗೊಳ್ಳುವರು ಎಂದು ಹೇಳಿದರು.</p>.<p>ಚಿತ್ರೀಕರಣಕ್ಕೆ ಬರುವವರಿಗೆ ಪ್ಲಾಸ್ಟಿಕ್ ಬಳಸಬಾರದು, ಕಸ ಇದ್ದರೆ ಎಲ್ಲೆಂದರಲ್ಲಿ ಎಸೆಯಬಾರದು ಸೇರಿದಂತೆ ಕೆಲವು ಸೂಚನೆಗಳನ್ನು ನೀಡುತ್ತೇವೆ ಅಷ್ಟೇ. ಫೋಟೊಶೂಟ್ ಮತ್ತು ಚಿತ್ರೀಕರಣದ ದೃಷ್ಟಿಯಿಂದಲೇ ನಾವು ತೋಟಗಾರಿಕೆ ಇಲಾಖೆ ನಿರ್ವಹಿಸುವ ಉದ್ಯಾನದಲ್ಲಿ ಬಗೆ ಬಗೆಯ ಹೂಗಳನ್ನು ಬೆಳೆಸಿದ್ದೇವೆ. ಆ ವಾತಾವರಣ ಚಿತ್ರೀಕರಣಕ್ಕೆ ಉತ್ತಮ ಸ್ಥಳ ಎನಿಸಬೇಕು. ಆ ರೀತಿಯಲ್ಲಿ ರೂಪಿಸಿದ್ದೇವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ನಂದಿಬೆಟ್ಟ ಪ್ರವಾಸಿಗರು, ಚಾರಣಪ್ರಿಯರು ಹಾಗೂ ಯುವ ಪ್ರೇಮಿಗಳಿಗೆ ಮಾತ್ರ ಅಚ್ಚುಮೆಚ್ಚಿನ ತಾಣವಲ್ಲ. ಫೋಟೊಶೂಟ್ ಪ್ರಿಯರಿಗೂ ಅತ್ಯಂತ ಮೆಚ್ಚಿನ ಗಿರಿಧಾಮ. ರಾಜ್ಯದಲ್ಲಿಯೇ ಅತಿ ಹೆಚ್ಚು ಫೋಟೊಶೂಟ್ಗಳು ನಡೆಯುವ ತಾಣಗಳಲ್ಲಿ ನಂದಿಬೆಟ್ಟವೂ ಪ್ರಮುಖವಾಗಿದೆ.</p>.<p>ಇಂತಿಪ್ಪ ನಂದಿಬೆಟ್ಟದಲ್ಲಿ ಲಾಕ್ಡೌನ್ ಮತ್ತು ಕೊರೊನಾ ಕಾರಣದಿಂದ ಫೋಟೊಶೂಟ್ ಆದಾಯ ಗಣನೀಯವಾಗಿ ಕುಸಿದಿದೆ. ಕ್ಯಾಮೆರಾ ಹಿಡಿದು ಬೆಟ್ಟದ ಬುಡದಲ್ಲೊ ತುದಿಯಲ್ಲೊ ಕಾಣುತ್ತಿದ್ದವರು ಗೌಣವಾಗಿದ್ದಾರೆ. ಸಾಮಾನ್ಯವಾಗಿ ನಿತ್ಯ ಫೋಟೊಶೂಟ್ಗೆ ಮೂರರಿಂದ ನಾಲ್ಕು ಮಂದಿಯಾದರೂ ಬರುತ್ತಿದ್ದರು. ಆದರೆ ಈಗ ಅಪರೂಪವಾಗಿದ್ದಾರೆ.</p>.<p>ಫೋಟೊಶೂಟ್ಗೆ ನಂದಿಬೆಟ್ಟದಲ್ಲಿರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಇಲ್ಲಿಯೇ ಹಣವನ್ನು ಪಾವತಿಸಬೇಕು. ವಿವಾಹಕ್ಕೆ ಪೂರ್ವ ನವಜೋಡಿ, ಪ್ರೆಗ್ನೆನ್ಸಿ, ನಾಮಕರಣ ಹೀಗೆ ವಿವಿಧ ಜನರು ಫೋಟೊಶೂಟ್ ಮಾಡಿಕೊಳ್ಳುವರು. ಧಾರಾವಾಹಿ, ಜಾಹೀರಾತು, ಸಿನಿಮಾ ಚಿತ್ರೀಕರಣವೂ ನಂದಿಬೆಟ್ಟದಲ್ಲಿ ನಡೆಯುತ್ತದೆ. ಹೀಗೆ ಚಿತ್ರೀಕರಣಗಳಿಂದ ವಾರ್ಷಿಕ ಸರಾಸರಿ ₹ 2 ಲಕ್ಷ ಆದಾಯ ಸಂಗ್ರಹವಾಗುತ್ತದೆ. ಆದರೆ ಲಾಕ್ಡೌನ್ ಮತ್ತು ಕೊರೊನಾ ಪರಿಣಾಮ 2019–20ನೇ ಸಾಲಿನಲ್ಲಿ ಕೇವಲ ₹ 65,940 ಆದಾಯ ಮಾತ್ರ ಸಂಗ್ರಹವಾಗಿದೆ.</p>.<p>ಕೋವಿಡ್ ಮೊದಲ ಅಲೆಯ ನಂತರ ‘ಪುಟ್ಟಗೌರಿ ಮದುವೆ’, ‘ಶಾಂತಂ ಪಾಪಂ’ ಸೇರಿದಂತೆ ನಾಲ್ಕು ಧಾರಾವಾಹಿಗಳ ಚಿತ್ರೀಕರಣವಾಗಿವೆ. ಎರಡು ಚಲನಚಿತ್ರಗಳ ಶೂಟಿಂಗ್ ಸಹ ಬೆಟ್ಟದಲ್ಲಿ ನಡೆದಿದೆ.</p>.<p>ಚಿತ್ರೀಕರಣಕ್ಕೆ ಹೊರ ರಾಜ್ಯದವರು: ಬೆಂಗಳೂರಿಗೆ ನಂದಿಬೆಟ್ಟ ಹತ್ತಿರವಿದೆ. ಈ ಕಾರಣದಿಂದ ಬೆಂಗಳೂರಿನವರೂ ಇಲ್ಲಿ ಹೆಚ್ಚು ಫೋಟೊಶೂಟ್ಗೆ ಬರುತ್ತಾರೆ. ಅಂದಮಾತ್ರಕ್ಕೆ ಬೇರೆ ಭಾಗಗಳ ಜನರು ಕಡಿಮೆ ಎಂದೇನಿಲ್ಲ. ರಾಜ್ಯದ ವಿವಿಧ ಭಾಗಗಳ ಜನರೂ ನಂದಿಬೆಟ್ಟವನ್ನು ಹುಡುಕಿ ಬರುವರು. ಅಷ್ಟೇಕೆ ನೆರೆಯ ಆಂಧ್ರಪ್ರದೇಶದ ನವಜೋಡಿಗಳು ಇಲ್ಲಿಗೆ ಬಂದು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.</p>.<p>ಬೆಟ್ಟದಲ್ಲಿಯೇ ಇರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಫೋಟೊಶೂಟ್ಗೆ ಅನುಮತಿ ಪಡೆಯಬೇಕು. ಸಿನಿಮಾ ಚಿತ್ರೀಕರಣಗಳಿಗೆ ಪೊಲೀಸ್ ಭದ್ರತೆ ಪಡೆಯಬೇಕು. ವಾರ್ತಾ ಇಲಾಖೆಯಿಂದ<br />ಅನುಮತಿ ಪತ್ರ ಸಹ ತರಬೇಕು. ಡ್ರೋನ್ನಲ್ಲಿ ಚಿತ್ರಗಳನ್ನು ಸೆರೆಹಿಡಿಯುವಂತಿಲ್ಲ. ಗಿರಿಧಾಮದ ಮೇಲಿನ ದೇವಸ್ಥಾನದಲ್ಲಿಯೂ ಚಿತ್ರೀಕರಣಕ್ಕೆ ಅವಕಾಶವಿಲ್ಲ.</p>.<p>ಕಲ್ಯಾಣಿಯಲ್ಲಿ ನೀರು ಇರುವ ಕಾರಣ ಜನರ ಪ್ರವೇಶ ಅಲ್ಲಿಗೆ ನಿಷೇಧವಿದೆ. ಆದರೆ ಫೋಟೊಶೂಟ್ಗೆ ಬರುವವರಿಗೆ ಎಚ್ಚರಿಕೆಯ ನಡುವೆ ಕಲ್ಯಾಣಿ ಬಳಿಗೆ ಬಿಡಲಾಗುತ್ತದೆ. ಅಲ್ಲಿಯೂ ಉತ್ತಮ ಚಿತ್ರಗಳು ಸೆರೆಯಾಗುತ್ತವೆ ಎನ್ನುವ ಕಾರಣಕ್ಕೆ ಈ ಅವಕಾಶವನ್ನು ಅಧಿಕಾರಿಗಳು ನೀಡಿದ್ದಾರೆ.</p>.<p>ಚಿತ್ರೀಕರಣಕ್ಕೆ ಎಷ್ಟು ಶುಲ್ಕ: ನಂದಿಬೆಟ್ಟದಲ್ಲಿ ನಡೆಯುವ ಚಿತ್ರೀಕರಣಗಳಿಗೂ ಜಿಎಸ್ಟಿ ಅನ್ವಯವಾಗುತ್ತದೆ. ಒಂದು ದಿನದ ಫೋಟೊಶೂಟ್ಗೆ ಒಂದು ಜೋಡಿಗೆ ₹ 3,540, ಧಾರಾವಾಹಿ, ಜಾಹೀರಾತು ಚಿತ್ರೀಕರಣಕ್ಕೆ ಒಂದು ದಿನಕ್ಕೆ ₹ 11,800, ಕನ್ನಡ ಸಿನಿಮಾಗಳಿಗೆ ₹ 23,600, ಕನ್ನಡೇತರ ಸಿನಿಮಾಗಳ ಚಿತ್ರೀಕರಣಕ್ಕೆ 29,500 ಶುಲ್ಕ ಪಾವತಿಸಬೇಕಾಗುತ್ತದೆ. ಜಿಎಸ್ಟಿ ಜಾರಿಗೂ ಮುನ್ನ ಈ ಹಣದಲ್ಲಿ ಶೇ 18ರಷ್ಟು ಹಣ ಕಡಿಮೆ ಇರುತ್ತಿತ್ತು.</p>.<p>ಚಿತ್ರೀಕರಣಕ್ಕಾಗಿ ಉದ್ಯಾನ ಮತ್ತಷ್ಟು ಅಂದ: ಲಾಕ್ಡೌನ್ ಮತ್ತು ಕೊರೊನಾ ಕಾರಣದಿಂದ ಸಿನಿಮಾಗಳು, ಧಾರಾವಾಹಿಗಳ ಚಿತ್ರೀಕರಣವೂ ಸ್ಥಗಿತವಾಗಿತ್ತು. ಈ ಕಾರಣದಿಂದ ಆದಾಯ ಕಡಿಮೆ ಆಗಿದೆ. ಜನಜೀವನ ಸೇರಿದಂತೆ ಎಲ್ಲ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದ ನಂತರ ಮತ್ತೆ ಆದಾಯ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ನಂದಿಬೆಟ್ಟದ ವಿಶೇಷ ಅಧಿಕಾರಿ ಗೋಪಾಲ್ ತಿಳಿಸಿದರು.</p>.<p>ಫೋಟೊಶೂಟ್ ಅಥವಾ ಚಿತ್ರೀಕರಣಕ್ಕೆ ಬರುವವರ ಜತೆ ನಾವು ಗ್ರಾಹಕ ಸ್ನೇಹಿಯಾಗಿ ಇರುತ್ತೇವೆ. ಫೋಟೊಶೂಟ್ಗೆ ಬರುವವರು ಆ ಚಿತ್ರಗಳು ನೆನಪಿನಲ್ಲಿ ಉಳಿಯಲಿ ಎಂದೇ ಬರುವರು. ಹಲವು ವರ್ಷಗಳು ಕಳೆದರೂ ಆ ಚಿತ್ರಗಳು ಅವರಿಗೆ ಖುಷಿಕೊಡುತ್ತವೆ. ಖುಷಿಯಲ್ಲಿ ಬರುವವರ ಜತೆ ನಾವೂ ಸ್ನೇಹದಿಂದ ನಡೆದುಕೊಂಡರೆ ಅವರು ಮತ್ತಷ್ಟು ಸಂತಸಗೊಳ್ಳುವರು ಎಂದು ಹೇಳಿದರು.</p>.<p>ಚಿತ್ರೀಕರಣಕ್ಕೆ ಬರುವವರಿಗೆ ಪ್ಲಾಸ್ಟಿಕ್ ಬಳಸಬಾರದು, ಕಸ ಇದ್ದರೆ ಎಲ್ಲೆಂದರಲ್ಲಿ ಎಸೆಯಬಾರದು ಸೇರಿದಂತೆ ಕೆಲವು ಸೂಚನೆಗಳನ್ನು ನೀಡುತ್ತೇವೆ ಅಷ್ಟೇ. ಫೋಟೊಶೂಟ್ ಮತ್ತು ಚಿತ್ರೀಕರಣದ ದೃಷ್ಟಿಯಿಂದಲೇ ನಾವು ತೋಟಗಾರಿಕೆ ಇಲಾಖೆ ನಿರ್ವಹಿಸುವ ಉದ್ಯಾನದಲ್ಲಿ ಬಗೆ ಬಗೆಯ ಹೂಗಳನ್ನು ಬೆಳೆಸಿದ್ದೇವೆ. ಆ ವಾತಾವರಣ ಚಿತ್ರೀಕರಣಕ್ಕೆ ಉತ್ತಮ ಸ್ಥಳ ಎನಿಸಬೇಕು. ಆ ರೀತಿಯಲ್ಲಿ ರೂಪಿಸಿದ್ದೇವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>