ಗಂಗಾಧರಪ್ಪ, ರಾಜ, ಅನಿಲ್ ಬಂಧಿತರು. ಗಂಗಾಧರಪ್ಪ ಗ್ರಾಮದಲ್ಲಿ ಕುಲುಮೆ ನಡೆಸುತ್ತಿದ್ದು, ಅನಿಲ್ ಮತ್ತು ರಾಜ ತಮ್ಮ ಮಾವ ಶಂಕರ್ ಬಳಿ ಇದ್ದ ನಾಡಬಂದೂಕನ್ನು ರಿಪೇರಿ ಮಾಡಿಸಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಡಿವೈಎಸ್ಪಿ ರವಿಶಂಕರ್, ನಂದಿ ಪೊಲೀಸ್ ಠಾಣೆ ಪಿಎಸ್ಐ ಎಂ.ಬಿ.ಪಾಟೀಲ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.