<p><strong>ಕಡೂರು</strong>: ಸಿಆರ್ಪಿಎಫ್ನಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಮತಿಘಟ್ಟದ ಎಂ.ಎನ್.ಮಹೇಶ್ ಅವರನ್ನು ಚಿಂತಕ ಉಮೇಶ್ ಮತ್ತಿತರರು ಕಡೂರು ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿದರು.</p>.<p>ಸಿಆರ್ಪಿಎಫ್ನಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಮತಿಘಟ್ಟದ ಎಂ.ಎನ್.ಮಹೇಶ್ ಅವರನ್ನು ಚಿಂತಕ ಉಮೇಶ್ ಮತ್ತಿತರರು ಆತ್ಮೀಯವಾಗಿ ಸನ್ಮಾನಿಸಿದರು.</p>.<p>ಚಿಂತಕ ಉಮೇಶ್ ಮಾತನಾಡಿ, ‘ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರಿಗೆ ಪ್ರಥಮ ಗೌರವ ಸಲ್ಲಬೇಕು. ಆ ನಿಟ್ಟಿನಲ್ಲಿ ಚೆನೈನಲ್ಲಿ ಸಿಆರ್ಪಿಎಫ್ನಲ್ಲಿ 77ನೇ ಬೆಟಾಲಿಯನ್ನ ಇನ್ಸ್ಪೆಕ್ಟರ್ ಆಗಿ 40 ವರ್ಷ ಸೇವೆ ಸಲ್ಲಿಸಿ ತಾಲ್ಲೂಕಿಗೆ ಕೀರ್ತಿ ತಂದಿರುವ ಮಹೇಶ್ ಅವರು ಅಭಿನಂದನೀಯರು’ ಎಂದರು.</p>.<p>ಮಹೇಶ್ ಅವರನ್ನು ಪತ್ನಿ ಮೋಹನ್ ಕುಮಾರಿ ಆರತಿ ಬೆಳಗಿ ಸ್ವಾಗತಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಚೀರನಹಳ್ಳಿ ಬಸವರಾಜು, ಅರೆಸೇನಾಪಡೆ ನಿವೃತ್ತ ಯೋಧರ ಸಂಘದ ಪದಾಧಿಕಾರಿಗಳು, ಬಳ್ಳೆಕೆರೆ ಬಸವರಾಜು, ಮತಿಘಟ್ಟ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು</strong>: ಸಿಆರ್ಪಿಎಫ್ನಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಮತಿಘಟ್ಟದ ಎಂ.ಎನ್.ಮಹೇಶ್ ಅವರನ್ನು ಚಿಂತಕ ಉಮೇಶ್ ಮತ್ತಿತರರು ಕಡೂರು ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿದರು.</p>.<p>ಸಿಆರ್ಪಿಎಫ್ನಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಮತಿಘಟ್ಟದ ಎಂ.ಎನ್.ಮಹೇಶ್ ಅವರನ್ನು ಚಿಂತಕ ಉಮೇಶ್ ಮತ್ತಿತರರು ಆತ್ಮೀಯವಾಗಿ ಸನ್ಮಾನಿಸಿದರು.</p>.<p>ಚಿಂತಕ ಉಮೇಶ್ ಮಾತನಾಡಿ, ‘ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರಿಗೆ ಪ್ರಥಮ ಗೌರವ ಸಲ್ಲಬೇಕು. ಆ ನಿಟ್ಟಿನಲ್ಲಿ ಚೆನೈನಲ್ಲಿ ಸಿಆರ್ಪಿಎಫ್ನಲ್ಲಿ 77ನೇ ಬೆಟಾಲಿಯನ್ನ ಇನ್ಸ್ಪೆಕ್ಟರ್ ಆಗಿ 40 ವರ್ಷ ಸೇವೆ ಸಲ್ಲಿಸಿ ತಾಲ್ಲೂಕಿಗೆ ಕೀರ್ತಿ ತಂದಿರುವ ಮಹೇಶ್ ಅವರು ಅಭಿನಂದನೀಯರು’ ಎಂದರು.</p>.<p>ಮಹೇಶ್ ಅವರನ್ನು ಪತ್ನಿ ಮೋಹನ್ ಕುಮಾರಿ ಆರತಿ ಬೆಳಗಿ ಸ್ವಾಗತಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಚೀರನಹಳ್ಳಿ ಬಸವರಾಜು, ಅರೆಸೇನಾಪಡೆ ನಿವೃತ್ತ ಯೋಧರ ಸಂಘದ ಪದಾಧಿಕಾರಿಗಳು, ಬಳ್ಳೆಕೆರೆ ಬಸವರಾಜು, ಮತಿಘಟ್ಟ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>