<p><strong>ಚಿಕ್ಕಬಳ್ಳಾಪುರ:</strong> ‘ಛೇ...ಹೇಗಿತ್ತು ಈ ಸ್ಥಳ. ಇಲ್ಲಿ ಈಗ ಆಟವಾಡಲು ಸಾಧ್ಯವೇ. ಅಧಿಕಾರಿಗಳಿಗೆ ಜವಾಬ್ದಾರಿ ಬೇಡವೇ. ಈ ಹಿಂದಿನ ವರ್ಷಗಳಲ್ಲಿ ನೀಡಿದಂತೆ ಕ್ರೀಡಾಂಗಣದ ಮುಂಭಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕಾಗಿತ್ತು’–ಹೀಗೆ ಶನಿವಾರ ಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಬಂದಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದರು.</p>.<p>ದೀಪಾವಳಿ ಅಂಗವಾಗಿ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹಬ್ಬ ಮುಗಿದ ನಂತರ ಈ ಪಟಾಕಿ ಅಂಗಡಿಗಳು ಇಲ್ಲಿಂದ ತೆರವುಗೊಂಡವು. </p>.<p>ಆದರೆ ಆ ತೆರವಾದ ಸ್ಥಳದಲ್ಲಿನ ಚಿತ್ರಣ ನಾಗರಿಕರಲ್ಲಿ ಬೇಸರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣದ ಪೆವಿಲಿಯನ್ನ ಪಕ್ಕದಲ್ಲಿರುವ ಜಾಗದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತು. </p>.<p>ಐದಾರು ದಿನ ವ್ಯಾಪಾರ ನಡೆಸಿ ವ್ಯಾಪಾರಿಗಳು ಅಲ್ಲಿಂದ ಕಾಲ್ಕಿತ್ತರು. ಆದರೆ ಈ ಮುಂಚೆ ಇದ್ದ ಸ್ಥಿತಿ ಮತ್ತು ಇಂದಿನ ಸ್ಥಿತಿಯನ್ನು ನೋಡಿದರೆ ‘ಇಲ್ಲಿ ಏಕಾದರೂ ಪಟಾಕಿ ಅಂಗಡಿಗೆ ಅವಕಾಶ ನೀಡಿದರೊ’ ಎನ್ನುವಂತಿತ್ತು.</p>.<p>ಇಡೀ ಆವರಣ ಕೆಸರು ಗದ್ದೆಯಂತೆ ಆಗಿದೆ. ಅಲ್ಲದೆ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದಿವೆ. ಪೇಪರ್, ಕಸರದ ರಾಶಿಯೂ ಹೆಚ್ಚಿದೆ. ಈ ಸ್ಥಳದಲ್ಲಿ ಆಟಗಳಿಗೆ ನೆಟ್ಟಿದ್ದ ಕಂಬಗಳೂ ಡೊಂಕಿವೆ. </p>.<p>ಇಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರು ಫುಟ್ಬಾಲ್ ಆಡುತ್ತಿದ್ದರು. ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಆಟಕ್ಕೆ ಇದು ಪ್ರಶಸ್ತ ಎನ್ನುವಂತಿತ್ತು. ಆದರೆ ಈಗ ಆ ಜಾಗ ಅಧ್ವಾನ ಎನ್ನುವಂತಿದೆ. ವಾಯು ವಿಹಾರಕ್ಕೆ ಬಂದವರು ಇಲ್ಲಿನ ಸ್ಥಿತಿ ನೋಡಿ ಅಸಮಾಧಾನ ಹೊರಹಾಕಿದರು.</p>.<p>ಈ ಹಿಂದಿನ ವರ್ಷ ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿ ಚಿತ್ರಗಳನ್ನು ತೆಗೆದ ನಂತರ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯಿತು. </p>.<p><strong>‘ಕನಿಷ್ಠ ಪ್ರಜ್ಞೆಯೂ ಇಲ್ಲ’</strong> </p><p>ಕ್ರೀಡಾಂಗಣ ಈ ಹಿಂದಿನಿಂದಲೂ ಅಧ್ವಾನ ಎನ್ನುವಂತೆ ಇದೆ. ಅದರ ನಡುವೆಯೂ ಇಲ್ಲಿ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಇಲ್ಲಿ ಪಟಾಕಿ ಅಂಗಡಿಗಳಿಗೆ ಅವಕಾಶ ನೀಡಬಾರದಿತ್ತು’ ಎಂದು ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ಪಟಾಕಿ ಅಂಗಡಿಗಳನ್ನು ಇಟ್ಟ ಸ್ಥಳ ಕೆಸರು ಗದ್ದೆಯಾಗಿದೆ. ಈ ಮುಂಚಿನ ಸ್ಥಿತಿಗೆ ಬರಬೇಕು ಎಂದರೆ ಅಲ್ಲಿನ ಕೆಸರು ಕಸ ಮಣ್ಣನ್ನು ತೆರವುಗೊಳಿಸಬೇಕು. ಇನ್ನಾದರೂ ಅನ್ಯ ಚಟುವಟಿಕೆಗಳಿಗೆ ಇಲ್ಲಿ ಅವಕಾಶ ನೀಡಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ‘ಛೇ...ಹೇಗಿತ್ತು ಈ ಸ್ಥಳ. ಇಲ್ಲಿ ಈಗ ಆಟವಾಡಲು ಸಾಧ್ಯವೇ. ಅಧಿಕಾರಿಗಳಿಗೆ ಜವಾಬ್ದಾರಿ ಬೇಡವೇ. ಈ ಹಿಂದಿನ ವರ್ಷಗಳಲ್ಲಿ ನೀಡಿದಂತೆ ಕ್ರೀಡಾಂಗಣದ ಮುಂಭಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕಾಗಿತ್ತು’–ಹೀಗೆ ಶನಿವಾರ ಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಬಂದಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದರು.</p>.<p>ದೀಪಾವಳಿ ಅಂಗವಾಗಿ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಹಬ್ಬ ಮುಗಿದ ನಂತರ ಈ ಪಟಾಕಿ ಅಂಗಡಿಗಳು ಇಲ್ಲಿಂದ ತೆರವುಗೊಂಡವು. </p>.<p>ಆದರೆ ಆ ತೆರವಾದ ಸ್ಥಳದಲ್ಲಿನ ಚಿತ್ರಣ ನಾಗರಿಕರಲ್ಲಿ ಬೇಸರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣದ ಪೆವಿಲಿಯನ್ನ ಪಕ್ಕದಲ್ಲಿರುವ ಜಾಗದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತು. </p>.<p>ಐದಾರು ದಿನ ವ್ಯಾಪಾರ ನಡೆಸಿ ವ್ಯಾಪಾರಿಗಳು ಅಲ್ಲಿಂದ ಕಾಲ್ಕಿತ್ತರು. ಆದರೆ ಈ ಮುಂಚೆ ಇದ್ದ ಸ್ಥಿತಿ ಮತ್ತು ಇಂದಿನ ಸ್ಥಿತಿಯನ್ನು ನೋಡಿದರೆ ‘ಇಲ್ಲಿ ಏಕಾದರೂ ಪಟಾಕಿ ಅಂಗಡಿಗೆ ಅವಕಾಶ ನೀಡಿದರೊ’ ಎನ್ನುವಂತಿತ್ತು.</p>.<p>ಇಡೀ ಆವರಣ ಕೆಸರು ಗದ್ದೆಯಂತೆ ಆಗಿದೆ. ಅಲ್ಲದೆ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದಿವೆ. ಪೇಪರ್, ಕಸರದ ರಾಶಿಯೂ ಹೆಚ್ಚಿದೆ. ಈ ಸ್ಥಳದಲ್ಲಿ ಆಟಗಳಿಗೆ ನೆಟ್ಟಿದ್ದ ಕಂಬಗಳೂ ಡೊಂಕಿವೆ. </p>.<p>ಇಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರು ಫುಟ್ಬಾಲ್ ಆಡುತ್ತಿದ್ದರು. ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಆಟಕ್ಕೆ ಇದು ಪ್ರಶಸ್ತ ಎನ್ನುವಂತಿತ್ತು. ಆದರೆ ಈಗ ಆ ಜಾಗ ಅಧ್ವಾನ ಎನ್ನುವಂತಿದೆ. ವಾಯು ವಿಹಾರಕ್ಕೆ ಬಂದವರು ಇಲ್ಲಿನ ಸ್ಥಿತಿ ನೋಡಿ ಅಸಮಾಧಾನ ಹೊರಹಾಕಿದರು.</p>.<p>ಈ ಹಿಂದಿನ ವರ್ಷ ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿ ಚಿತ್ರಗಳನ್ನು ತೆಗೆದ ನಂತರ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯಿತು. </p>.<p><strong>‘ಕನಿಷ್ಠ ಪ್ರಜ್ಞೆಯೂ ಇಲ್ಲ’</strong> </p><p>ಕ್ರೀಡಾಂಗಣ ಈ ಹಿಂದಿನಿಂದಲೂ ಅಧ್ವಾನ ಎನ್ನುವಂತೆ ಇದೆ. ಅದರ ನಡುವೆಯೂ ಇಲ್ಲಿ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಇಲ್ಲಿ ಪಟಾಕಿ ಅಂಗಡಿಗಳಿಗೆ ಅವಕಾಶ ನೀಡಬಾರದಿತ್ತು’ ಎಂದು ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ಪಟಾಕಿ ಅಂಗಡಿಗಳನ್ನು ಇಟ್ಟ ಸ್ಥಳ ಕೆಸರು ಗದ್ದೆಯಾಗಿದೆ. ಈ ಮುಂಚಿನ ಸ್ಥಿತಿಗೆ ಬರಬೇಕು ಎಂದರೆ ಅಲ್ಲಿನ ಕೆಸರು ಕಸ ಮಣ್ಣನ್ನು ತೆರವುಗೊಳಿಸಬೇಕು. ಇನ್ನಾದರೂ ಅನ್ಯ ಚಟುವಟಿಕೆಗಳಿಗೆ ಇಲ್ಲಿ ಅವಕಾಶ ನೀಡಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>