ಚಿಕ್ಕಮಗಳೂರು: ‘ಭಾರತ್ ಜೋಡೊ ಯಾತ್ರೆಯು ಕಾಂಗ್ರೆಸ್ ತೊಡೊ ಯಾತ್ರೆ ಆಗುತ್ತಿದೆ. ಯಾತ್ರೆ ಶುರುವಾದ ದಿನದಿಂದ ಆ ಪಕ್ಷ ಕುಗ್ಗುತ್ತಿದೆ’ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ರಾಜಸ್ಥಾನ ಮುಖ್ಯಮಂತ್ರಿ ಕೈಕೊಟ್ಟಿದ್ದಾರೆ, 95 ಶಾಸಕರು ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು ಎಂಬ ನಿಟ್ಟಿನಲ್ಲೂ ಗುಂಪುಗಾರಿಕೆ ಬೆಳೆಯುತ್ತಿದೆ’ ಎಂದು ಲೇವಡಿ ಮಾಡಿದರು.
‘ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪೇ–ಸಿಎಂ ಷಡ್ಯಂತ್ರದಲ್ಲಿ ತೊಡಗಿದೆ. ಆ ತಂತ್ರ ಫಲಿಸಲ್ಲ’ ಎಂದು ಉತ್ತರಿಸಿದರು.