ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪೋಷಕರು ಖಾಸಗಿ ಪ್ರಿ ನರ್ಸರಿಗೆ ಆಕರ್ಷಣೆ ಒಳಗಾಗಿ ಹೆಚ್ಚಿನ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಕೂಸಿನ ಮನೆಗೆ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಐಇಸಿ ಚಟುವಟಿಕೆಗಳನ್ನು ಹೆಚ್ಚು ಮಾಡಿ ಕೂಸಿನ ಮನೆಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದು. ಜಿ.ಕೆ ಹೊನ್ನಯ್ಯ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಗೌರಿಬಿದನೂರು ಆಸಕ್ತಿ ತೋರದ ಪಿಡಿಒಗಳು ಸರ್ಕಾರ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಕೂಸಿನ ಮನೆಗಳನ್ನು ಆರಂಭಿಸಿದೆ. ಆದರೆ ಪಿಡಿಒಗಳು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಅಪರೂಪಕ್ಕೆ ಒಮ್ಮೆ ಬಾಗಿಲು ತೆರೆಯುತ್ತಾರೆ. ಇದರಿಂದ ಕಾರ್ಮಿಕರಿಗೆ ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ತಿಮ್ಮಯ್ಯ ಮುದುಗೆರೆ ಗ್ರಾಮಸ್ಥ ಖಾಸಗಿ ಶಿಶು ವಿಹಾರದ ಸ್ಪರ್ಧೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿಗಳು ಕೆಲಸ ನಿರ್ವಹಿಸುತ್ತಿವೆ. ಜೊತೆಯಲ್ಲಿ ಕೂಸಿನ ಮನೆಗಳನ್ನು ಸಹ ಆರಂಭಿಸಿದ್ದಾರೆ. ಖಾಸಗಿ ಶಿಶು ವಿಹಾರಗಳ ಸ್ಪರ್ಧೆ ನಡುವೆ ಕೂಸಿನ ಮನೆಗಳಿಗೆ ಮಕ್ಕಳು ಬರುವುದೇ ಕಷ್ಟವಾಗಿದೆ. ಹನುಮಂತರಾಯಪ್ಪ ಹೊಸೂರು ನಿವಾಸಿ