<p><strong>ಶಿಡ್ಲಘಟ್ಟ:</strong> ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಅಬ್ಲೂಡು ವೃತ್ತದಲ್ಲಿನ ಬೃಹತ್ ಆಲದ ಮರ ಉರುಳಿ ಬಿದ್ದಿದೆ. ಮುಂಜಾನೆ ಮರ ಉರುಳಿ ಬಿದ್ದಿದ್ದರಿಂದ ಆಗಬಹುದಿದ್ದ ಭಾರೀ ದುರಂತ ತಪ್ಪಿದೆ.</p>.<p>ತಾಲ್ಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನ ರಾತ್ರಿಯೂ ಸುರಿದ ಭಾರೀ ಮಳೆಗೆ ಅಬ್ಲೂಡು ಗ್ರಾಮದ ಜನನಿಬಿಡ ವೃತ್ತದಲ್ಲಿ ನೂರು ವರ್ಷಗಳಿಗೂ ಅಧಿಕ ಹಿರಿದಾದ ಆಲದ ಮರ ನೆಲಕ್ಕುರುಳಿದೆ. ರಾತ್ರಿ ಅಲ್ಲಿ ಯಾರೂ ಇರಲಿಲ್ಲವಾದ್ದರಿಂದ ಅನಾಹುತ ನಡೆದಿಲ್ಲ.</p>.<p>ಮರ ಉರುಳಿ ಬಿದ್ದಾಗ ಭಾರಿ ಸದ್ದು ಕೇಳಿಸಿದ್ದು ಗ್ರಾಮಸ್ಥರು ಬಂದು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಕು ಹರಿಯುತ್ತಿದ್ದಂತೆ ಮರವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದು ಮಧ್ಯಾಹ್ನದವರೆಗೂ ತೆರವುಗೊಳಿಸುವ ಕಾರ್ಯ ನಡೆದಿದ್ದು ಸಂಜೆ ನಂತರ ಸಂಚಾರಕ್ಕೆ ಅನುಕೂಲವಾಯಿತು. ಅದುವರೆಗೂ ಪರ್ಯಾಯ ಮಾರ್ಗದಲ್ಲಿ ಸಂಚರಿಸಿದರು.</p>.<p>ಅಬ್ಲೂಡು ವೃತ್ತವು ಸುತ್ತಮುತ್ತಲ ಏಳೆಂಟು ಊರುಗಳಿಗೆ ವ್ಯಾಪಾರ ಕೇಂದ್ರ. ವ್ಯವಹಾರ ಕೇಂದ್ರವೂ ಆಗಿದ್ದು ತಳ್ಳು ಗಾಡಿಗಳಲ್ಲಿ ಹಣ್ಣು ಹಂಪಲು ತರಕಾರಿಗಳನ್ನು ಮಾರುತ್ತಾರೆ. ಆಟೊಗಳನ್ನು ನಿಲ್ಲಿಸುತ್ತಾರೆ. ಪೂಜಾ ಸಾಮಗ್ರಿಗಳನ್ನು ಮಾರುವವರಿಗೂ ಈ ಬೃಹತ್ ಆಲದ ಮರ ನೆರಳು ನೀಡುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಅಬ್ಲೂಡು ವೃತ್ತದಲ್ಲಿನ ಬೃಹತ್ ಆಲದ ಮರ ಉರುಳಿ ಬಿದ್ದಿದೆ. ಮುಂಜಾನೆ ಮರ ಉರುಳಿ ಬಿದ್ದಿದ್ದರಿಂದ ಆಗಬಹುದಿದ್ದ ಭಾರೀ ದುರಂತ ತಪ್ಪಿದೆ.</p>.<p>ತಾಲ್ಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನ ರಾತ್ರಿಯೂ ಸುರಿದ ಭಾರೀ ಮಳೆಗೆ ಅಬ್ಲೂಡು ಗ್ರಾಮದ ಜನನಿಬಿಡ ವೃತ್ತದಲ್ಲಿ ನೂರು ವರ್ಷಗಳಿಗೂ ಅಧಿಕ ಹಿರಿದಾದ ಆಲದ ಮರ ನೆಲಕ್ಕುರುಳಿದೆ. ರಾತ್ರಿ ಅಲ್ಲಿ ಯಾರೂ ಇರಲಿಲ್ಲವಾದ್ದರಿಂದ ಅನಾಹುತ ನಡೆದಿಲ್ಲ.</p>.<p>ಮರ ಉರುಳಿ ಬಿದ್ದಾಗ ಭಾರಿ ಸದ್ದು ಕೇಳಿಸಿದ್ದು ಗ್ರಾಮಸ್ಥರು ಬಂದು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಕು ಹರಿಯುತ್ತಿದ್ದಂತೆ ಮರವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದು ಮಧ್ಯಾಹ್ನದವರೆಗೂ ತೆರವುಗೊಳಿಸುವ ಕಾರ್ಯ ನಡೆದಿದ್ದು ಸಂಜೆ ನಂತರ ಸಂಚಾರಕ್ಕೆ ಅನುಕೂಲವಾಯಿತು. ಅದುವರೆಗೂ ಪರ್ಯಾಯ ಮಾರ್ಗದಲ್ಲಿ ಸಂಚರಿಸಿದರು.</p>.<p>ಅಬ್ಲೂಡು ವೃತ್ತವು ಸುತ್ತಮುತ್ತಲ ಏಳೆಂಟು ಊರುಗಳಿಗೆ ವ್ಯಾಪಾರ ಕೇಂದ್ರ. ವ್ಯವಹಾರ ಕೇಂದ್ರವೂ ಆಗಿದ್ದು ತಳ್ಳು ಗಾಡಿಗಳಲ್ಲಿ ಹಣ್ಣು ಹಂಪಲು ತರಕಾರಿಗಳನ್ನು ಮಾರುತ್ತಾರೆ. ಆಟೊಗಳನ್ನು ನಿಲ್ಲಿಸುತ್ತಾರೆ. ಪೂಜಾ ಸಾಮಗ್ರಿಗಳನ್ನು ಮಾರುವವರಿಗೂ ಈ ಬೃಹತ್ ಆಲದ ಮರ ನೆರಳು ನೀಡುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>