<p><strong>ಚಿಂತಾಮಣಿ:</strong> ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ನಾಟಿ ಮಾಡಲಾಗಿರುವ ಟೊಮೆಟೊ ಬೆಳೆ ಹೆಚ್ಚಿನ ತಾಪಮಾನದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು, ಇದರ ಜತೆ ಜೊತೆಗೆ ಎಲೆ ಮುದುಡು ನಂಜು ರೋಗ ಮತ್ತು ಸೊರಗು ರೋಗ ಕಾಟದಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>ಈಗಾಗಲೇ ಕೆಲ ತೋಟಗಳಲ್ಲಿ ಈಗಾಗಲೇ ರೋಗ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗುವ ಸಾದ್ಯತೆಗಳಿವೆ.</p>.<p>ಹೀಗಾಗಿ ರೈತರು ಉತ್ತಮ ಇಳುವರಿ ಪಡೆಯಲು ಹಾಗು ಎಲೆ ಮುದುಡು ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಮಗ್ರ ಹತೋಟಿ ಕ್ರಮ ಅನುಸರಿಸಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬಿ.ಸ್ವಾತಿ ಸಲಹೆ ನೀಡಿದ್ದಾರೆ.</p>.<h2>ರೋಗ ನಿರ್ವಹಣೆಗೆ ಕ್ರಮ</h2>.<p>ಪ್ರತಿ ಎಕರೆ ಭೂಮಿಗೆ 15 ಟನ್ ಕೊಟ್ಟಿಗೆ ಗೊಬ್ಬರವನ್ನು 100 ಕೆ.ಜಿ. ಬೇವಿನ ಹಿಂಡಿ, 5 ಕೆ.ಜಿ. ಟ್ರೈಕೋಡಮಾರ್ ಮತ್ತು 5 ಕೆ.ಜಿ. ಸುಡೋಮೊನಾಸ್ ನಿಂದ ಪುಷ್ಟೀಕರಿಸಿ ಭೂಮಿಗೆ ಹಾಕಬೇಕು.</p>.<p>ರೋಗ ನಿರೋಧಕ ಶಕ್ತಿ ಹೊಂದಿರುವ ಹೈಬ್ರಿಡ್ ಟೊಮೆಟೊ ತಳಿ ನಂದಿ, ವೈಭವ್, ಸಂಕ್ರಾಂತಿ, ಅಭಿಜಿತ್ ಮತ್ತು ಅರ್ಕಾ ರಕ್ಷಕ್ ಅನ್ನು ರೈತರು ಆಯ್ಕೆ ಮಾಡಿಕೊಳ್ಳಬೇಕು.</p>.<p>ಸಸಿಗಳನ್ನು 40 ಮೈಕ್ರಾನ್ ಮೆಷ್ ನೈಲಾನ್ ಪರದೆ ಬಳಸಿರುವ ನರ್ಸರಿಗಳಿಂದ ಪಡೆದು ನಾಟಿ ಮಾಡಬೇಕು. ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಬೇಕು. </p>.<p>ಟೊಮೊಟೊ ಸಸಿ ನಾಟಿ ಮಾಡುವ 15 ದಿನ ಮುನ್ನ 4–5 ಸಾಲು ಜೋಳವನ್ನು ತೋಟದ ಸುತ್ತಲು ತಡೆ ಬೆಳೆಯಾಗಿ ಬೆಳೆಯಬೇಕು. ಇದರಿಂದ ಬಿಳಿ ನೊಣ ಹರಡುವುದನ್ನು ತಡೆಯಬಹುದು.</p>.<p>ಸಸಿಗಳನ್ನು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ದ್ರಾವಣದಲ್ಲಿ (0.3 ಮಿ.ಲೀ /ಒಂದು ಲೀಟರ್ ನೀರಿಗೆ) ಅದ್ದಿ ನಾಟಿ ಮಾಡಬೇಕು. ಆರಂಭಿಕ ಹಂತದಲ್ಲಿ ರೋಗ ಪೀಡಿತ ಅಂತಹ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.</p>.<p>ಪ್ರತಿ ಎಕರೆಗೆ 10-15 ಹಳದಿ ಅಂಟು ಪಟ್ಟಿಗಳನ್ನು ಗಿಡಕ್ಕಿಂತ ಒಂದು ಅಡಿ ಎತ್ತರದಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಕಟ್ಟಬೇಕು. 15 ದಿನಗಳ ಅಂತರದಲ್ಲಿ ಅಂಟು ಪಟ್ಟಿ ಬದಲಾಯಿಸಬೇಕು.</p>.<p>ನಾಟಿ ಮಾಡಿದ 30, 45 ಮತ್ತು 60 ದಿನಗಳ ನಂತರ ಸಿವೀಡ್ ಎಕ್ಸಟ್ರಾಕ್ಟ್ ಅನ್ನು 2.0 ಮಿ.ಲೀ ಲೀಟರ್ ನಂತೆ ಸಿಂಪರಣೆ ಮಾಡಬೇಕು. ಇದರಿಂದ ಗಿಡದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ.</p>.<p>ಬಿಳಿನೋಣ ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ 0.4 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾಂ ಥಿಯಾಮೆಥಾಕ್ಸಾಮ್ 25 ಡಬ್ಲ್ಯು.ಜಿ. ಅಥವಾ 1.5 ಮಿ.ಲೀ ಫಿಪ್ರೋನಿಲ್ ಶೇ 5 ಎಸ್.ಎಲ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಣೆಮಾಡಬೇಕು.</p>.<p>ಅವಶ್ಯಕತೆಗೆ ಅನುಗುಣವಾಗಿ ಬೇವಿನ ಎಣ್ಣೆ ಆಧಾರಿತ ಕೀಟನಾಶಕಗಳೊಂದಿಗೆ 8-10 ದಿನಗಳಿಗೊಮ್ಮೆ ಕೀಟನಾಶಕ ಬದಲಿಸಿ ಸಿಂಪರಣೆ ಮಾಡಬೇಕು.</p>.<p> ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರದ ವಿಜ್ಞಾನಿ ಬಿ.ಸ್ವಾತಿ- 9901281402 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ನಾಟಿ ಮಾಡಲಾಗಿರುವ ಟೊಮೆಟೊ ಬೆಳೆ ಹೆಚ್ಚಿನ ತಾಪಮಾನದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು, ಇದರ ಜತೆ ಜೊತೆಗೆ ಎಲೆ ಮುದುಡು ನಂಜು ರೋಗ ಮತ್ತು ಸೊರಗು ರೋಗ ಕಾಟದಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>ಈಗಾಗಲೇ ಕೆಲ ತೋಟಗಳಲ್ಲಿ ಈಗಾಗಲೇ ರೋಗ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗುವ ಸಾದ್ಯತೆಗಳಿವೆ.</p>.<p>ಹೀಗಾಗಿ ರೈತರು ಉತ್ತಮ ಇಳುವರಿ ಪಡೆಯಲು ಹಾಗು ಎಲೆ ಮುದುಡು ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಮಗ್ರ ಹತೋಟಿ ಕ್ರಮ ಅನುಸರಿಸಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬಿ.ಸ್ವಾತಿ ಸಲಹೆ ನೀಡಿದ್ದಾರೆ.</p>.<h2>ರೋಗ ನಿರ್ವಹಣೆಗೆ ಕ್ರಮ</h2>.<p>ಪ್ರತಿ ಎಕರೆ ಭೂಮಿಗೆ 15 ಟನ್ ಕೊಟ್ಟಿಗೆ ಗೊಬ್ಬರವನ್ನು 100 ಕೆ.ಜಿ. ಬೇವಿನ ಹಿಂಡಿ, 5 ಕೆ.ಜಿ. ಟ್ರೈಕೋಡಮಾರ್ ಮತ್ತು 5 ಕೆ.ಜಿ. ಸುಡೋಮೊನಾಸ್ ನಿಂದ ಪುಷ್ಟೀಕರಿಸಿ ಭೂಮಿಗೆ ಹಾಕಬೇಕು.</p>.<p>ರೋಗ ನಿರೋಧಕ ಶಕ್ತಿ ಹೊಂದಿರುವ ಹೈಬ್ರಿಡ್ ಟೊಮೆಟೊ ತಳಿ ನಂದಿ, ವೈಭವ್, ಸಂಕ್ರಾಂತಿ, ಅಭಿಜಿತ್ ಮತ್ತು ಅರ್ಕಾ ರಕ್ಷಕ್ ಅನ್ನು ರೈತರು ಆಯ್ಕೆ ಮಾಡಿಕೊಳ್ಳಬೇಕು.</p>.<p>ಸಸಿಗಳನ್ನು 40 ಮೈಕ್ರಾನ್ ಮೆಷ್ ನೈಲಾನ್ ಪರದೆ ಬಳಸಿರುವ ನರ್ಸರಿಗಳಿಂದ ಪಡೆದು ನಾಟಿ ಮಾಡಬೇಕು. ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಬೇಕು. </p>.<p>ಟೊಮೊಟೊ ಸಸಿ ನಾಟಿ ಮಾಡುವ 15 ದಿನ ಮುನ್ನ 4–5 ಸಾಲು ಜೋಳವನ್ನು ತೋಟದ ಸುತ್ತಲು ತಡೆ ಬೆಳೆಯಾಗಿ ಬೆಳೆಯಬೇಕು. ಇದರಿಂದ ಬಿಳಿ ನೊಣ ಹರಡುವುದನ್ನು ತಡೆಯಬಹುದು.</p>.<p>ಸಸಿಗಳನ್ನು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ದ್ರಾವಣದಲ್ಲಿ (0.3 ಮಿ.ಲೀ /ಒಂದು ಲೀಟರ್ ನೀರಿಗೆ) ಅದ್ದಿ ನಾಟಿ ಮಾಡಬೇಕು. ಆರಂಭಿಕ ಹಂತದಲ್ಲಿ ರೋಗ ಪೀಡಿತ ಅಂತಹ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.</p>.<p>ಪ್ರತಿ ಎಕರೆಗೆ 10-15 ಹಳದಿ ಅಂಟು ಪಟ್ಟಿಗಳನ್ನು ಗಿಡಕ್ಕಿಂತ ಒಂದು ಅಡಿ ಎತ್ತರದಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಕಟ್ಟಬೇಕು. 15 ದಿನಗಳ ಅಂತರದಲ್ಲಿ ಅಂಟು ಪಟ್ಟಿ ಬದಲಾಯಿಸಬೇಕು.</p>.<p>ನಾಟಿ ಮಾಡಿದ 30, 45 ಮತ್ತು 60 ದಿನಗಳ ನಂತರ ಸಿವೀಡ್ ಎಕ್ಸಟ್ರಾಕ್ಟ್ ಅನ್ನು 2.0 ಮಿ.ಲೀ ಲೀಟರ್ ನಂತೆ ಸಿಂಪರಣೆ ಮಾಡಬೇಕು. ಇದರಿಂದ ಗಿಡದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ.</p>.<p>ಬಿಳಿನೋಣ ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ 0.4 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾಂ ಥಿಯಾಮೆಥಾಕ್ಸಾಮ್ 25 ಡಬ್ಲ್ಯು.ಜಿ. ಅಥವಾ 1.5 ಮಿ.ಲೀ ಫಿಪ್ರೋನಿಲ್ ಶೇ 5 ಎಸ್.ಎಲ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಣೆಮಾಡಬೇಕು.</p>.<p>ಅವಶ್ಯಕತೆಗೆ ಅನುಗುಣವಾಗಿ ಬೇವಿನ ಎಣ್ಣೆ ಆಧಾರಿತ ಕೀಟನಾಶಕಗಳೊಂದಿಗೆ 8-10 ದಿನಗಳಿಗೊಮ್ಮೆ ಕೀಟನಾಶಕ ಬದಲಿಸಿ ಸಿಂಪರಣೆ ಮಾಡಬೇಕು.</p>.<p> ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರದ ವಿಜ್ಞಾನಿ ಬಿ.ಸ್ವಾತಿ- 9901281402 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>