<p><strong>ಕಳಸ: </strong>ಇಲ್ಲಿಗೆ ಸಮೀಪದ ಎಳನೀರು, ಬಡಮನೆ, ಸಂಸೆ, ಮೈದಾಡಿ, ಮರಸಣಿಗೆ ಗ್ರಾಮಗಳ ತೋಟಗಳಲ್ಲಿ 2 ವಾರಗಳಿಂದ ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆ ಕಾಣಿಸಿಕೊಂಡಿದೆ. ಮರದ ಎಲ್ಲ ಎಲೆಗಳು ಸೊರಗಿ, ತೊಂಡೆಯ ಕಡೆಗೆ ಬಾಗುತ್ತಿವೆ.ಇದರಿಂದ ಇಡೀ ತೋಟವೇ ಸೊರಗಿದ ಹಾಗೆ ಕಾಣುತ್ತಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.</p>.<p>ಕಳೆದ ವರ್ಷ ಮರಸಣಿಗೆ ಸಮೀಪದ ಕೆಲ ತೋಟಗಳಲ್ಲಿ ಇದೇ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಈ ಬಾರಿ ಅಲ್ಲಿಂದ 10-15 ಕಿ.ಮೀ. ದೂರದ ಎಳನೀರು, ಬಡಮನೆ ಮತ್ತು ಸಂಸೆ ಪ್ರದೇಶದ ಸುಮಾರು 100 ಎಕರೆ ತೋಟಗಳಲ್ಲಿ ಈ ರೋಗ ಬಾಧೆ ಕಂಡು ಬಂದಿದೆ. ವಿಚಿತ್ರ ಎಂದರೆ ಒಂದೆರಡು ದಿನಗಳಲ್ಲೆ ಈ ರೋಗ ಲಕ್ಷಣ ಇಡೀ ತೋಟಕ್ಕೆ ವ್ಯಾಪಿಸುತ್ತಿದೆ. ಕೆಲವು ತೋಟಗಳಲ್ಲಿ ಅಡಿಕೆ ಫಸಲು ಕೂಡ ಕೆಂಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರುತ್ತಿವೆ.</p>.<p>‘ಅಡಿಕೆ ಫಸಲು ಕೊಯ್ಲು ಆರಂಭವಾಗುವ ಈ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿಯಾಗಿ ವ್ಯಾಪಿಸುತ್ತಿರುವ ಈ ರೋಗದ ಬಗ್ಗೆ ಇಡೀ ತಾಲ್ಲೂಕಿನ ಬೆಳೆಗಾರರ ಸಮೂಹದಲ್ಲಿ ಭಯ ಆವರಿಸಿದೆ. ಈ ವರ್ಷ ಮೂರು ಬಾರಿ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿ ಫಸಲು ಉಳಿಸಿಕೊಂಡಿದ್ದೇವೆ. ಗೊನೆ ತೆಗೆಯುವ ಸಮಯದಲ್ಲಿ ಕಂಡು ಬಂದಿರುವ ಈ ವಿಚಿತ್ರ ರೋಗ ನಮ್ಮ ನೆಮ್ಮದಿ ಕೆಡಿಸುತ್ತಿದೆ’ ಎಂದು ಮರಸಣಿಗೆ ಸಮೀಪದ ಮಕ್ಕಿಮನೆಯ ಬೆಳೆಗಾರ ವಜ್ರಕುಮಾರ್ ಹೇಳುತ್ತಾರೆ.</p>.<p>ಈ ರೋಗವು ಅತ್ಯಂತ ವಿಕೋಪಕ್ಕೆ ತಲುಪಿರುವ ಬಡಮನೆಯ ತೋಟದ ರಾಜೇಂದ್ರ ಅತ್ಯಂತ ಹತಾಶರಾಗಿದ್ದಾರೆ. ‘ಒಂದು ವಾರದಲ್ಲಿ ರೋಗ ಹರಡುತ್ತಿರುವ ವೇಗ ನೋಡಿದರೆ ನಾವು ಈ ವರ್ಷ ಗೊನೆ ತೆಗೆಯುವುದೇ ಅನುಮಾನ ಅನಿಸುತ್ತಿದೆ. ಮೊದಲ ಗೊನೆಯ ಜೊತೆಗೆ ಮೂರನೇ ಮತ್ತು ನಾಲ್ಕನೇ ಗೊನೆಗೂ ರೋಗ ತಗುಲಿ ಕಾಯಿಗಳು ನೆಲಕ್ಕೆ ಉದುರುತ್ತಿವೆ’ ಎಂದು ಬೇಸರದಿಂದ ಹೇಳುತ್ತಾರೆ.</p>.<p>ಅವರ ತೋಟದಲ್ಲಿ ದೊಡ್ಡ ಮತ್ತು ಸಣ್ಣ ಮರಗಳ ಜೊತೆಗೆ ಪಾತಿಯಲ್ಲಿ ನೆಡಲು ಸಜ್ಜಾಗಿದ್ದ ಎಳೆಯ ಅಡಿಕೆ ಸಸಿಗಳಿಗೂ ಇದೇ ರೋಗ ತಗುಲಿರುವುದು ಅದರ ಗಂಭೀರತೆಗೆ ಸಾಕ್ಷಿ ಆಗಿದೆ. ಬಡಮನೆಯಿಂದ ಸಂಸೆ ಕಡೆಗೂ ಕಳೆದ ವಾರದಿಂದ ವ್ಯಾಪಿಸುತ್ತಿರುವ ಈ ರೋಗ ಕಾರ್ಮಣ್ಣಿನ ಧರಣೇಂದ್ರ ಮತ್ತು ಪ್ರಮೋದ್ ಅವರ ತೋಟಕ್ಕೂ ಹರಡಿದೆ.</p>.<p>‘ಈ ರೋಗ ಹರಡುವ ವೇಗ ನೋಡಿದರೆ ಇನ್ನು ಅಡಿಕೆ ಬೆಳೆಗಾರರು ಉಳಿಯುವುದೇ ಕಷ್ಟ. ಸರ್ಕಾರ ಈ ರೋಗಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ಔಷಧಿ ಸಲಹೆ ನೀಡಬೇಕು. ಇಲ್ಲದಿದ್ದರೆ ನಾವೆಲ್ಲರೂ ಆರ್ಥಿಕ ಸಂಕಟಕ್ಕೆ ಸಿಲುಕುತ್ತೇವೆ’ ಎಂದು ಬೆಳೆಗಾರ ಕೆ.ಜೆ.ಧರಣೇಂದ್ರ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ: </strong>ಇಲ್ಲಿಗೆ ಸಮೀಪದ ಎಳನೀರು, ಬಡಮನೆ, ಸಂಸೆ, ಮೈದಾಡಿ, ಮರಸಣಿಗೆ ಗ್ರಾಮಗಳ ತೋಟಗಳಲ್ಲಿ 2 ವಾರಗಳಿಂದ ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆ ಕಾಣಿಸಿಕೊಂಡಿದೆ. ಮರದ ಎಲ್ಲ ಎಲೆಗಳು ಸೊರಗಿ, ತೊಂಡೆಯ ಕಡೆಗೆ ಬಾಗುತ್ತಿವೆ.ಇದರಿಂದ ಇಡೀ ತೋಟವೇ ಸೊರಗಿದ ಹಾಗೆ ಕಾಣುತ್ತಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.</p>.<p>ಕಳೆದ ವರ್ಷ ಮರಸಣಿಗೆ ಸಮೀಪದ ಕೆಲ ತೋಟಗಳಲ್ಲಿ ಇದೇ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಈ ಬಾರಿ ಅಲ್ಲಿಂದ 10-15 ಕಿ.ಮೀ. ದೂರದ ಎಳನೀರು, ಬಡಮನೆ ಮತ್ತು ಸಂಸೆ ಪ್ರದೇಶದ ಸುಮಾರು 100 ಎಕರೆ ತೋಟಗಳಲ್ಲಿ ಈ ರೋಗ ಬಾಧೆ ಕಂಡು ಬಂದಿದೆ. ವಿಚಿತ್ರ ಎಂದರೆ ಒಂದೆರಡು ದಿನಗಳಲ್ಲೆ ಈ ರೋಗ ಲಕ್ಷಣ ಇಡೀ ತೋಟಕ್ಕೆ ವ್ಯಾಪಿಸುತ್ತಿದೆ. ಕೆಲವು ತೋಟಗಳಲ್ಲಿ ಅಡಿಕೆ ಫಸಲು ಕೂಡ ಕೆಂಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರುತ್ತಿವೆ.</p>.<p>‘ಅಡಿಕೆ ಫಸಲು ಕೊಯ್ಲು ಆರಂಭವಾಗುವ ಈ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿಯಾಗಿ ವ್ಯಾಪಿಸುತ್ತಿರುವ ಈ ರೋಗದ ಬಗ್ಗೆ ಇಡೀ ತಾಲ್ಲೂಕಿನ ಬೆಳೆಗಾರರ ಸಮೂಹದಲ್ಲಿ ಭಯ ಆವರಿಸಿದೆ. ಈ ವರ್ಷ ಮೂರು ಬಾರಿ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿ ಫಸಲು ಉಳಿಸಿಕೊಂಡಿದ್ದೇವೆ. ಗೊನೆ ತೆಗೆಯುವ ಸಮಯದಲ್ಲಿ ಕಂಡು ಬಂದಿರುವ ಈ ವಿಚಿತ್ರ ರೋಗ ನಮ್ಮ ನೆಮ್ಮದಿ ಕೆಡಿಸುತ್ತಿದೆ’ ಎಂದು ಮರಸಣಿಗೆ ಸಮೀಪದ ಮಕ್ಕಿಮನೆಯ ಬೆಳೆಗಾರ ವಜ್ರಕುಮಾರ್ ಹೇಳುತ್ತಾರೆ.</p>.<p>ಈ ರೋಗವು ಅತ್ಯಂತ ವಿಕೋಪಕ್ಕೆ ತಲುಪಿರುವ ಬಡಮನೆಯ ತೋಟದ ರಾಜೇಂದ್ರ ಅತ್ಯಂತ ಹತಾಶರಾಗಿದ್ದಾರೆ. ‘ಒಂದು ವಾರದಲ್ಲಿ ರೋಗ ಹರಡುತ್ತಿರುವ ವೇಗ ನೋಡಿದರೆ ನಾವು ಈ ವರ್ಷ ಗೊನೆ ತೆಗೆಯುವುದೇ ಅನುಮಾನ ಅನಿಸುತ್ತಿದೆ. ಮೊದಲ ಗೊನೆಯ ಜೊತೆಗೆ ಮೂರನೇ ಮತ್ತು ನಾಲ್ಕನೇ ಗೊನೆಗೂ ರೋಗ ತಗುಲಿ ಕಾಯಿಗಳು ನೆಲಕ್ಕೆ ಉದುರುತ್ತಿವೆ’ ಎಂದು ಬೇಸರದಿಂದ ಹೇಳುತ್ತಾರೆ.</p>.<p>ಅವರ ತೋಟದಲ್ಲಿ ದೊಡ್ಡ ಮತ್ತು ಸಣ್ಣ ಮರಗಳ ಜೊತೆಗೆ ಪಾತಿಯಲ್ಲಿ ನೆಡಲು ಸಜ್ಜಾಗಿದ್ದ ಎಳೆಯ ಅಡಿಕೆ ಸಸಿಗಳಿಗೂ ಇದೇ ರೋಗ ತಗುಲಿರುವುದು ಅದರ ಗಂಭೀರತೆಗೆ ಸಾಕ್ಷಿ ಆಗಿದೆ. ಬಡಮನೆಯಿಂದ ಸಂಸೆ ಕಡೆಗೂ ಕಳೆದ ವಾರದಿಂದ ವ್ಯಾಪಿಸುತ್ತಿರುವ ಈ ರೋಗ ಕಾರ್ಮಣ್ಣಿನ ಧರಣೇಂದ್ರ ಮತ್ತು ಪ್ರಮೋದ್ ಅವರ ತೋಟಕ್ಕೂ ಹರಡಿದೆ.</p>.<p>‘ಈ ರೋಗ ಹರಡುವ ವೇಗ ನೋಡಿದರೆ ಇನ್ನು ಅಡಿಕೆ ಬೆಳೆಗಾರರು ಉಳಿಯುವುದೇ ಕಷ್ಟ. ಸರ್ಕಾರ ಈ ರೋಗಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ಔಷಧಿ ಸಲಹೆ ನೀಡಬೇಕು. ಇಲ್ಲದಿದ್ದರೆ ನಾವೆಲ್ಲರೂ ಆರ್ಥಿಕ ಸಂಕಟಕ್ಕೆ ಸಿಲುಕುತ್ತೇವೆ’ ಎಂದು ಬೆಳೆಗಾರ ಕೆ.ಜೆ.ಧರಣೇಂದ್ರ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>