ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸಿಂಧಿಗೆರೆ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೊಳಂಬ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ. ಎಸ್.ಎನ್.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ನೊಳಂಬ ಉಪಸಮಿತಿ ಅಧ್ಯಕ್ಷ ಯತಿರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ಭೈರೇಗೌಡ ಆಶಯ ನುಡಿಗಳನ್ನಾಡಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಕಾಮನಕೆರೆ ಶಶಿಧರ್, ಜಿ.ವಿ.ಬಸವರಾಜು, ನೊಳಂಬ ಕೇಂದ್ರ ಸಮಿತಿ ಉಪಾಧ್ಯಕ್ಷ ಸಾದರಳ್ಳಿ ನಟರಾಜು, ಜಂಟಿ ಕಾರ್ಯದರ್ಶಿಗಳಾದ ಒ.ಎಸ್.ಸಿದ್ದರಾಮೇಗೌಡ, ಡಾ.ಎಸ್.ದಿನೇಶ್, ಎನ್.ಬೊಮ್ಮಣ್ಣ, ಕಪಿನೇಗೌಡ, ಲಿಂಗರಾಜು, ಶಿಕ್ಷಕ ಮಲ್ಲಿಕಾರ್ಜುನ್, ಬಿ.ಆರ್.ಭುಜೇಂದ್ರ, ಮೌನೇಶ್, ಮುಖಂಡ ವಿಜಯ ಕುಮಾರ್, ಕೆ.ಬಿ.ಬಸವರಾಜಪ್ಪ ಇದ್ದರು. ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳನ್ನು ಮತ್ತು ನಿವೃತ್ತ ನೌಕರರನ್ನು ಗೌರವಿಸಲಾಯಿತು.