ಸ್ವಾಮೀಜಿ ಕಾರ್ಯ ನಿಮಿತ್ತ ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಪ್ರಯಾಣಿಸುತ್ತಿದ್ದರು. ತಿಪ್ಪಗಾನಹಳ್ಳಿ ಟೋಲ್ ಬಳಿ ಟೋಲ್ ಸಿಬ್ಬಂದಿ ಸ್ವಾಮೀಜಿ ಅವರ ಕಾರು ತಡೆದು ಶುಲ್ಕ ಪಾವತಿಸುವಂತೆ ಕೋರಿದ್ದಾರೆ. ಆದರೆ, ಸ್ವಾಮೀಜಿ ಮತ್ತು ಟೋಲ್ ಸಿಬ್ಬಂದಿ ನಡುವೆ ಕೆಲಕಾಲ ಚರ್ಚೆ ನಡೆದಿದೆ. ಕೂಡಲೇ ಸ್ವಾಮೀಜಿ ಕಾರಿನಿಂದ ಇಳಿದು ದಿಗಂಬರರಾಗಿ ರಸ್ತೆಯಲ್ಲೆ ಪ್ರತಿಭಟಿಸಿದರು.