ಪ್ರತಿವರ್ಷವೂ ಮಕ್ಕಳಿಗೆ ಅಗತ್ಯವಿರುವಷ್ಟು ನೋಟ್ ಪುಸ್ತಕಗಳನ್ನು ಸಂಸ್ಥೆ ದಾನಿಗಳಿಂದ ಕೊಡಿಸಲಾಗುತ್ತಿದೆ. ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲಾಗುತ್ತಿದೆ
-ಎಚ್.ಎಸ್.ರುದ್ರೇಶಮೂರ್ತಿ ಮುಖ್ಯಶಿಕ್ಷಕ
ಶಾಲೆಯಲ್ಲೆ ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕರಿರುವುದರಿಂದ ಕಲಿಕೆಯಲ್ಲಿ ಕೊರತೆ ಇಲ್ಲ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿದ ನನಗೆ ಈ ಶಾಲೆಯಲ್ಲಿನ ಪರಿಸರ ಕಲಿಕಾ ಪ್ರೋತ್ಸಾಹ ಖುಷಿಕೊಟ್ಟಿದೆ
- ಎಸ್.ಪಿ.ಹರಿಪ್ರಿಯಾ 6ನೇ ತಗರತಿ ವಿದ್ಯಾರ್ಥಿನಿ
ಕಲಿಯಲು ಬೇಕಾದ ಸೌಲಭ್ಯ ಇಲ್ಲಿವೆ. ಶಿಕ್ಷಕರ ಬೋಧನೆ ಮಕ್ಕಳ ಬಗೆಗಿನ ಕಾಳಜಿ ಕಲಿಯಲು ಪ್ರೋತ್ಸಾಹ ಸಿಗುವಂತಿದೆ. ಪ್ರಾಥಮಿಕ ಹಂತದಿಂದ 8ನೇ ತರಗತಿವರೆಗೆ ಉತ್ತಮ ಶಿಕ್ಷಣ ಇಲ್ಲಿ ಸಿಗುವುದರಿಂದ ಕಲಿಯಲು ಇದಕ್ಕಿಂತ ಬೇರೆ ಶಾಲೆ ಬೇಕಿಲ್ಲ